ದನದ ಕೊಟ್ಟಿಗೆಯಿಂದ ಏಷ್ಯನ್‌ ಗೇಮ್ಸ್‌ವರೆಗೆ 


Team Udayavani, Aug 18, 2018, 10:35 AM IST

2556.jpg

ಈಕೆ ಅಂತಿಥ ಹುಡುಗಿಯಲ್ಲ. ಸಣ್ಣ ವಯಸ್ಸಿಗೆ ಜೀವನದ ಎಲ್ಲ ಕಷ್ಟನಷ್ಟಗಳನ್ನು ಅನುಭವಿಸಿ ಇದೀಗ ಏಷ್ಯನ್‌ ಗೇಮ್ಸ್‌ ವೇಗದ ನಡಿಗೆ (ರೇಸ್‌ ವಾಕ್‌) ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಂಡೋನೇಷ್ಯಾಕ್ಕೆ ತೆರಳಿರುವ ಅಪ್ರತಿಮ ಸಾಧಕಿ. ಸದ್ಯ ಬೆರಗು ಕಣ್ಣಿನ ಹುಡುಗಿಗೆ ವಾಕ್‌ ರೇಸ್‌ ಚಾಲೆಂಜ್‌ ಗೆದ್ದು ಇತಿಹಾಸ ಸೃಷ್ಟಿಸುವ ಹೆಬ್ಬಯಕೆ ಇದೆ. ಹೆಸರು ಖುಷ್‌ಬೀರ್‌ ಕೌರ್‌. ವಯಸ್ಸು 25, ಪಂಜಾಬ್‌ ಮೂಲದವರು. ಈ ಬಾರಿ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಈಕೆಯ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. 

ಕಲ್ಲುಮುಳ್ಳಿನ ಹಾದಿ
ಖುಷ್‌ಬೀರ್‌ ಸಾಧನೆ ಮೆಟ್ಟಿಲು ಹೂವಿನ ಹಾದಿಯಾಗಿರಲಿಲ್ಲ. ಅವರ ಎದುರು ಇದ್ದಿದ್ದು ಬೆಟ್ಟದಂತಹ ಸವಾಲು. ಕಲ್ಲು-ಮುಳ್ಳಿನ ಹಾದಿ. ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಿಲ್ಲದಂತಹ ಜೀವನ. ಹೌದು, ಆಗಿನ್ನೂ ಖುಷ್‌ಬೀರ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರಲಿಲ್ಲ. ಆಗಷ್ಟೇ ಕ್ರೀಡಾ ಕ್ಷೇತ್ರವನ್ನು ಪ್ರವೇಶಿಸಿದ್ದರು. ಅವರ ಮನೆಯ ಪರಿಸ್ಥಿತಿ ಹೇಗಿತೆಂದರೆ ಅವರಿಗೆ ಇದ್ದ ಸ್ವಂತ ಸೂರು ಮಳೆ ಬಂದರೆ ಸೋರುತ್ತಿತ್ತು. ಬೇರೆ ದಾರಿ ಇಲ್ಲದ ಇವರು ದನದ ಕೊಟ್ಟಿಗೆಯಲ್ಲ ವಾಸ ಮಾಡಬೇಕಾಗಿತ್ತು. ಒಂದು ಹೊತ್ತಿನ ಊಟಕ್ಕೂ ಕಷ್ಟಪಡಬೇಕಾದ ಪರಿಸ್ಥಿತಿ. ಬೆಳಿಗ್ಗೆ ತಿಂದರೆ ಮತ್ತೆ ಮಧ್ಯಾಹ್ನ, ರಾತ್ರಿ ಉಪವಾಸ. ಇಂತಹ ಪರಿಸ್ಥಿತಿಯಲ್ಲಿ ಬೆಳೆದ ಹುಡುಗಿ ಖುಷ್‌ಬೀರ್‌.

ಬದುಕು ಬದಲಿಸಿದ ವೇಗದ ನಡಿಗೆ
 ಖುಷ್‌ಬೀರ್‌ ರಾಷ್ಟ್ರೀಯ ಕೂಟದ ವೇಗದ ನಡಿಗೆ ಸ್ಪರ್ಧೆಯಲ್ಲಿ ಹಲವು ಪದಕ ಗೆದ್ದಿದ್ದರೂ ಅವರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. 2014ರಲ್ಲಿ ಅವರು ಇಂಚಾನ್‌ನಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನ 20 ಕಿ.ಮೀ. ವೇಗದ ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಇವರ ಹೆಸರು ಎಲ್ಲ ಮಾಧ್ಯಮಗಳಲ್ಲಿ ಪ್ರಸಾರಗೊಂಡವು. ದೇಶದಾದ್ಯಂತ ಅಮೃತಸರದ ಹುಡುಗಿ ಸುದ್ದಿಯಾದರು. ಸನ್ಮಾನ, ಪ್ರಶಸ್ತಿ ಗೌರವಗಳು ಇವರನ್ನು ಬೆನ್ನಟ್ಟಿ ಬಂದವು. ಕೆಲವು ಗಂಟೆಗಳಲ್ಲೆ ಇವರ ಬಡತನದ ದಿನಗಳು ಸಾಧನೆ ಅಲೆಯಲ್ಲಿ ಕೊಚ್ಚಿ ಇತಿಹಾಸದ ಪುಟ ಸೇರಿದವು. 

ಪಂಜಾಬ್‌ ಪೊಲೀಸ್‌ನ ಡಿಎಸ್‌ಪಿ: ಖುಷ್‌ಬೀರ್‌ ಏಷ್ಯನ್‌ ಗೇಮ್ಸ್‌ ಸಾಧನೆ ಪರಿಗಣಿಸಿ ಪಂಜಾಬ್‌ ಸರ್ಕಾರ ಅವರಿಗೆ ಡಿಪ್ಯೂಟಿ ಸೂಪರ್‌ಡೆಂಟ್‌ ಆಫ್ ಪೊಲೀಸ್‌ (ಡಿಎಸ್‌ಪಿ) ಹುದ್ದೆ ನೀಡಿ ಗೌರವಿಸಿದೆ. 

ಖುಷ್‌ಬೀರ್‌ ಸಾಧನೆಗಳು 
2010ರಲ್ಲಿ ಸಿಂಗಾಪುರದಲ್ಲಿ ನಡೆದ ಕೂಟದ 5 ಸಾವಿರ ಮೀ. ವೇಗದ ನಡಿಗೆ ಸ್ಪರ್ಧೆಯಲ್ಲಿ 25 ನಿಮಿಷ, 30.27 ಸಕೆಂಡ್ಸ್‌ಗಳಲ್ಲಿ ಗುರಿ ತಲುಪಿದ ಸಾಧನೆ ಮಾಡಿದರು. 2010ರಲ್ಲಿ ಬೆಂಗಳೂರಿನಲ್ಲಿ ನಡೆದ 10 ಸಾವಿರ ಮೀ. ವೇಗದ ನಡಿಗೆ ಸ್ಪರ್ಧೆಯಲ್ಲಿ 49 ನಿಮಿಷ 21.21 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ಅಗ್ರ ಸ್ಥಾನಿಯಾಗಿ ಮೆರೆದಿದ್ದರು. ಇದಾದ ಬಳಿಕ ಇವರು 2014ರ ಏಷ್ಯನ್‌ ಗೇಮ್ಸ್‌ನಲ್ಲಿ 20 ಕಿ.ಮೀ. ವೇಗದ ನಡಿಗೆಯನ್ನು 1 ಗಂಟೆ 33.07 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಪಡೆದುಕೊಂಡಿದ್ದರು.  

ಟಾಪ್ ನ್ಯೂಸ್

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.