ಕೆಸರು ಗುಪ್ಪಿ 


Team Udayavani, Sep 22, 2018, 4:12 PM IST

2-bbb.jpg

ಈ ಹಕ್ಕಿಯನ್ನು ಕೆಂಪು ಕೆಸರ ಗುಪ್ಪಿ ,ಕಂದುಗೆಂಪು ಗುಪ್ಪಿ ಎಂದು ಕರೆಯುವುದುಂಟು.Chestnut bittern  (Lxobrychus cinnamomcus)  RM -Indian Pond heron+, Village hen ಮುದುಡಿ ಕುಳಿತುಕೊಳ್ಳುವ, ಕೊಕ್ಕನ್ನು ಆಕಾಶದೆಡೆ ಚಾಚಿರುವ ಕೊಕ್ಕರೆ ಕುಟುಂಬದಲ್ಲಿನ ಉಪಜಾತಿಗೆ ಈ ಹಕ್ಕಿ ಸೇರಿದೆ. 

 ಇದು, ಕೆಮ್ಮಣ್ಣು ಕೆಸರಿನ ಬಣ್ಣದ ಹಕ್ಕಿ. ಲ್ಯಾಟಿನ್‌ ಭಾಷೆಯ- ಬುಟಿಯೋ+ಟರಸ್‌ ಎಂಬ ಎರಡು ಶಬ್ದ ಸೇರಿ ಬಿಟರಿನ್‌ ಎಂಬ ಹೆಸರು ಬಂದಿದೆ.  ಕೊಕ್ಕರೆಯನ್ನು ಇಂಗ್ಲಿಷಿನಲ್ಲಿ ಈಗ್ರೆಟ್‌, ಹೆರಾನ್‌ ಎಂದು ಎನ್ನುತ್ತಾರೆ.  ಕನ್ನಡದಲ್ಲಿ ಕೊಕ್ಕರೆ , ಬೆಳ್ಳಗಿರುವುದರಿಂದ ಬೆಳ್ಳಕ್ಕಿ ಅನ್ನುತ್ತಾರೆ.  ಹಕ್ಕಿಯ ಬಣ್ಣ ಕೆಂಪಾಗಿರುವುದರಿಂದ ಇದನ್ನು -ಕೆಸರು ಗುಪ್ಪಿ ಅನ್ನುವ ಹೆಸರಿಸಿದೆ.  ಜೌಗು ಪ್ರದೇಶ -ಜೊಂಡು ಹುಲ್ಲು ಬೆಳೆದಿರುವ ಕಡೆ ತನ್ನ ಇರುನೆಲೆ ಮಾಡಿಕೊಂಡಿರುತ್ತದೆ.  

 ಊರು ಕೋಳಿ, ಬಕಪಕ್ಷಿಯನ್ನು ಹೋಲುತ್ತದೆ ಈ ಗುಪ್ಪಿ. ನೋಡುವುದಕ್ಕೆ  ಕೊಕ್ಕರೆಗಿಂತ ಚಿಕ್ಕ, ದಪ್ಪ ಕುತ್ತಿಗೆಯನ್ನು ಹೊಂದಿದೆ.  ಕೊಕ್ಕರೆಯ ಕೊಕ್ಕಿಗಿಂತ ದಪ್ಪ ಚುಂಚು -ಈ ಗುಪ್ಪಿಗೆ ಇದೆ. ಕೆಸರು ಗುಪ್ಪಿ ಮತ್ತು ಕೊಳದಬಕ ಪಕ್ಷಿಗೆ ಬಣ್ಣದ ಹೋಲಿಕೆ ಇರುವುದರಿಂದ ಇವೆರಡೂ ಒಂದೇ ಇರಬಹುದಾ ಎಂಬ ಭ್ರಮೆ ಉಂಟುಮಾಡುತ್ತದೆ.   ಆದರೆ ಸೂಕ್ಷ್ಮವಾಗಿ ಇದರ ಲಕ್ಷಣ, ಬಣ್ಣದ ಗೆರೆ, ಸ್ವಭಾವ ನೋಡಿ ಇವೆರಡರಲ್ಲಿಯ ವ್ಯತ್ಯಾಸ ತಿಳಿಯಬಹುದು. 

ಕೆಸರು ಗುಪ್ಪಿ -ಸುಮಾರು 38 ಸೆ.ಮೀ. ದೊಡ್ಡದಾಗಿರುತ್ತದೆ.  ಇದರ ತೂಕ 100-160 ಗ್ರಾಂ.  ಗಂಡು ಹಕ್ಕಿಯ ಎದೆ, ಕುತ್ತಿಗೆವರೆಗೆ ಹಳದಿ ಮಿಶ್ರಿತವಾಗಿರುತ್ತದೆ. ಜೊತೆಗೆ  ಅಚ್ಚ ಕಂದುಗೀರುಗಳಿಂದ ಕೂಡಿರುತ್ತದೆ. ಎದೆ ಕುತ್ತಿಗೆಯ ಕೆಳಭಾಗದಲ್ಲಿ ಕೆಂಪು ಮಿಶ್ರಿತ ಹಳದಿ ಬಣ್ಣ ಇದೆ.  ಹೆಣ್ಣು ಹಕ್ಕಿಯ ಬಣ್ಣ ಸ್ವಲ್ಪ ಮಾಸಲು ಇರುತ್ತದೆ. ಹಳದಿಮಿಶ್ರಿತ ಕೆಂಪು ಬಣ್ಣದ ಮೇಲೆ, ತಿಳಿಯಾದ ಕಂದು ಗೀರು ಇರುವುದನ್ನು ಕಾಣಬಹಬುದು. ಕಾಲು -ನೀಲಿಮಿಶ್ರಿತ ಹಳದಿ, ಕೊಕ್ಕು ಕೆಸರು ಗೆಂಪು ಇದ್ದು, ಚುಂಚಿನ ಮೇಲ್ಭಾಗ ಬೂದು ಗಪ್ಪು ಇದೆ. 

ಜೌಗು ಪ್ರದೇಶ, ಉಪ್ಪು ನೀರಿನ ಗಜನೀ ಪ್ರದೇಶದಲ್ಲಿ -ಕೆಸರು ಹುಳು, ಇಲ್ಲವೇ ಮೀನು ,ಸೀಗಡಿ ಮುಂತಾದ ಜಲಚರಗಳನ್ನು ಸುಮ್ಮನೆ ಕುಳಿತು, ಅದು ತನ್ನ ಸಮೀಪಬಂದಾಗ ತನ್ನ ಕುತ್ತಿಗೆ ಉದ್ದಮಾಡಿ  ಲಬಕ್‌ ಅಂತ ಹಿಡಿದು ತಿನ್ನುತ್ತದೆ.  ಬೇಟೆ ಹತ್ತಿರ ಹೋಗುವವರೆಗೂ ಸುಮ್ಮನೆ ಹುಲ್ಲು ಜೊಂಡಿನಲ್ಲಿ ಅಡಗಿ ಕುಳಿತಿರುತ್ತದೆ. ನಂತರ, ತಕ್ಷಣ ಹಾರಿ ಬೆಚ್ಚಿ ಬೀಳಿಸುತ್ತದೆ. ಸಾಮಾನ್ಯವಾಗಿ ಅಡ್ಡಾದಿಡ್ಡಿಯಾಗಿ, ಗಾಳಿಯಲ್ಲಿ ತೂರಾಡಿದಂತೆ ಹಾರುವುದು ಇದರ ವಿಶೇಷ. 

 ಹುಳ, ಸೊಳ್ಳೆ, ಸೊಳ್ಳೆಮೊಟ್ಟೆ ಮತ್ತು ಕೆಲವೊಮ್ಮೆ ಮೃದ್ವಂಗಿಗಳನ್ನೂ ತಿನ್ನುವುದರಿಂದ ನೀರಿನ ಸ್ವಚ್ಚತೆ ಕಾರ್ಯದಲ್ಲಿ ಇದರ ಪಾತ್ರ ಹಿರಿದು. ಜುಲೈ-ಸೆಪ್ಟೆಂಬರ್‌ ತಿಂಗಳುಗಳು ಇದು ಮರಿಮಾಡುವ ಸಮಯ. ಆದರೂ ಮನ್‌ಸೂನ್‌ ಆಧರಿಸಿ ಈ ಸಮಯದಲ್ಲಿ ಸ್ವಲ್ಪ ವ್ಯತ್ಯಾಸ ಆಗುವುದಿದೆ. 

 ಜೊಂಡು ಹುಲ್ಲಿನ ನಡುವೆ, ನೀರಿನ ಜಾಗದ ಜೊಂಡಿನಲ್ಲಿ -ತೆಪ್ಪದಂತೆ ಗೂಡು ನಿರ್ಮಿಸಿ, ಅದರಲ್ಲಿ4-5 ಬಿಳಿ ಬಣ್ಣದ ಮೊಟ್ಟೆ ಇಡುತ್ತದೆ. ಮಳೆ ನೀರುತುಂಬಿದ ಕೆಸರು ಹೊಂಡದ ತೀರದಲ್ಲೂ ಗೂಡನ್ನು ನಿರ್ಮಿಸುತ್ತದೆ. ಈ ಹಕ್ಕಿಯನ್ನು ಮಾಂಸಕ್ಕಾಗಿ ಹಿಡಿಯುತ್ತಾರೆ.  ಅದರಲ್ಲೂ ಮೀನಿನ ಮರಿ, ಎರೆಹುಳುವನ್ನು ಗಾಳಕ್ಕೆ ಸಿಕ್ಕಿಸಿ, ಈ ಹಕ್ಕಿಯನ್ನು ಹಿಡಿಯುವುದರಿಂದಲೂ, ಕಾಂಡ್ಲಾ, ಶೀಗಡಿಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದಲೂ  ಇದರ ಸಂಖ್ಯೆ ಕ್ಷೀಣಿಸುತ್ತಿದೆ. 

ಟಾಪ್ ನ್ಯೂಸ್

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.