ನರಸಿಂಹ ಅವತಾರದ ಮೂಲಪಾಠ


Team Udayavani, Aug 11, 2018, 12:18 PM IST

99.jpg

ನರಸಿಂಹ ಎಂಬ ಅವತಾರದ ಮೂಲಪಾಠವನ್ನು ನಾವು ಅರಿತು ನಡೆಯಬೇಕಾದ ಅಗತ್ಯವಿದೆ. ನರ ಮತ್ತು ಸಿಂಹ ಎಂದಿಗೂ ಒಂದಾಗಲೂ ಸಾಧ್ಯವೇ ಇಲ್ಲ. ಆದರೆ ಇಲ್ಲಿ ದೇವನೇ ಆರೂಪದಲ್ಲಿ ಬಂದಿದ್ದಾನೆಂದರೆ ಅದರ ಅರ್ಥ ನರನಲ್ಲಿರುವ ಸಿಂಹರೂಪದ ದರ್ಶನದ ಪ್ರತೀಕ. ಹಿರಣ್ಯಕಶಿಪು ಬ್ರಹ್ಮನಿಂದ ವರಪಡೆಯುವಾಗ ಈತನಿಗೆ ಸಾವೇ ಇಲ್ಲ ಎಂದುಕೊಳ್ಳುತ್ತೇವೆ. ಆದರೆ, ನರಸಿಂಹರೂಪ ತಾಳಿ ಬಂದ ದೇವರು ಅಧರ್ಮಕ್ಕೆ ಸಾವಿದೆ ಎಂಬುದನ್ನು ನಿರೂಪಿಸುತ್ತಾನೆ. ಎಂಥಾ ವರವನ್ನು ಪಡೆದರೂ ಅದು ಅಧರ್ಮದ ಮುಂದೆ ನಶ್ವರ.

ಮಹಾವಿಷ್ಣುವು ಅವತಾರ ಪುರುಷ. ದೇವಾನು ದೇವತೆಗಳೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ, ಮಾನವನು ಬದುಕುವ ದಾರಿಯನ್ನು ತೋರುತ್ತಲೇ ಬಂದಿದ್ದಾರೆ. ಅದರಲ್ಲಿ ಪಾಲನಾಕರ್ತನಾದ ಮಹಾವಿಷ್ಣುವು ವಿವಿಧ ಅವತಾರ ತಾಳಿ ಮಾನವನ ಜೀವನದಲ್ಲಿ ಮಾರ್ಗದರ್ಶಕ, ಚಿಂತಕ, ರಕ್ಷಕನಾಗಿ ಕಾರ್ಯನಿರ್ವಹಿಸುತ್ತ ಆದಿಮಾಯೆಯ ನಿರ್ದೇಶನದಂತೆ ಲೋಕಹಿತವನ್ನು ಕಾಪಾಡುತ್ತ ಬಂದಿರುವುದನ್ನು ಪುರಾಣ ಪುಣ್ಯಕಥೆಗಳಿಂದ ನಾವು ತಿಳಿದಿದ್ದೇವೆ. ಲೋಕೋ ಭಿನ್ನ ರುಚಿಃ ಎಂಬ ಉಕ್ತಿಯಂತೆ ಹಲವಾರು ರುಚಿಗಳಿಂದ ಕೂಡಿದ ವ್ಯಕ್ತಿಗಳು ಒಂದೇ ಪ್ರದೇಶದಲ್ಲಿ ಬಾಳುವಾಗ, ವಿರಸದ ಸಂದರ್ಭಗಳು ಉಂಟಾಗುವುದು ಸಹಜವಾದರೂ ಅದು ಲೋಕದ ಸಂಸ್ಕೃತಿಯನ್ನು ಎಂದಿಗೂ ಹಾಳು ಮಾಡಬಾರದು.

ಸಂಸ್ಕಾರವನ್ನು ಮೀರಿ ನಡೆಯುವ ಪ್ರವೃತ್ತಿ ಹೆಚ್ಚಾದಾಗ, ಅದರಿಂದ ದುಷ್ಟತನವೇ ಹೆಚ್ಚಿದಾಗ, ಅಧರ್ಮದ ಬೆಂಕಿಹೊತ್ತಿದಾಗ ಇವೆಲ್ಲವನ್ನು ಸರಿಪಡಿಸುವ ಉದ್ದೇಶ ಹೊತ್ತು ದೇವನು ಅವತಾರತಾಳಿ ಬರುತ್ತಾನೆ. ಅಂತಹ ಅವತಾರಗಳಲ್ಲಿ ನರಸಿಂಹ ಅವತಾರವೂ ಒಂದು. ಈ ನಿಮಿತ್ತ ವೈಶಾಖ ಮಾಸ, ಶುಕ್ಲಪಕ್ಷದ ಚತುರ್ದಶಿಯಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ.

ಹಿರಣ್ಯಕಶಿಪು ಬ್ರಹ್ಮನಿಂದ, ನರನಿಂದಾಗಲೀ ಪ್ರಾಣಿಯಿಂದಾಗಲೀ, ಹಗಲಲ್ಲಾಗಲೀ ರಾತ್ರಿಯಲ್ಲಾಗಲೀ, ಆಗಸದಲ್ಲಾಗಲೀ ಭೂಮಿಯಲ್ಲಾಗಲೀ, ಮನೆಯ ಒಳಗಾಗಲೀ ಹೊರಗಾಗಲೀ ಮತ್ತು ಯಾವುದೇ ಅಸ್ತ್ರಗಳಿಂದ ನನಗೆ ಮರಣ ಸಂಭವಿಸದಿರಲಿ ಎಂದು ವರ ಪಡೆಯುತ್ತಾನೆ. ಆದರೆ ಆತನ ದುಷ್ಟತನ ಮಿತಿಮೀರಿದಾಗ ವಿಷ್ಣುವು ನರನೂ ಅಲ್ಲದ ಪ್ರಾಣಿಯೂ ಅಲ್ಲದ ನರಸಿಂಹ ರೂಪತಾಳಿ, ಹಗಲೂ ಅಲ್ಲದ ರಾತ್ರಿಯೂ ಅಲ್ಲದ ಮುಸ್ಸಂಜೆಯಲ್ಲಿ, ಒಳಗೂ ಅಲ್ಲದ ಹೊರಗೂ ಅಲ್ಲದ ಬಾಗಿಲ ಹೊಸಿಲಿನಲ್ಲಿ, ಆಗಸವೂ ಅಲ್ಲದ ಭೂಮಿಯೂ ಅಲ್ಲದ ತನ್ನ ತೊಡೆಯ ಮೇಲೆ ಹಿರಣ್ಯಕಶಿಪುವನ್ನು ಇರಿಸಿಕೊಂಡು ಯಾವುದೇ ಅಸ್ತ್ರ ಉಪಯೋಗಿಸದೆ ತನ್ನ ಚೂಪಾದ ಉಗುರಿನಿಂದ ಕರುಳನ್ನು ಬಗೆದು ಸಂಹರಿಸುತ್ತಾನೆ. ಇದು ತುಂಬಾ ಸುಂದರವಾದ ಭಾಗ. ಎಲ್ಲಿಯೂ ಸಾವು ಬರದಂತೆ ಸೃಷ್ಟಿಕರ್ತನಿಂದಲೇ ವರ ಪಡೆದಿದ್ದರೂ ಸಹ ಅಧರ್ಮದ ದಾರಿಯಲ್ಲಿ ನಡೆದಾಗ ಸಾವಿಗೂ ಒಂದು ದಾರಿಯಿದೆ ಎಂಬುದನ್ನು ಹಿರಣ್ಯಕಶಿಪುವಿನ ಜೀವನದ ತೋರಿಸಿಕೊಡುತ್ತದೆ.

ನರಸಿಂಹ ಎಂಬ ಅವತಾರದ ಮೂಲಪಾಠವನ್ನು ನಾವು ಅರಿತು ನಡೆಯಬೇಕಾದ ಅಗತ್ಯವಿದೆ. ನರ ಮತ್ತು ಸಿಂಹ ಎಂದಿಗೂ ಒಂದಾಗಲೂ ಸಾಧ್ಯವೇ ಇಲ್ಲ. ಆದರೆ ಇಲ್ಲಿ ದೇವನೇ ಆರೂಪದಲ್ಲಿ ಬಂದಿದ್ದಾನೆಂದರೆ ಅದರ ಅರ್ಥ ನರನಲ್ಲಿರುವ ಸಿಂಹರೂಪದ ದರ್ಶನದ ಪ್ರತೀಕ. ಹಿರಣ್ಯಕಶಿಪು ನರನಾಗಿದ್ದರೂ ಸಿಂಹದ ಕ್ರೂರತೆ ಆತನಲ್ಲಿತ್ತು. ಚಾಣಾಕ್ಷ$ಮತಿಯಿಂದ ವರವನ್ನು ಪಡೆದಿದ್ದರೂ, ಆ ವರವೂ ಸುಳ್ಳಾಗದೇ ಆತನಿಗೆ ಮರಣ ಸಂಭವಿಸಿತು. ಅಂದರೆ ಮನುಷ್ಯನಲ್ಲಿರುವ ಸಿಂಹದ ಕ್ರೂರತೆ ಹೆಚ್ಚುತ್ತಾ ಹೋದಂತೆ ಆತ ಎಷ್ಟೇ ಬಲವಂತನಾಗಿದ್ದರೂ ಅಧಃಪತನದ ದಾರಿಯಲ್ಲಿ ಸಾಗಬೇಕಾಗುತ್ತದೆ. ನರಸಿಂಹ ರೂಪವು ಜೀವನದಲ್ಲಿ ಮನುಷ್ಯ ನರನಾಗಿಯೇ ಇರಬೇಕೇ ಹೊರತು ಸಿಂಹವಾಗಬಾರದೆಂಬುದನ್ನು ಸೂಚಿಸುತ್ತದೆ.

ಹಿರಣ್ಯಕಶಿಪು ಬ್ರಹ್ಮನಿಂದ ವರಪಡೆಯುವಾಗ ಈತನಿಗೆ ಸಾವೇ ಇಲ್ಲ ಎಂದುಕೊಳ್ಳುತ್ತೇವೆ. ಆದರೆ, ನರಸಿಂಹರೂಪ ತಾಳಿ ಬಂದ ದೇವರು ಅಧರ್ಮಕ್ಕೆ ಸಾವಿದೆ ಎಂಬುದನ್ನು ನಿರೂಪಿಸುತ್ತಾನೆ. ಎಂಥಾ ವರವನ್ನು ಪಡೆದರೂ ಅದು ಅಧರ್ಮದ ಮುಂದೆ ನಶ್ವರ. ಅಂತೆಯೇ ಎಂಥಾ ಜ್ಞಾನವಂತನಾದರೂ ಆತ ಅಧರ್ಮದ ಹಾದಿತುಳಿದರೆ, ನರತ್ವವನ್ನು ಬಿಟ್ಟು ಸಿಂಹನಾದರೆ ನರಸಿಂಹ ದೇವರು 
ಶಿಕ್ಷಿಸದೇ ಇರಲಾರ.

ದೇವನ ಅವತಾರವೆಂಬುದು ಕೇವಲ ಭಜಿಸಲೋ ಪೂಜಿಸಲೋ ಸೀಮಿತವಾಗಿಲ್ಲ. ಅದಕ್ಕೆ ವಿಶಾಲ ಅರ್ಥ ಇದ್ದೇ ಇದೆ. ಅದನ್ನು ಅರಿಯುವ ಮನಸ್ಸು ಬೇಕು, ಪಾಲಿಸುವ ಗುಣ ಸಂಸ್ಕಾರ ಬೇಕು. ನಮ್ಮ ಸಿಟ್ಟು ಅಥವಾ ಉಗ್ರತೆಯೂ ಹೆಚ್ಚಬಾರದೆಂಬುದಕ್ಕೆ ಸೂಚಕವೋ ಎಂಬಂತೆ ನರಸಿಂಹ ದೇವರ ಇದಿರಿನಲ್ಲಿ ಭಕ್ತಿಯ ಸೌಮ್ಯತೆಯ ಸಾಕಾರಮೂರ್ತಿ ಆಂಜನೇಯನಿರುತ್ತಾನೆ. ನರನು ಉತ್ತಮನಾದಾಗ ನಾರಾಯಣನನ್ನು ಸೇರುವುದು ಸುಲಭವೆಂಬುದು ಪ್ರಹ್ಲಾದನಿಂದ ನಾವು ಕಲಿತ ಪಾಠ.

ಪಾಠ: ದೇವರೂ ಎಲ್ಲೆಲ್ಲಿಯೂ ಇದ್ದಾನೆ ಎಂಬ ನಂಬಿಕೆಯೇ ನಮ್ಮನ್ನು ಸುಸಂಸ್ಕೃತ ದಾರಿಯಲ್ಲಿ ನಡೆಸಿದರೆ  ನರಸಿಂಹ ಅವತಾರದ ಜ್ಞಾನ ನಮ್ಮ ಜೀವನವನ್ನು ಆನಂದಮಯವಾಗಿಸೀತು.

 ವಿಷ್ಣು ಭಟ್ಟ ಹೊಸ್ಮನೆ.

ಟಾಪ್ ನ್ಯೂಸ್

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.