ಗೊಂದಿಹಳ್ಳಿಯ ಶ್ರೀಆಂಜನೇಯ


Team Udayavani, Nov 3, 2018, 3:25 AM IST

89.jpg

ಕಾರ್ಯನಿಮಿತ್ತ ಲೇಪಾಕ್ಷಿಗೆ ತೆರಳುವಾಗೊಮ್ಮೆ, ವ್ಯಾಸರು ಗೊಂದಿಹಳ್ಳಿಯಲ್ಲಿ ತಂಗಿದ್ದರಂತೆ. ಅಂದು ರಾತ್ರಿ ರಾಯರ ಕನಸಿಗೆ ಬಂದ ಆಂಜನೇಯ-“ಇದು ನಾನಿರುವ ಜಾಗ’ ಎಂದನಂತೆ ! ಗೊಂದಿಹಳ್ಳಿಯ ಆಂಜನೇಯನನ್ನು ಕುರಿತಂತೆ ಇರುವ ಕಥೆ ಇದು. 

ನಮ್ಮಲ್ಲಿ ಹಲವು ಹನುಮನ ದೇಗುಲಗಳು, ಐತಿಹಾಸಿಕ, ಪೌರಾಣಿಕ ಮತ್ತು ಧಾರ್ಮಿಕ ಹಿನ್ನೆಲೆಯಲ್ಲಿ ನಿರ್ಮಾಣವಾಗಿವೆ.  ದೇವತಾ ಶಕ್ತಿಯ ಕಾರಣಗಳಿಂದ ಹಲವು ಕ್ಷೇತ್ರಗಳು ಹಲವು ಕಾರಣಗಳಿಂದ ಪ್ರಸಿದ್ಧವಾಗಿದೆ. ಇಂಥ ಸ್ಥಳಗಳ ಪೈಕಿ ಶ್ರೀವ್ಯಾಸರಾಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕ್ಷೇತ್ರಗಳಲ್ಲಿ ಗೊಂದಿಹಳ್ಳಿಯ ಆಂಜನೇಯ ಸ್ವಾಮಿ ದೇವಾಲಯವು ಒಂದು. 

 ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಪುರುವರ ಹೋಬಳಿಯ ಗೊಂದಿಹಳ್ಳಿಯಲ್ಲಿ ಈ ದೇವಾಲಯವಿದೆ. 
 ದೇವರ ವಿಗ್ರಹ 5.5 ಅಡಿ ಎತ್ತರ ಮತ್ತು 5 ಅಡಿ ಅಗಲವಿದೆ. ದೇವಾಲಯವು ದಕ್ಷಿಣಾಭಿಮುಖವಾಗಿದ್ದು ದೇವರ ಮುಖ ಪೂರ್ವಕ್ಕೆ ಇದೆ. ಇದು ಅಭಯಪ್ರದ ಆಂಜನೇಯ ದೇವರು. ಈ ಕಾರಣದಿಂದ ಭಕ್ತರನ್ನು ಸದಾ ಪೊರೆಯುವ ಕ್ಷೇತ್ರವೆಂದು ಪ್ರಸಿದ್ಧವಾಗಿದೆ.  ದೇವರ ವಿಗ್ರಹದ ಬಾಲದಲ್ಲಿ ಗಂಟೆಯ ರಚನೆಯಿದ್ದು, ಇದು ವ್ಯಾಸರಾಯ ಪ್ರತಿಷ್ಠಾಪಿತ ವಿಗ್ರಹವೆಂದು ದೃಢವಾಗಿದೆ. 

ಈ ಕ್ಷೇತ್ರ ಅತಿ ಪ್ರಾಚೀನವಾಗಿದ್ದು ರಾಮಾಯಣದ ಘಟನೆಗಳ ಕಥೆಯೂ ಇದರಲ್ಲಿ ಬೆರೆತಿದೆ. ಇಲ್ಲಿನ ಬಂಡೆಗಲ್ಲಿನಲ್ಲಿ ಆಂಜನೇಯನ ಪಾದದ ಚಿತ್ರವಿತ್ತು. ವ್ಯಾಸರಾಯರು ಈ ಮಾರ್ಗವಾಗಿ ಲೇಪಾಕ್ಷಿಗೆ ತೆರಳುವಾಗ ಗೊಂದಿಹಳ್ಳಿಯಲ್ಲಿ ತಂಗಿದ್ದರಂತೆ. ಆ ದಿನ ರಾತ್ರಿ ಕನಸಿನಲ್ಲಿ ಆಂಜನೇಯ ಕಾಣಿಸಿಕೊಂಡು, ಇಲ್ಲಿ ತನ್ನ ಸಾನಿಧ್ಯ ಸದಾ ಇರುವುದಾಗಿ ತಿಳಿಸಿದನಂತೆ. ಈ ಹಿನ್ನೆಲೆಯಲ್ಲಿ ವ್ಯಾಸರಾಯರು ಈ ಸ್ಥಳದಲ್ಲಿ ದೇವರ ಪ್ರತಿಷ್ಠಾಪನಾಕಾರ್ಯ ನಡೆಸಿದರಂತೆ. ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯ ಶಿಥಿಲಾವಸ್ಥೆ ತಲುಪಿತ್ತು. ಆಗ ಇಲಾಖೆಯ ಅನುಮತಿ ಪಡೆದು ಗ್ರಾಮಸ್ಥರೆಲ್ಲ ಸೇರಿ ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡರು. ಜೀರ್ಣೋದ್ಧಾರದ ಕೆಲಸ ಆರಂಭಿಸಿದಾಗ, ಹಳೆ  ಕಂಬವೊಂದರಲ್ಲಿ ಈ ದೇವಾಲಯ ಕ್ರಿ.ಶ.1465 ರಲ್ಲಿ ಪುನರ್‌ ಪ್ರತಿಷ್ಠಾಪನೆಗೊಂಡ ಉಲ್ಲೇಖ ದೊರೆತಿತ್ತು.  ದೇವಾಲಯವನ್ನು ಈಗಿನ ಸ್ವರೂಪಕ್ಕೆ ಅಣಿಗೊಳಿಸಿ 1999 ರಲ್ಲಿ ಪುನರ್‌ ಪ್ರತಿಷ್ಠಾಪನಾ ಮಹೋತ್ಸವ ನಡೆಸಲಾಯಿತು. 

ದೇವಾಲಯದ ಬಲಭಾಗದಲ್ಲಿ, ಏಕ ಶಿಲೆಯಿಂದ ಕೆತ್ತಲ್ಪಟ್ಟ 30 ಅಡಿ ಎತ್ತರ, 13 ಅಡಿ ಅಗಲ, 5 ಅಡಿ ದಪ್ಪದ ನಿಂತ ಭಂಗಿಯಲ್ಲಿರುವ ಆಂಜನೇಯ ವಿಗ್ರಹವಿದೆ. ಬೆಂಗಳೂರಿನ ದೇವನಹಳ್ಳಿಯಿಂದ ಕಲ್ಲನ್ನು ತಂದು ವಿಗ್ರಹ ಇಲ್ಲಿ ಕೆತ್ತಿಸಲಾಗಿದೆ. ಒಟ್ಟು ಸುಮಾರು 90 ಲಕ್ಷ ವೆಚ್ಚದಲ್ಲಿ ಈ ವಿಗ್ರಹ 
ಪ್ರತಿಷ್ಠಾಪನೆ ನಡೆದಿದೆ. ವಿಗ್ರಹ ಪ್ರತಿಷ್ಠಾಪನೆಗಾಗಿ 21 ಅಡಿ ಉದ್ದ, 16 ಅಡಿ ಅಗಲದ ತಳಪಾಯ ನಿರ್ಮಿಸಲಾಗಿದೆ. ಇದಕ್ಕಾಗಿ 650 ಚೀಲ ಸಿಮೆಂಟ್‌, 30ಲೋಡ್‌ ಮರಳು, 30 ಲೋಡ್‌ ಜಲ್ಲಿ ಹಾಗೂ 6.5 ಟನ್‌ ಕಬ್ಬಿಣ ಬಳಸಲಾಗಿದೆ. ದೇವರ ವಿಗ್ರಹದ ತಳಪಾಯದಲ್ಲಿ 150 ಮೂಟೆ(ತಲಾ 50 ಕಿ.ಗ್ರಾಂ.ತೂಕದ ಮೂಟೆ) ಸಕ್ಕರೆ ಹಾಕಿ ಮೇಲ್ಭಾಗದಲ್ಲಿ ಕಾಂಕ್ರಿಟ್‌ ಅಳವಡಿಸಲಾಗಿದೆ. 

ಇಲ್ಲಿ ಪ್ರತಿ ಶನಿವಾರ ದೇವರಿಗೆ ವಿಶೇಷ ಅಲಂಕಾರ ಪೂಜೆ, ಪ್ರಸಾದ ವಿತರಣೆ ಹಾಗೂ ಕಾರಣಿಕ ನಡೆಯುತ್ತದೆ.  ಪ್ರತಿ ವರ್ಷ ವೈಶಾಖ ಶುದ್ಧ ಪಂಚಮಿಯಿಂದ ಹುಣ್ಣಿಮೆಯ ವರೆಗೆ 10 ದಿನ ಕಾಲ ಜಾತ್ರೋತ್ಸವ ನಡೆಯುತ್ತದೆ.   ಸಂತಾನಪ್ರಾಪ್ತಿ, ಉದ್ಯೋಗ, ವ್ಯಾಪಾರ, ಕೌಟುಂಬಿಕ ಶಾಂತಿ, ಶತ್ರುಭಯ ನಿವಾರಣೆಗೆಲ್ಲಾ ಭಕ್ತಾದಿಗಳು ದೇವರ ಮೊರೆ ಹೋಗುತ್ತಾರೆ.

ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

16-wtr

Water: ನೀರು ಭುವನದ ಭಾಗ್ಯ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

15-mother

Mother: ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ ತಾನೇ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

14

UV Fusion: ಅವನೊಂದಿಗೆ ನಡೆವಾಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.