ಬಾಟಲಿಯಲ್ಲಿ ಅರಳಿದ ಕಲೆ 


Team Udayavani, Jul 14, 2018, 3:39 PM IST

3-aaa.jpg

 ಚಿತ್ತಾರ ಎಂದರೆ ಅದನ್ನು ಗೋಡೆಯ ಮೇಲೆ ಮಾತ್ರ ಬಿಡಿಸಬೇಕಿಲ್ಲ. ಬಾಟಲಿಯ ಮೇಲೂ ಮೂಡಿಸಬಹುದು. ಈ ಕಲೆಯನ್ನು ಕರಗತ ಮಾಡಿಕೊಂಡಿರುವ ಯುವಕನ ಹೆಸರು ನಾರಾಯಣ ತೊರವಿ. ಇವರು ಮೂಲತಃ ವಿಜಯಪುರ ಜಿಲ್ಲೆಯ ತೊರವಿ ಗ್ರಾಮದವರು. ನಾಲ್ಕನೇ ತರಗತಿಯಲ್ಲಿಯೇ ಚಿತ್ತಾರದ ಕಲೆಯೆಡೆಗೆ ಆಕರ್ಷಿತರಾದವರು. ನಿತ್ಯವೂ ಬೆಳಗ್ಗೆ ಮನೆ ಮುಂದೆ ಅಮ್ಮ ಬಿಡಿಸುತ್ತಿದ್ದ ರಂಗೋಲಿಯಿಂದ ಸ್ಫೂರ್ತಿ ಪಡೆದ ನಾರಾಯಣ, ಪರಿಚಿತರ ಮನೆಗೆ ಹೋದಾಗ ಅಲ್ಲಿ ಕಣ್ಣಿಗೆ ಬೀಳುವ ಚಿತ್ತಾರದ ಕಲೆಗಳನ್ನು ಕಣ್ತುಂಬಿಕೊಂಡು ಮನೆಗೆ ವಾಪಸಾಗುತ್ತಿದ್ದರು. ಮನೆಯಲ್ಲಿ ಅದೇ ರೀತಿ ಚಿತ್ರ ಮೂಡಿಸಲು ಮುಂದಾಗುತ್ತಿದ್ದರು. ವಿಶೇಷವಾಗಿ, ಯಾರಿಗೂ ಬೇಡವಾದ ವಸ್ತುಗಳೆಂದರೆ ನಾರಾಯಣನಿಗೆ ಎಲ್ಲಿಲ್ಲದ ಪ್ರೀತಿ. ಬೇಡವಾದ ವಸ್ತುಗಳನ್ನು ಬೇಕು ಅಂತಲೇ ಸಂಗ್ರಹಿಸಿ, ಮನೆಯಲ್ಲಿ ಬೈಸಿಕೊಂಡಿದ್ದಕ್ಕೆ ಲೆಕ್ಕವೇ ಇಲ್ಲ. ಹರಿದ ಬಟ್ಟೆಯಾಗಲೀ, ಖಾಲಿ ಬಾಟಲಿಯಾಗಲೀ, ಸುಂದರ ಚಿತ್ರವಿರುವ ರದ್ದಿಯಾಗಲೀ ಎಲ್ಲವನ್ನೂ ಆಯ್ದುಕೊಂಡು ತಮ್ಮ ಕೋಣೆಗೆ ತುಂಬಿಸಿಕೊಳ್ಳುವ ಉದಾರತೆ ಇವರದ್ದು.

ಬಿಎಫ್ಎ, ಎಂ.ಎ. ಟೂರಿಸಂ ಓದಿಕೊಂಡಿರುವ ಇವರು, ಶಾಲಾ-ಕಾಲೇಜು ದಿನಗಳಲ್ಲೇ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಕಷ್ಟು ಬಹುಮಾನಗಳನ್ನು ಪಡೆದಿದ್ದಾರೆ. ಮನೆ ಮುಂದೆ ಸಸಿ ಬೆಳೆಸಲು ಜಾಗ ಇಲ್ಲದವರು ಬಾಟಲಿಗೆ ನೀರು ಹಾಕಿ ಸಸಿ ಬೆಳೆಸುವುದನ್ನ ನೋಡಿದ ನಾರಾಯಣ, ಖಾಲಿ ಬಾಟಲಿಗೆ ಏಕೆ ಸೌಂದರ್ಯ ತುಂಬಬಾರದು ಎಂದು ಆಲೋಚಿಸಿ, ಗೆಳೆಯರ ಬಳಿ ಖಾಲಿ ಬಾಟಲಿ ಕೇಳಿದಾಗ ಗೇಲಿ ಮಾಡಿದವರೇ ಹೆಚ್ಚು.

ಯಾರು ಏನೇ ಅಂದರೂ, ಆಡಿಕೊಂಡರೂ, ಬೇಸರಿಸದೆ, ಅಗತ್ಯವಿದ್ದಷ್ಟು ಬಾಟಲಿಗಳನ್ನು ಹೇಗೋ ಸಂಗ್ರಹಿಸಿ ಸೆಣಬು, ಅಂಟು, ಗಾಜಿನ ಚೂರು, ಬೆಂಡು, ಇತರ ಸಾಮಗ್ರಿಗಳಿಂದ ಖಾಲಿ ಬಾಟಲಿಗೆ ಕಲೆಯ ಮೂಲಕ ಹೊಸ ರೂಪ ಕೊಟ್ಟಿದ್ದಾರೆ. ಈಗ ಇವರ ಮನೆಯಲ್ಲಿ ಹತ್ತಾರು ಖಾಲಿ ಬಾಟಲಿಗಳು ಅರಳಿ ನಿಂತು ಸದ್ದು ಮಾಡುತ್ತಿವೆ. 

 ಒಂದು ಬಾಟಲಿ ಮೇಲೆ ಕಲೆ ಮೂಡಿಸಲು ತಗುಲುವ ವೆಚ್ಚ 35-40 ರೂಪಾಯಿಗಳು. ಕಲೆ ತುಂಬಿಕೊಂಡ ಬಾಟಲಿಯನ್ನ ನೂರಾರು ರೂಪಾಯಿ ಕೊಟ್ಟು ಖರೀದಿಸಲು ಹಲವರು ಮುಂದೆ ಬಂದಿದ್ದಾರೆ. ಖರೀದಿಸಲು ಮುಂದಾದವರಿಗೆ ನಾರಾಯಣ ಅವರು ಹೇಳ್ಳೋದಿಷ್ಟು: ಇದು ಕಸದಿಂದ ತೆಗೆದ ರಸ. ದಯವಿಟ್ಟು ಇದನ್ನು ಕಸದ ಬುಟ್ಟಿಗೆ ಸೇರಿಸಬೇಡಿ. ಸಸಿ ಬೆಳವಣಿಗೆಗೆ ಸಹಕಾರ ನೀಡುವ ಮೂಲಕ ನಮ್ಮನ್ನೂ ಬೆಳೆಸಿ… 

ಚಿತ್ರ-ಲೇಖನ:
ಬಸವರಾಜ ಕರುಗಲ್‌     

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.