ಚಂದಗುಳಿಯ ಘಂಟೆ ಗಣಪತಿ 


Team Udayavani, Sep 1, 2018, 11:43 AM IST

8.jpg

ಸಣ್ಣ ಗಾತ್ರದ ಗಂಟೆಯಿಂದ ಆರಂಭಿಸಿ ಭಾರೀ ತೂಕದ ಗಂಟೆಯವರೆಗೆ, ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಗಂಟೆಗಳನ್ನು ಹೊಂದಿರುವುದು ಚಂದಗುಳಿಯ ಗಣೇಶ ದೇವಾಲಯದ ವೈಶಿಷ್ಟé. ಈ ದೇವರಿಗೆ ರಾಜ್ಯದಲ್ಲಿ ಮಾತ್ರವಲ್ಲ, ಗೋವಾ-ಮಹಾರಾಷ್ಟ್ರಗಳಲ್ಲಿ ಕೂಡ ಸಾವಿರಾರು ಮಂದಿ ಭಕ್ತರಿದ್ದಾರೆ.  

ಏಕದಂತ, ಗಣೇಶ, ಗಣಪತಿ, ವಕ್ರತುಂಡ ಎಂದೆಲ್ಲಾ ಕರೆಯುವ ವಿನಾಯಕನಿರುವ ಪವಿತ್ರ ಪಾವನ ಶ್ರೀಕ್ಷೇತ್ರವೇ ಈ ಚಂದಗುಳಿ.  ಇಲ್ಲಿರುವ ಶ್ರೀ ಘಂಟೆ ಗಣಪತಿಯ ದೇವಾಲಯವು ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಭಕ್ತಿಯಿಂದ ಬೇಡಿ ಬರುವವರ ಇಷ್ಟಾರ್ಥಗಳನ್ನು ಪೂರೈಸುವ ವರಪ್ರದಾಯಕನಾಗಿ ತನ್ನ ಭಕ್ತರಿಗೆ ಸದಾ ಆಭಯ ಹಸ್ತ ನೀಡುವ ಈ ಗಣಪ, ಬರೀ ಘಂಟೆಗಳಿಗೆ ಒಲಿಯುವವನು ಎಂದರೆ ನೀವು ನಂಬಲೇ ಬೇಕು. 

ನೌಕರಿ ಸಿಗಲಿಲ್ಲವೇ? ಮದುವೆಯ ಸಮಸ್ಯೆಯೇ, ಮಕ್ಕಳಾಗಲಿಲ್ಲವೆಂಬ ಚಿಂತೆಯೆ? ಬಿಜಿನೆಸ್‌ ಕೈಹಿಡಿಯಲಿಲ್ಲವೆ? ಹೀಗೆ ತನ್ನ ಭಕ್ತರ ಸಮಸ್ಯೆಯೇನೇ ಇರಲಿ ಅದನ್ನು ಪರಿಹರಿಸಲು ಈ ಗಣಪ ಕೇಳುವುದು ಬರೀ ಘಂಟೆ ಅಷ್ಟೆ.  ನಿಮ್ಮ ಶಕಾöನುಸಾರ ಯಾವುದೇ ಗಾತ್ರದ ಘಂಟೆಯನ್ನು ಈ ದೇವರಿಗೆ  ಹರಕೆ ಮೂಲಕ ತೀರಿಸಿದರೆ ಸಾಕು: ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಭಕ್ತಾದಿಗಳು ನಂಬಿದ್ದಾರೆ.  

ಅಪಾರ ಭಕ್ತರನ್ನು ಹೊಂದಿರುವ ಈ ಗಣಪ, ಹಚ್ಚ ಹಸಿರಿನಿಂದ ಕೂಡಿರುವ ಸುಂದರ ಪ್ರಕೃತಿಯ ಮಧ್ಯೆ ನೆಲೆನಿಂತಿ¨ªಾನೆ. ಈ ದೇವಾಲಯದ ಸುತ್ತಲೂ ಎಲ್ಲಿ ನೋಡಿದರಲ್ಲಿ ಭಕ್ತಾದಿಗಳು ಸಲ್ಲಿಸಿ ಹೋದ ಘಂಟೆಗಳ ದೊಡ್ಡ ಸಾಲೇ ಕಾಣುತ್ತದೆ. ಅತಿ ಚಿಕ್ಕ ಗಾತ್ರದ ಘಂಟೆಗಳಿಂದ ಹಿಡಿದು ದೊಡ್ಡ ದೊಡ್ಡ ಘಂಟೆಗಳು ಇಲ್ಲುಂಟು.  ಪ್ರವೇಶ ದ್ವಾರದಲ್ಲೂ ಘಂಟೆ, ಕಿಟಕಿಗಳ ಮೇಲ್ಭಾಗಗಳಿಗೂ ಘಂಟೆ, ಅಷ್ಟೇ ಅಲ್ಲ, ದೇವಾಲಯದ ಛಾವಣಿಗಳಲ್ಲೂ ಸಾಲುಸಾಲು ಘಂಟೆಗಳು, ಗೋಪುರದ ಸುತ್ತಲೂ ಘಂಟೆಗಳು.  ಹೀಗೆ, ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ವಿವಿಧ ಗಾತ್ರದ  ಘಂಟೆಗಳ ಸಾಲನ್ನು ನೋಡುವುದೇ ಒಂದು ವಿಶೇಷ ಅನುಭವ. ಬಹಳಷ್ಟು ಜನ ಅವರ ಹರಕೆ ಪೂರೈಸಿದ ನಂತರ ಅರ್ಪಿಸಿದ ಘಂಟೆಗಳಿವು. 

ಈ ಘಂಟೆ ಗಣಪ ಕರ್ನಾಟಕದಲ್ಲಿ ಮಾತ್ರವಲ್ಲ, ದೂರ ದೂರದ ರಾಜ್ಯಗಳಲ್ಲೂ ಅಪಾರ  ಭಕ್ತರನ್ನು ಹೊಂದಿ¨ªಾನೆ. ಪ್ರತಿ ದಿನವೂ ವಿಶೇಷ ಪೂಜೆ ನಡೆಯುಲ ಈ ದೇವಸ್ಥಾನದಲ್ಲಿ ಸಂಕಷ್ಟ ಚತುರ್ಥಿ, ವಿನಾಯಕ ಚತುರ್ಥಿಗಳಂದು ವಿಶೇಷ ಪೂಜೆಗಳು ನಡೆಯುತ್ತವೆ.  ಅಷ್ಟೇ ಅಲ್ಲದೇ,  ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು, ಮದುವೆ, ಸಮಾರಂಭಗಳು ಕೂಡ ನಡೆಯುತ್ತವೆ. ಈ ಗಣಪನ ಮಹಿಮೆ ಅರಿತ ನೆರೆಯ ಗೋವಾ, ಮಹಾರಾಷ್ಟ್ರಗಳಿಂದ ಕೂಡ ಪ್ರತಿನಿತ್ಯವೂ ಸಾಕಷ್ಟು ಭಕ್ತಾದಿಗಳು ಈ ಕ್ಷೇತ್ರಕ್ಕೆ ಬರುತ್ತಿರುತ್ತಾರೆ. 

ತಲುಪುವ ಮಾರ್ಗ : ಯಲ್ಲಾಪುರದಿಂದ ಕೇವಲ 17 ಕಿ.ಮೀ ದೂರದಲ್ಲಿ ಚಂದಗುಳಿ ದೇವಸ್ಥಾನವಿದೆ. ಇಲ್ಲಿಗೆ ತಲುಪಲು ಮಾಗೋಡು ಜಲಪಾತದ ಮಾರ್ಗದಲ್ಲಿ ಬರಬಹುದು. ಅಲ್ಲಿಗೂ ಕೂಡ ಸಾಕಷ್ಟು ಬಸ್ಸುಗಳು ಇವೆ. 

ಆಶಾ ಎಸ್‌.ಕುಲಕರ್ಣಿ

ಟಾಪ್ ನ್ಯೂಸ್

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.