ಧರ್ಮ ಹೇಳುವ ಶಾಂತಿಯ ಮೂಲ ಯಾವುದು?


Team Udayavani, Aug 4, 2018, 3:25 AM IST

2-aa.jpg

ಜಗತ್ತು ಕಾಲಚಕ್ರದಲ್ಲಿ ಸುತ್ತುತ್ತಲೇ ಇರುತ್ತದೆ. ಅದು ನಿಲ್ಲುವುದನ್ನು ಊಹಿಸುವುದೂ ಭಯಾನಕವೇ. ಏಕೆಂದರೆ, ಹುಟ್ಟುಸಾವಿಗೆ ಕಾರಣವಾಗುವ ಮೂಲಗಳಲ್ಲೊಂದು ಈ ಜಗತ್ತಿನ ಸುತ್ತುವಿಕೆ. ಭೂಮಿ ತಿರುಗುತ್ತಿದ್ದಂತೆ ಕಾಲ ಬದಲಾಗುತ್ತ ಹೋಗುತ್ತದೆ. ಮುಂಜಾನೆ, ಮಧ್ಯಾಹ್ನ, ರಾತ್ರಿ ಮತ್ತೆ ಮುಂಜಾನೆ. ಅಲ್ಲದೆ ಪ್ರತಿ ಕ್ಷಣದಲ್ಲಿಯೂ ಹೊಸ ಅನುಭವಗಳು ಮಾನವನಿಗೆ ದೊರಕುತ್ತಲೇ ಹೋಗುತ್ತವೆ. ಅವುಗಳು ಮನಸ್ಸಿಗೆ ಆನಂದವನ್ನುಂಟು ಮಾಡಬಹುದು ಅಥವಾ ದುಃಖವನ್ನುಂಟು ಮಾಡಬಹುದು. ಆ ಕ್ಷಣ ಒಬ್ಬ ಮನುಷ್ಯನನ್ನು ತೀವ್ರವಾದ ಸಮಸ್ಯೆಯಿಂದ ಹೊರದಬ್ಬಿ ಬಿಡಬಹುದು ಅಥವಾ ನೋವಿನ ಕೂಪಕ್ಕೆ ತಳ್ಳಬಹುದು. ಹಾಗಾಗಿ, ಮನುಷ್ಯ ಇವತ್ತು ಇದ್ದಂತೆ  ನಾಳೆ ಇರುತ್ತಾನೆಂದು ಹೇಳಲಾಗದು. ಇದೇ ಬದುಕು ಎಂದುಕೊಂಡು ತಟಸ್ಥವಾಗಿದ್ದರೂ ಯಾರೂ ನೋವಿನಿಂದ ತಪ್ಪಿಸಿಕೊಂಡವರಿಲ್ಲ. ಅಶಾಂತಿಯಿಂದ ಮರುಗುವವರು, ಕೊರಗುವವರು ಜಗತ್ತಿನ ಮೂಲೆ ಮೂಲೆಯಲ್ಲಿಯೂ ಇ¨ªಾರೆ. 
ಶಾಂತಿಯಿಲ್ಲದ ಬದುಕು ಎಂಬ ಕೊರಗಿನಲ್ಲಿಯೇ ಜೀವಿಸುತ್ತಿದ್ದಾರೆ.

ಶಾಂತಿ ಎಂದರೇನು? ಶಾಂತಿ ಎಂದರೆ ಮನಸ್ಸಿನ ನೆಮ್ಮದಿಯೇ? ಸಂತೋಷವೇ? ಬದುಕಿಗೆ ಬೇಕಾಗುವ ಅಗತ್ಯಗಳ ಪೂರೈಕೆಯೇ? ಆದರೆ ಇವ್ಯಾವುವೂ ಶಾಂತಿಯ ರೂಪವಲ್ಲ. ಶಾಂತಿ ಎಂಬುದು ಮನಸ್ಸಿನ ಸಮಸ್ಥಿತಿ. 

ಯಾವುದನ್ನೂ ಬಯಸದ ಸ್ಥಿತಿ. ಇದ್ದುದರಲ್ಲಿಯೇ ಸಂತೃಪ್ತಿ ಹೊಂದುವ ಸ್ಥಿತಿ. ನಾಳೆಗಾಗಿ ಇಂದಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳದ ಸ್ಥಿತಿ. ಈ ಸ್ಥಿತಿಯನ್ನು ಹೊಂದುವುದು ಸರಳವೆನಿಸಿದರೂ ಪ್ರಸ್ತುತ ಜಗತ್ತಿನಲ್ಲಿ ಅಸಾಧ್ಯದ ಮಾತೇ! ಪ್ರಸ್ತುತ ಜಗತ್ತಿನಲ್ಲಿ ಒಬ್ಬನ ಬೇಕು ಬೇಡಗಳು ಇನ್ನೊಬ್ಬನ ಬೇಕು ಬೇಡಗಳನ್ನು ಅವಲಂಬಿಸಿಕೊಂಡಿರುವುದರಿಂದ ಶಾಂತಿಯನ್ನು ಹೇಗೆ ಕಂಡುಕೊಳ್ಳಬೇಕೆಂಬುದನ್ನು ತಿಳಿಯದ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ಭಗವದ್ಗೀತೆಯಲ್ಲಿ ಕೃಷ್ಣ ಶಾಂತಿಯನ್ನು ಯಾರು ಪಡೆಯಬಲ್ಲರು ಎಂಬುದನ್ನು ಸರಳವಾಗಿ ಹೇಳಿ¨ªಾನೆ. ವಿಹಾಯ ಕಾಮಾನ್‌ ಯಃ ಸರ್ವಾನ್‌ ಪುಮಾಂಶ್ಚರತಿ ನಿಃಸ್ಪೃಹಃ ಣ ನಿರ್ಮಮೋ ನಿರಹಂಕಾರಃ ಶಾಂತಿಮಧಿಗತ್ಛತಿ ಣಣ (ಭಗವದ್ಗೀತೆ ಸಾಂಖ್ಯಯೋಗ ಶ್ಲೋಕ 71)

ಇದು ಕೃಷ್ಣ ಹೇಳಿದ ಶಾಂತಿಯ ಸರಳ ಸೂತ್ರ. ಇಂದ್ರಿಯ ತೃಪ್ತಿಯ ಎಲ್ಲ ಬಯಕೆಗಳನ್ನು ತ್ಯಜಿಸಿ, ಬಯಕೆಗಳಿಂದ ಮುಕ್ತನಾದವನು, ದೊರೆತನ ಅಥವಾ ಒಡೆತನದ ಭಾವವನ್ನು ಬಿಟ್ಟಿರುವವನು ಹಾಗೂ ಅಹಂಕಾರವಿಲ್ಲದವನು ನಿಜವಾದ ಶಾಂತಿಯನ್ನು ಪಡೆಯಬಲ್ಲ. ಮನುಷ್ಯನ ದೌರ್ಬಲ್ಯ ಇರುವುದೇ ಈ ಇಂದ್ರಿಯ ತೃಪ್ತಿಯ ಆಸೆಗಳನ್ನು ಈಡೇರಿಸುವುದರಲ್ಲಿ. ಇಂತಹ ಆಸೆಗಳಿಂದ ಮುಕ್ತನಾಗದ ಹೊರತು ಆತ ನೆಮ್ಮದಿ ಅಥವಾ ಶಾಂತಿಯನ್ನು ಹೊಂದಲು ಸಾಧ್ಯವಿಲ್ಲ. ನಾಲಿಗೆಯ ಚಪಲಕ್ಕೆ, ದೇಹದ ಆರೋಗ್ಯಕ್ಕೆ, ಹಾನಿಕಾರಕವಾದ ಆಹಾರವನ್ನು ಸೇವಿಸಿ, ನಂತರ ಆ ಆಹಾರದಿಂದಲೇ ಆಸ್ಪತ್ರೆಗೆ ಅಲೆಯುವಂತಾಗಿ ತನ್ನ ಜೀವನದ ಶಾಂತಿಯನ್ನೇ ಕಳೆದುಕೊಳ್ಳಬಹುದು. ಇದಕ್ಕೆ ಕಾರಣ ಇಂದ್ರಿಯ ಆಸೆಗಳು. ಮೊದಲು ಅದನ್ನು ನಿಗ್ರಹಿಸಬೇಕು. ಮನುಷ್ಯನ ಇಂದ್ರಿಯಗಳ ಚಪಲಗಳಿಗೆ ಕೊನೆಯೆಂಬುದಿಲ್ಲ. ಹಾಗಾಗಿ, ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಅವನ್ನು ನಿಗ್ರಹಿಸಿದಾಗಲೇ ಶಾಂತಿಯನ್ನು ಪಡೆಯಬಹುದು. ತಾನೇ ಹಿರಿಯ ಅಥವಾ ಒಡೆಯ ಎಂಬ ಭಾವವನ್ನು ಮೊದಲು ತ್ಯಜಿಸಬೇಕು. ಅಶಾಂತಿಯ ಮೂಲ ಆಗರವೇ ಈ ಮಾಲೀಕತ್ವದ ಗುಣ. ಎಲ್ಲವೂ ತನ್ನದು ಎಂದು ಎಲ್ಲರನ್ನೂ ಒಡೆತನದ ಭಾವದಿಂದ ಕಾಣುವವನಿಗೆ ಎಂದಿಗೂ ನೆಮ್ಮದಿಯಿರುವುದಿಲ್ಲ. ಈ ಜಗತ್ತಿನಲ್ಲಿ ತನ್ನದು ಎಂಬುದು ಯಾವುದೂ ಇಲ. ಯಾವುದಕ್ಕೂ ನಾನೂ ಒಡೆಯನಲ್ಲ ಎಂಬುದರ ಜೊತೆಗೆ, ತಾನು ಸೇವಕ ಎಂಬ ಭಾವವಿದ್ದಲ್ಲಿ ಶಾಂತಿಯ ಹಾದಿ ಸುಲಭ.

ಅಹಂಕಾರ ಎಂಬ ಪೊರೆ

 ಅಹಂಕಾರವನ್ನು ತೊರೆದವನು ಶಾಂತಿಯನ್ನು ಹೊಂದಬಲ್ಲ. ಅಹಂನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದು ಸತ್ಯವಾದ ಮಾತು. ಹಮ್ಮನ್ನು ಬಿಟ್ಟರೆ ನೆಮ್ಮದಿ ಕಣ್ಣಿಗೆ ಕಾಣುತ್ತದೆ. ಅಹಂಕಾರವೆಂಬುದು ಕಣ್ಣಿಗೆ ಕಟ್ಟಿದ ಪೊರೆಯಂತೆ. ಆತನಿಗೆ ಯಾವುದೂ ಸ್ಪಷ್ಟವಾಗಿ ಗೋಚರಿಸುವುದಿಲ್ಲ, ಆದರೆ ತಾನು ನೋಡಿದ್ದೇ ಸತ್ಯ ಎಂಬ ಭ್ರಮೆಯಲ್ಲಿ ತನ್ನ ಮನಶ್ಯಾಂತಿ ಯ ಜೊತೆಗೆ ಇತರರ ಶಾಂತಿಯನ್ನೂ ಕೆಡಿಸಲು ಕಾರಣವಾಗುತ್ತಾನೆ. ಹಾಗಾಗಿ, ಎಲ್ಲಾ 
ಬಯಕೆಗಳನ್ನೂ ಒಡೆತನದ ಭಾವವನ್ನೂ ದರ್ಪವನ್ನೂ ತೊರೆದಾಗ ಮಾತ್ರ ಶಾಂತಿ ಸಿಗುತ್ತದೆಂಬುದನ್ನು ಧರ್ಮ ಹೇಳುತ್ತದೆ.

ಶಾಂತಿಯ ಮೂಲ: ಧರ್ಮವನ್ನು ಧರ್ಮದ ರೀತಿಯಲ್ಲಿಯೇ ಅನುಸರಿಸಿ ಆಚರಿಸಿದರೆ ಶಾಂತಿಯನ್ನು ಅರಸಿಕೊಂಡು ಎಲ್ಲಿಗೂ ಹೋಗಬೇಕಾಗಿಲ್ಲ.

ಟಾಪ್ ನ್ಯೂಸ್

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.