ಬ್ರೇಕ್‌ಫಾಸ್ಟ್‌ಗಾಗಿ ಬೈಕ್‌ ಟ್ರಿಪ್‌


Team Udayavani, Sep 1, 2018, 12:41 PM IST

25411.jpg

ವೀಕೆಂಡ್‌ ಅಂದ್ರೆ ಮಾಲ್‌ ಸುತ್ತಾಟ, ಸಿನಿಮಾ ನೋಡೋದು, ಗಡದ್ದಾಗಿ ನಿದ್ದೆ ಹೊಡೆಯೋದು… ಬೆಂಗಳೂರಿನ ಕ್ರೇಜಿ ಮನಸ್ಸುಗಳನ್ನು ಖುಷ್‌ ಖುಷಿಯಿಂದ ಹಿಡಿದಿಟ್ಟಿಕೊಂಡಿರುವ ಅಂಶಗಳು ಇವಿಷ್ಟೇ ಅಲ್ಲ. ಕೆಲವರು ವಿಭಿನ್ನತೆಯ ಬೆನ್ನೇರಿ, ವೀಕೆಂಡ್‌ನ‌ ಮಜಾ ಅನುಭವಿಸುತ್ತಾರೆ. ಇಲ್ಲೊಂದಿಷ್ಟು ಮಂದಿ ಕೇವಲ ಬ್ರೇಕ್‌ಫಾಸ್ಟ್‌ಗಾಗಿಯೇ ಒಂದಿಷ್ಟು ದೂರ ಬೈಕ್‌ ರೈಡ್‌ ಮಾಡಿಕೊಂಡು, ಹೋಗ್ತಾರೆ. ಅಲ್ಲೆಲ್ಲೋ ಒಂದು ಕಡೆಯಲ್ಲಿ ಒಟ್ಟಿಗೆ ಕುಳಿತು, ಆ ಪರಿಸರದ ಸೌಂದರ್ಯವನ್ನು ಆಸ್ವಾದಿಸುತ್ತಾ, ಬ್ರೇಕ್‌ಫಾಸ್ಟ್‌ ಮುಗಿಸುತ್ತಾರೆ. ನಿಮ್ಮ ಬಳಿ ಬೈಕ್‌ ಇದ್ದರೆ, ಈ ಗೆಳೆಯರ ಜೊತೆ ನೀವೂ ಟಾಪ್‌ಗೆàರ್‌ನಲ್ಲಿ ಹೊರಡಬಹುದು.

  ಹೌದು, ವೀಕೆಂಡ್‌ ಬ್ರೇಕ್‌ಫಾಸ್ಟ್‌ ಕಂಪನಿ ಈ ಸಲ ಹೊರಟಿರುವುದು ಮಂದಾರಗಿರಿ ಬೆಟ್ಟದ ಕಡೆಗೆ. ಬೆಂಗಳೂರಿನಿಂದ 70 ಕಿ.ಮೀ. ದೂರದಲ್ಲಿರುವ ಈ ಬೆಟ್ಟದ ಮೇಲೆ ಪ್ರಸಿದ್ಧ ಜೈನಮಂದಿರವಿದೆ. ಅಲ್ಲದೇ, ಚಂದ್ರನಾಥ ತೀರ್ಥಂಕರರ ಏಕಶಿಲಾ ಮೂರ್ತಿಯನ್ನೂ ಇಲ್ಲಿ ಕಾಣಬಹುದು. ಮನಸ್ಸಿಗೆ ಪ್ರಶಾಂತತೆ ತುಂಬಲು, ಇಲ್ಲೊಂದು ಕೊಳವೂ ಇದೆ. ಅಲ್ಲಿನ ತಂಪು ವಾತಾವರಣಕ್ಕೆ ಒತ್ತಡವನ್ನು ಕರಗಿಸುವ ಶಕ್ತಿಯಿದೆ.

  435 ಮೆಟ್ಟಿಲುಗಳನ್ನು ಹತ್ತಿ ಈ ಬೆಟ್ಟವನ್ನೇರುವುದೇ ಒಂದು ಮಜಾ. ಈ ಚಾರಣವು ಶ್ರವಣಬೆಳಗೊಳವನ್ನು ನೆನಪಿಸದಿದ್ದರೆ ಕೇಳಿ. ಆದರೆ, ಬಾಹುಬಲಿಯ ಬೆಟ್ಟದಷ್ಟು ಏರುಗತಿಯಲ್ಲಿ ಇದು ಇಲ್ಲದೇ ಇದ್ದರೂ, 10-15 ನಿಮಿಷದ ಚಾರಣ ಚಾಲೆಂಜಿಂಗ್‌ ಅಂತೂ ಹೌದು. ಈ ಬೆಟ್ಟದ ಬುಡದಲ್ಲಿಯೇ ಬ್ರೇಕ್‌ಫಾಸ್ಟ್‌ ಅನ್ನೂ ಸವಿಯಬಹುದು. ಕೆಲ ಹೊತ್ತು ಈ ಬೆಟ್ಟದ ಮೇಲೆ ಕಳೆದು, ಮನಸ್ಸನ್ನು ಹಗುರ ಮಾಡಿಕೊಂಡು, ಪುನಃ ಬೈಕನ್ನೇರಿ ಬೆಂಗಳೂರನ್ನು ಸೇರಬಹುದು. ಸಮಾನಮನಸ್ಕರ ಈ ಬ್ರೇಕ್‌ಫಾಸ್ಟ್‌ ಬೈಕ್‌ಟ್ರಿಪ್‌ನಲ್ಲಿ ನೀವೂ ಪಾಲ್ಗೊಂಡು, ಥ್ರಿಲ್‌ ಅನುಭವಿಸಬಹುದು.
ಯಾವಾಗ?: ಸೆ.2, ಭಾನುವಾರ, ಬೆ.6
ಎಲ್ಲಿಗೆ?: ಮಂದಾರಗಿರಿ ಬೆಟ್ಟ
ದೂರ: 70 ಕಿ.ಮೀ.
ಆರಂಭ ತಾಣ: ಎನ್‌ಜಿವಿ ಕಾಂಪ್ಲೆಕ್ಸ್‌, ಕೋರಮಂಗಲ
ಪ್ರವೇಶ: 300 ರೂ. (ಒಬ್ಬರಿಗೆ)
ಹೆಚ್ಚಿನ ಮಾಹಿತಿಗೆ:  https://goo.gl/c9TRcv

ಟಾಪ್ ನ್ಯೂಸ್

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.