ಕಂಚಿನ ಬಣ್ಣದ ರೆಕ್ಕೆ ಜಕನಾ 


Team Udayavani, Aug 11, 2018, 2:42 PM IST

300.jpg

ಗಂಡು ಜಕನಾ 28 ಸೆಂ.ಮೀ. ಹೆಣ್ಣು ಜಕನಾ 31 ಸೆಂ.ಮೀ ದೊಡ್ಡದಾಗಿ ಇರುತ್ತದೆ. BRONZE WINGED JAKANA(Mepotidusindicus )RWeter hen + -ಉದ್ದುದ್ದ ಬಲವಾದ ಕಾಲು, ಕಾಲಿನಲ್ಲಿ, ಜೇಡರ ಕಾಲಿನಂತಹ ಉದ್ದದ ಬೆರಳು ಇದ‌ಕ್ಕಿದೆ. ಇದರ ಸಹಾಯದಿಂದ ಜಲ ಸಸ್ಯಗಳ ಗುತ್ಛ ಅಥವಾ ಕನ್ನೈದಿಲೆ, ತಾವರೆ ಎಲೆ, ಸಸ್ಯಗಳಿಂದ ತುಂಬಿದ ಕೆರೆ, ಹಿನ್ನೀರು, ನೀರಿನ ಹೊಂಡಗಳಲ್ಲಿ ಅವುಗಳ ಗುತ್ಛ , ಇಲ್ಲವೇ ಎಲೆಗಳ ಮೇಲೆ ನಡೆಯುತ್ತಾ, ಕೆಲವೊಮ್ಮೆ ಅರ್ಧ ಮುಳುಗುತ್ತಾ, ಅಸಮತೋಲನವನ್ನು ಕಾಪಾಡಿಕೊಂಡು ನಡೆಯುವುದು. 

ಅದರ ಉದ್ದ ಹಾಗೂ ಸಂದುಗಳಿರುವ ಕಾಲು ಮತ್ತು ಬೆರಳು ಇದಕ್ಕೆ ಜಲ ಸಸ್ಯಗಳ ಮೇಲೆ ನಡೆದಾಡಲು ಮತ್ತು ಸಮತೋಲನ ಕಾಯ್ದುಕೊಳ್ಳಲು ಸಹಾಯಕವಾಗಿದೆ.  ಹೊಳೆವ ಕಡು ನೀಲಿ ಬಣ್ಣದ ತಲೆ, ಕತ್ತು, ಎದೆ, ಬೆನ್ನು ಇದೆ. ಹೊಳೆವ ಕಂಚು ಬಣ್ಣದ ರೆಕ್ಕೆ ಇದರ ಚೆಲುವನ್ನು ಹೆಚ್ಚಿಸಿದೆ. ಹಳದಿ ಬಣ್ಣದ ಚುಂಚು, ಎರಡು ಚುಂಚು ಸೇರುವಲ್ಲಿ ಹರಿತವಾಗಿದೆ. ತುದಿ ಸ್ವಲ್ಪ ಬಗ್ಗಿದೆ. ಇದರಿಂದ ಜಲಸಸ್ಯಗಳ ದಂಟು, ಚಿಗುರೆಲೆ, ಜಲಸಸ್ಯಗಳ ಹಣ್ಣು ತಿನ್ನಲು ಸಹಕಾರಿ. ವಿಸ್ತಾರವಾದ ಉದ್ದಕಾಲು ಹಳದಿ ಮತ್ತು ಬೆರಳು ನೀಲಿ ಕಪ್ಪು ಬಣ್ಣ ಇದೆ. ಕಪ್ಪು ಪುಕ್ಕದ ಕೆಳಗೆ ಕೆಂಪು ಬಣ್ಣ ಇದೆ. ಈ ಪಕ್ಷಿ$280 ರಿಂದ 310 ಎಂ.ಎಂ. ಉದ್ದ ಇದ್ದು ರೆಕ್ಕೆಯ ಅಗಲ 150 ರಿಂದ 197 ಮಿಲಿ ಮೀಟರ್‌ ಇದೆ. ಗಂಡು ಹಕ್ಕಿಯರೆಕ್ಕೆ ಅಗಲ 150-180 ಎಂ.ಎಂ. ಹೆಣ್ಣು ಹಕ್ಕಿಯರೆಕ್ಕೆ 167 ರಿಂದ 187 ಎಂ.ಎಂ ಇರುತ್ತದೆ.  ಚುಂಚು ಬುಡದಿಂದ ತುದಿಯವರೆಗೆ 34-46 ಎಂ.ಎಂ. ಇದೆ. ಬಾಲದ ಉದ್ದ 61 ರಿಂದ 76 ಎಂ.ಎಂ. ಇರುವುದು. ಜಲಸಸ್ಯಗಳ ಮೇಲೆ ನಡೆಯುವ ಚೆದ್ರಿಡಿಯಾ ಕುಟುಂಬದ ಈ ಹಕ್ಕಿ ಜಾಲ ಪಾದಗಳಿಲ್ಲದಿದ್ದರೂ ನೀರಿನಲ್ಲಿ ಈಜಬಲ್ಲದು. 

ಕತ್ತಿಯ ಅಲಗಿನಂತಿರುವ ಜಕನಾ, ಕಪ್ಪು ನಾಮದ ಕೋಳಿ ಸಹವರ್ತಿ. ಇವೆಲ್ಲ ಸಾಮಾನ್ಯವಾಗಿ ಒಂದೇ ರೀತಿಯ ಆಹಾರ ಮತ್ತು ಇರುನೆಲೆಗಳನ್ನು ಹೊಂದಿವೆ. 
ಜಲ ಸಸ್ಯಗಳಿಂದ ಕೂಡಿದ ಕೆರೆ, ನೀರಿನ ಹೊಂಡ, ಸರೋವರಗಳಲ್ಲಿ ತೇಲುವ ಜಲಸಸ್ಯಗಳ ಮೇಲೆ ಸಮತೋಲನ ಕಾಯ್ದು ಕೊಳ್ಳುತ್ತಾ ನ‌ಡೆಯುವ ಜಕನಾವನ್ನು ತಿನ್ನಲು ಹೊಂಚುಹಾಕಿ ಎರಗುವ ಬಿಳಿ ಗರುಡ ಅಂದರೆ ಬ್ರಾ¾ಣಿಖೈಟ್‌ ನಿಂದ ತಪ್ಪಿಸಿಕೊಳ್ಳಲು ನೀರಿನಲ್ಲಿ ಮುಳುಗು ಹಾಕುತ್ತದೆ.  ಬೆಂಗಳೂರಿನ ಉತ್ತರಹಳ್ಳಿ ಕೆರೆ, ಉತ್ತರ ಕನ್ನಡ ಕುಮಟಾದ ಉಪ್ಪಿನ ಪಟ್ಟಣದ ಕೆರೆ, ಗುಡವಿಯ ಮಾರ್ಗದಲ್ಲಿರುವ ಜಲ ಸಸ್ಯಗಳಿಂದ ಕೂಡಿದ ನೀರಿನ ಹೊಂಡ, ಶಿರಸಿ, ಯಲ್ಲಾಪುರ ಪಟ್ಟಣದ ಹತ್ತಿರದ ಜಲಸಸ್ಯಗಳಿಂದ ಕೂಡಿದಕೆರೆಯಲ್ಲಿ ಸಮೀಪ ಸಹ ಈ ಹಕ್ಕಿ ಸಿಕ್ಕಿದೆ. ಇವು ಭಾರತದ ತುಂಬೆಲ್ಲಾ ಇವೆ. ಸೌತ್‌ ಈಸ್ಟ್‌ ಏಶಿಯಾದಲ್ಲೂ ಸಹ ಕಂಡಿವೆ. ಕೊಲ್ಕತ್ತಾ ವೆಸ್ಟ್‌ ಬಂಗಾಲದಲ್ಲಿ ಕಂಡಿದ್ದು ದಾಖಲಾಗಿದೆ. ಇವು ಒಂದಕ್ಕಿಂತ ಹೆಚ್ಚು ಗಂಡನ್ನು ವರಿಸುತ್ತದೆ. ಮಿಲನದ ಸಂದರ್ಭದಲ್ಲಿ ಗಂಡು ಪ್ರತ್ಯೇಕವಾದ ಇರುನೆಲೆ ಮಾಡಿಕೊಳ್ಳುತ್ತದೆ. ಒಂದು ಗಂಡಿನ ಜೊತೆಯ ಪ್ರಣಯದಾಟ, ನಿಶ್ಚಿತ ಇರುನೆಲೆಯ ವ್ಯಾಪ್ತಿಯಲ್ಲಿಇರುವುದು. ಹೀಗೆ ಎಷ್ಟು ಸಮಯಗಂಡು-ಹೆಣ್ಣು ಈ ವ್ಯಾಪ್ತಿಯಲ್ಲಿಇರುವುದು ಎಂಬುದು ತಿಳಿದು ಬಂದಿಲ್ಲ. 

ಇದು ತೇಲುವ ಸಸ್ಯಗಳ ಗುಚ್ಚದ ಮೇಲೆ ಮೊಟ್ಟೆಇಡುತ್ತದೆ. ಅದರ ರಕ್ಷಣೆಯ ಜವಾಬ್ದಾರಿ ಹಕ್ಕಿಯದು. 

 ಪಕ್ಷಿ$ ಜಾತಿಗಳಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ-ಒಂದೇ ಜಾತಿಯ ಪಕ್ಷಿ$ಗಳು ಬೇರೆ, ಬೇರೆ ನೆಲೆಯಲ್ಲಿ ಬೆಳೆಯುವ ಪ್ರಸಂಗ ಬಂದಾಗ ಅವುಗಳ ಆಹಾರ ರೀತಿಯಲ್ಲಿ ವ್ಯತ್ಯಾಸ ಕಂಡರೂ ರೂಪದಲ್ಲಿ ವ್ಯತ್ಯಾಸ ಕಾಣುವುದಿಲ್ಲ. ಒಂದೇ ಪ್ರದೇಶದಲ್ಲಿ ಆಹಾರ ವ್ಯತ್ಯಾಸವಾದರೆ ರೂಪ, ರಚನೆ ಬೇರೆಬೇರೆಯಾಗಿ ಬೆಳೆಯುವವು ಎಂಬುದು ಸಂಶೋಧನೆಯಿಂದ ತಿಳಿದ ಸತ್ಯ. ಇದಕ್ಕೆ ಉದಾಹರಣೆಯೆಂದರೆ, ಮೆಡಗಾಸ್ಕರ್‌ ನಡುಗಡ್ಡೆ ಜಕನಾದ ಕೆಳಭಾಗದ ಕತ್ತು ಕಪ್ಪು. ಆಫ್ರಿಕಾದ ಇದೇ ಜಾತಿಯ ಜಕನಾದ ಕುತ್ತಿಗೆ ಮೇಲ್ಭಾಗಕಪ್ಪು. ಆದರೆ ಭಾರತದಲ್ಲಿ ಸಿಗುವ ಒಂದು ಜಾತಿಯ ಜಕನಾದ ಕತ್ತು ಮೇಲೆ ಕೆಳಗೆ ಎರಡೂಕಪ್ಪಾಗಿದೆ. ಸ್ಥಳೀಯ ಭಾರತದ ಜಕನಾ ವಲಸೆ ಹೋಗುವುದಿಲ್ಲ. ಜೂನ್‌ ಸೆಪ್ಟಂಬರ್‌ ತಿಂಗಳು ಇದು ಮರಿಮಾಡುವ ಸಮಯ. 

ಟಾಪ್ ನ್ಯೂಸ್

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್‌ನಿಂದ ಸುಳ್ಳಿನ ರಾಜಕಾರಣ: BYR

LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್‌ನಿಂದ ಸುಳ್ಳಿನ ರಾಜಕಾರಣ: BYR

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.