ನರಕದ ದ್ವಾರವನ್ನು ಭೂಲೋಕದಲ್ಲಿಯೇ ಮುಚ್ಚುವುದು ಹೇಗೆ?


Team Udayavani, Oct 6, 2018, 3:30 AM IST

2556.jpg

ಕಾಮ, ಕ್ರೋಧ ಮತ್ತು ಲೋಭಗಳು ಜೀವನದಲ್ಲಿ ಅಗತ್ಯವಾದ ಸಂಗತಿಗಳೇ ಅಲ್ಲ. ಆದರೆ ಇವು ಮೂರನ್ನು ಬಿಟ್ಟವರು ಈ ಕಲಿಯುಗದಲ್ಲಿ ಸಿಗಲಾರರು. ಆದರೆ ಈ ಮೂರನ್ನು ಎಲ್ಲರೂ ತ್ಯಜಿಸಿ ಬದುಕಿದಲ್ಲಿ ಯಾರೂ ನರಕವನ್ನು ಸೇರಲಾರರು ಅಲ್ಲದೆ ಭುವಿಯೇ ಸ್ವರ್ಗವಾಗುತ್ತದೆ. 

ಮಾನವನು ಈ ಭೂಲೋಕದಲ್ಲಿ ತಾನು ಹೇಗೇ ಬದುಕಿರಲಿ, ಸತ್ತ ಬಳಿಕ ತನಗೆ ಸ್ವರ್ಗ ಸಿಗಬೇಕೆಂದು ಬಯಸುತ್ತಾನೆ. ನರಕವನ್ನು ಯಾರೂ ಅಪೇಕ್ಷಿಸುವುದಿಲ್ಲ. ಸತ್ತ ಬಳಿಕ ದೇಹ ಉಳಿಯುವುದಿಲ್ಲ. ಆತ್ಮ ಎಲ್ಲಿ ಹೋಗುತ್ತದೆಂಬುದು ಕಾಣುವುದಿಲ್ಲ. ಸ್ವರ್ಗನರಕಗಳ ನಂಬಿಕೆಯಿಂದಾಗಿ ಈ ದೇಹವನ್ನು ತ್ಯಜಿಸಿದ ಆತ್ಮ ಸ್ವರ್ಗಕ್ಕೋ ನರಕಕ್ಕೋ ಹೋಗುತ್ತದೆಂದು ನಮ್ಮಷ್ಟಕ್ಕೆ ನಾವೇ ತೀರ್ಮಾನಿಸುತ್ತೇವೆ. ಆದರೆ,  ಆ ನರಕವನ್ನು ಕನಸಿನಲ್ಲಿಯೂ ಎಣಿಸುವುದಿಲ್ಲ. ನರಕ ಸೇರದಂತಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ಆದರೆ ಸ್ವರ್ಗ-ನರಕದ ತೀರ್ಮಾನವಾಗುವುದೇ ನಾವು ಬದುಕಿದ ರೀತಿನೀತಿಗಳಿಂದ. ಭಗವದ್ಗೀತೆಯ ಹದಿನಾರನೆಯ ಅಧ್ಯಾಯವಾದ ದೈವಾಸುರ ಸಂಪದ ವಿಭಾಗಯೋಗದಲ್ಲಿ ನರಕದ ದ್ವಾರಗಳಾವುವು? ಎಂಬುದಕ್ಕೆ ಶ್ರೀ ಹೀಗೆ ಕೃಷ್ಣ ಹೇಳುತ್ತಾನೆ.

ತ್ರಿವಿಧಂ ನರಕಸ್ಯೆàದಂ ದ್ವಾರಂ ನಾಶನಮಾತ್ಮನಃ|
ಕಾಮಃ ಕ್ರೋಧಸ್ತಥಾ ಲೋಭಸ್ತಸ್ಮಾದೇತತŒಯಂ ತ್ಯಜೇತ…|| ಶ್ಲೋಕ 21||

ಇದರರ್ಥ:  ನರಕಕ್ಕೆ ಮೂರು ಮುಖ್ಯವಾದ ದ್ವಾರಗಳಿವೆ. ಅವುಗಳೇ ಕಾಮ, ಕ್ರೋಧ ಮತ್ತು ಲೋಭ. ಆತ್ಮದ ಅವನತಿಗೆ ಕಾರಣವಾಗುವ ಇವನ್ನು ತ್ಯಜಿಸಿ ಬಾಳಿದರೆ ಮಾತ್ರ ಸ್ವರ್ಗ ಸೇರಲು ಸಾಧ್ಯ.

ಅಂದರೆ, ನರಕದ ಬಾಗಿಲು ಭೂಲೋಕದಲ್ಲಿಯೇ ಇದೆ ಎಂದಾಯಿತು. ಕಾಮ, ಕ್ರೋಧ ಮತ್ತು ಲೋಭಗಳೇ ಮುಖ್ಯವಾದ ಬಾಗಿಲುಗಳು ಎಂದಾದರೆ, ಅವುಗಳ ಕೀಲಿಕೈ ನಮ್ಮ ಬಳಿಯೇ ಇದೆ. ಹಾಗಾಗಿ, ನರಕದ ಬಾಗಿಲು ನಮಗೆ ಗೋಚರವೇ ಆಗದಂತೆ ನಾವು ಮಾಡಬಹುದಾಗಿದೆ. ಭೂಲೋಕದಲ್ಲಿದ್ದುಕೊಂಡೇ, ಅಂದರೆ, ನಮ್ಮ ಜೀವಿತಾವಧಿಯಲ್ಲಿದೆಯೇ ನಾವೇ ನರಕದ ಬಾಗಿಲನ್ನು ಮುಚ್ಚಿಬಿಡಬಹುದು.

ಆದರೆ, ಕಾಮ, ಕ್ರೋಧ ಮತ್ತು ಲೋಭವನ್ನು ಬಿಡುವುದು ಅಷ್ಟು ಸುಲಭವಲ್ಲ. ಮನುಷ್ಯನ ಜೀವನವನ್ನು ಹಾಳು ದಾರಿಗೆ ತಳ್ಳುವ ಸಂಗತಿಗಳೂ ಕೂಡ ಇವುಗಳೇ ಆಗಿವೆ. ಕಾಮ ಎಂಬುದು ಕ್ರೋಧಕ್ಕೂ ಲೋಭಕ್ಕೂ ಮೂಲ. ಕಾಮಾತುರಾಣಾಂ ನರುಚಿಂ ನ ವೇದಾ ನ ಲಜ್ಜಾ.. ಎಂಬ ಮಾತಿದೆ. ಕಾಮದ ಅಡಿಯಾಳಾದವನು ಎಂತಹ ಕೆಟ್ಟ ಕೆಲಸಕ್ಕೂ ಹೇಸುವುದಿಲ್ಲ. ಇನ್ನು, ಕ್ರೋಧವೂ ನಮ್ಮ ಜೀವನವನ್ನು ಅಡಿಮೇಲು ಮಾಡಿಬಿಡುತ್ತದೆ. ಕ್ರೋಧ ಅಥವಾ ಕೋಪದಿಂದ ಯಾವುದೇ ಪ್ರಯೋಜನವಿಲ್ಲ. ಇದರಿಂದ ಅನಾಹುತಗಳೇ ಹೆಚ್ಚು. ಲೋಭತನದಿಂದ ನಾವು ಸಂಕುಚಿತರಾಗುತ್ತಲೇ ಹೋಗುತ್ತೇವೆ. ಯಾವುದು ನಮ್ಮದಲ್ಲವೋ ಅದೆಲ್ಲವೂ ನಮ್ಮದೆಂಬ ಭ್ರಮೆಯಲ್ಲಿಯೇ ಬದುಕುತ್ತಿರುತ್ತೇವೆ. ಇದರಿಂದ ಸ್ವಹಿತವೂ ಲೋಕಹಿತವೂ ಕೆಡುವುದಕ್ಕೆ ಕಾರಣರಾಗುತ್ತೇವೆ. ಶ್ರೀ ಕೃಷ್ಣ ಈ ಮೂರನ್ನು ತ್ಯಜಿಸುವುವ ಮೂಲಕ ಆತ್ಮವನ್ನು ಶುದ್ಧವಾಗಿಸಿಕೊಳ್ಳಬಹುದು ಎನ್ನುತ್ತಾನೆ. ಇವುಗಳೇ ನರಕದ ದ್ವಾರವಾಗಿರುವುದರಿಂದ ಇವುಗಳಿಂದಾಗಿ ನಾವು ಮಾಡುವ ಅನಾಚಾರಗಳು ನಮ್ಮನ್ನು ನೇರವಾಗಿ ನರಕದೆಡೆಗೆ ಒಯ್ಯುತ್ತವೆಂಬುದು ಇದರ ಒಳಾರ್ಥ.

ಕಾಮ, ಕ್ರೋಧ ಮತ್ತು ಲೋಭಗಳು ಜೀವನದಲ್ಲಿ ಅಗತ್ಯವಾದ ಸಂಗತಿಗಳೇ ಅಲ್ಲ. ಆದರೆ ಇವು ಮೂರನ್ನು ಬಿಟ್ಟವರು ಈ ಕಲಿಯುಗದಲ್ಲಿ ಸಿಗಲಾರರು. ಆದರೆ ಈ ಮೂರನ್ನು ಎಲ್ಲರೂ ತ್ಯಜಿಸಿ ಬದುಕಿದಲ್ಲಿ ಯಾರೂ ನರಕವನ್ನು ಸೇರಲಾರರು ಅಲ್ಲದೆ ಭುವಿಯೇ ಸ್ವರ್ಗವಾಗುತ್ತದೆ. ನಿಸ್ವಾರ್ಥದಿಂದ ಕೂಡಿದ ಬದುಕಿನ ಮಾರ್ಗಗಳನ್ನು ಅಳವಡಿಸಿಕೊಂಡಾಗ ಇವು ಮೂರನ್ನು ಸುಲಭವಾಗಿ ತ್ಯಜಿಸಬಹುದು.

ನರಕ ಸ್ವರ್ಗಗಳು ಬದುಕಿಗೆ ನೀತಿಯ ದಾರಿಯನ್ನು ಅನುಸರಿಸಿ ಎಂಬುದನ್ನು ಎಚ್ಚರಿಸಲು ಇರುವಂಥದ್ದು. ಆದರೆ ನಾವು ಅನೀತಿಯ ದಾರಿಯನ್ನೇ ತುಳಿಯತ್ತ ಸ್ವರ್ಗಕ್ಕಾಗಿ ಹಂಬಲಿಸುವುದರಲ್ಲಿ ಅರ್ಥವಿಲ್ಲ.

ವಿಷ್ಣುಭಟ್ಟ ಹೊಸ್ಮನೆ

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.