ನಮೋ ಗಣಪತೆಯೇ ನಮಃ


Team Udayavani, Nov 10, 2018, 12:01 PM IST

4455.jpg

ಗಣೇಶನನ್ನು ಪೂಜಿಸುವಲ್ಲಿ, ಒಲಿಸಿಕೊಳ್ಳುವಲ್ಲಿ ಗಣೇಶೋಪನಿಷತ್‌ ಮುಖ್ಯವಾದುದು. ಈ ಗಣೇಶೋಪನಿಷತ್ತಿನ ಪಠಣ, ಗಣೇಶೋಪನಿಷತ್ತಿನ ಮೂಲಕವೇ ಮಾಡುವ ಅಥರ್ವಶೀರ್ಷ ಹವನವು ವಿಶೇಷವಾದುದಾಗಿದೆ. ಶಾಂತಿ ಮಂತ್ರದಿಂದ ಆರಂಭವಾಗಿ ನಮಸ್ತೇ ಗಣಪತಯೇಣ ತ್ವಮೇವ ಪ್ರತ್ಯಕ್ಷಂ ತತ್ವಮಸಿ ಎಂದು ಆರಂಭಗೊಳ್ಳುವ ಈ ಉಪನಿಷತ್ತು ಮೊದಲ ಭಾಗದಲ್ಲಿ ಪ್ರಾರ್ಥನೆ, ಮಧ್ಯಭಾಗದಲ್ಲಿ ಗಣೇಶನ ಸ್ವರೂಪ ವರ್ಣನೆ, ಆಮೇಲೆ ಏಕಾಕ್ಷ$ರ ಮಹಾಮಂತ್ರ ಹಾಗೂ ಅಷ್ಟಾಕ್ಷ$ರ ಮೂಲಮಂತ್ರಗಳನ್ನು ಒಳಗೊಂಡಿದೆ. 

ಗಣಪತಿ ಅಥರ್ವಶೀರ್ಷ ಅಥವಾ ಗಣೇಶೋಪನಿಷತ್‌ ಎಂದು ಕರೆಯಲ್ಪಡುವ ಗಣಪತಿಸ್ತುತಿಯ ಮಂತ್ರ ಪ್ರಸಿದ್ಧವಾದುದು. ಇದನ್ನು ಕೇಳುತ್ತಿದ್ದರೆ, ಕರ್ಣಾನಂದದ ಜೊತೆಗೆ ಮನಸ್ಸಿಗೂ ಆನಂದವಾಗುತ್ತದೆ. ನಿರ್ವಿಘ್ನದಾಯಕನಾದ ಗಣಪತಿ ಆದಿಪೂಜಿತನಾಗಿರುವುದರ ಜೊತೆಗೆ, ಹೆಚ್ಚಿನ ಜನರು ಇಷ್ಟಪಡುವ ದೇವನಾಗಿದ್ದಾನೆ. ಹಾಗಾಗಿಯೇ  ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಮ್‌ | ಅನೇಕ ದಂತಂ ಭಕ್ತಾನಾಮ್‌ ಏಕದಂತಮುಪಾಸ್ಮಹೇ ||, ಎಂಬ ಶ್ಲೋಕ ಹುಟ್ಟಿಕೊಂಡಿದ್ದು. 

ಗಣೇಶನನ್ನು ಪೂಜಿಸುವಲ್ಲಿ, ಒಲಿಸಿಕೊಳ್ಳುವಲ್ಲಿ ಗಣೇಶೋಪನಿಷತ್‌ ಮುಖ್ಯವಾದುದು. ಈ ಗಣೇಶೋಪನಿಷತ್ತಿನ ಪಠಣ, ಗಣೇಶೋಪನಿಷತ್ತಿನ ಮೂಲಕವೇ ಮಾಡುವ ಅಥರ್ವಶೀರ್ಷ ಹವನವು ವಿಶೇಷವಾದುದಾಗಿದೆ. ಶಾಂತಿ ಮಂತ್ರದಿಂದ ಆರಂಭವಾಗಿ ನಮಸ್ತೇ ಗಣಪತಯೇಣ ತ್ವಮೇವ ಪ್ರತ್ಯಕ್ಷಂ ತತ್ವಮಸಿ ಎಂದು ಆರಂಭಗೊಳ್ಳುವ ಈ ಉಪನಿಷತ್ತು ಮೊದಲ ಭಾಗದಲ್ಲಿ ಪ್ರಾರ್ಥನೆ, ಮಧ್ಯಭಾಗದಲ್ಲಿ ಗಣೇಶನ ಸ್ವರೂಪ ವರ್ಣನೆ, ಆಮೇಲೆ ಏಕಾಕ್ಷ$ರ ಮಹಾಮಂತ್ರ ಹಾಗೂ ಅಷ್ಟಾಕ್ಷ$ರ ಮೂಲಮಂತ್ರಗಳನ್ನು ಒಳಗೊಂಡಿದೆ. ಕೊನೆಯಲ್ಲಿ ಗಣಪತಿ ಧ್ಯಾನ ಅಥವಾ ಶ್ಲೋಕ ಮತ್ತು ಮಾಲಾಮಂತ್ರದ ಮೂಲಕ ಇದು ಪೂರ್ಣಗೊಳ್ಳುತ್ತದೆ. ಸ್ವರಪೂರ್ವಕವಾಗಿ ಇದನ್ನು ಉಚ್ಚರಿಸಿದರೆ ಕೇಳುಗರೂ ತನ್ಮಯತೆಯನ್ನು ಹೊಂದಿ ಗಣಪತಿಯ ಕೃಪೆಗೆ ಪಾತ್ರರಾಗುವುದರಲ್ಲಿ ಸಂದೇಹವಿಲ್ಲ.

ಉಪನಿಷತ್ತಿನ ಮುಂದುವರಿದ ಭಾಗವಾಗಿ ಇದರ ಫ‌ಲಗಳನ್ನೂ ಹೇಳಲಾಗಿದೆ. ಈ ಅಥರ್ವಶೀರ್ಷವನ್ನು ಯಾರು ಅಧ್ಯಯನ ಮಾಡುತ್ತಾರೋ ಅವರು ಬ್ರಹ್ಮಸಾûಾತ್ಕಾರಕ್ಕೆ ಅರ್ಹರಾಗುತ್ತಾರೆ ಎನ್ನಲಾಗಿದೆ.  ಅವರು ವಿಘ್ನಗಳಿಗೊಳಗಾದರೆ, ವಿಘ್ನಗಳೇ ಅವರಿಂದ ದೂರವಾಗಿಬಿಡುತ್ತವೆ. ಅವರು ಎÇÉಾ ಕಡೆಯಿಂಲೂ ಸುಖವನ್ನೇ ಹೊಂದುವವರಾಗುತ್ತಾರೆ. ಪಂಚ ಮಹಾಪಾಪಗಳಿಂದಲೂ ಬಿಡುಗಡೆ ಹೊಂದುತ್ತಾರೆ. ಸಂಜೆ ಇದನ್ನು ಪಠಿಸಿದರೆ ಹಗಲಿನಲ್ಲಿ ಮಾಡಿದ ಪಾಪಗಳನೂ,° ಬೆಳಗ್ಗೆ ಪಠಿಸಿದರೆ ರಾತ್ರಿಯಲ್ಲಿ ಮಾಡಿದ ಪಾಪಗಳನ್ನೂ ಕಳೆದುಕೊಳ್ಳುತ್ತಾರೆ. ಸಂಜೆ ಮತ್ತು ಬೆಳಗ್ಗೆ ಎರಡೂ ಸಮಯದಲ್ಲಿ ಪಠಿಸಿದರೆ ಪಾಪರಹಿತರಾಗುತ್ತಾರೆ. ಸದಾ ಇದನ್ನು ಪಠಿಸುವವರು ವಿಘ್ನರಹಿತರಾಗುತ್ತಾರೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ$ ಎಂಬ ಪುರುಷಾರ್ಥಗಳನ್ನು ಹೊಂದುತ್ತಾರೆ.

ಅಥರ್ವೋಪನಿಷತ್‌ ವಿN°àಶನನ್ನು ಪಠಿಸಲು ಇರುವ ಮಹಾನ್‌ ಮಂತ್ರವಾದುದರಿಂದ ಸಾವಿರಕ್ಕೂ ಹೆಚ್ಚು ಬಾರಿ ಪಠಿಸಿದರೆ ನಮ್ಮೆಲ್ಲ ಇಷ್ಟಾರ್ಥಗಳು ನೆರವೇರುತ್ತದೆ. ಈ ಮಂತ್ರ ಪಠಣದಿಂದ, ವಿದ್ಯಾವಂತ, ಗುಣವಂತ ಮತ್ತು ಉತ್ತಮ ವಾಗ್ಮಿಯಾಗಲು ಸಾಧ್ಯ. ವ್ಯಕ್ತಿಯೊಬ್ಬ ಅಥರ್ವಶೀರ್ಷ ಮುಖೇನ ಯಜ್ಞವನ್ನು ಮಾಡುವುದರಿಂದ, ಐಶ್ವರ್ಯವಂತನೂ, ಕೀರ್ತಿವಂತನೂ, ಮೇಧಾವಿಯೂ ಆಗುತ್ತಾನಲ್ಲದೆ ಸಕಲ ಸುಫ‌ಲಗಳನ್ನು ಹೊಂದುತ್ತಾನೆ. ಹೀಗೆ ಸಕಲ ಸಿದ್ಧಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಸಿದ್ಧಿಯನ್ನು ಪಡೆಯಲು ಸಾಧನೆ ಬೇಕೇಬೇಕು. ದೇವರ ನಂಬಿಕೆಯೂ ಅಂತಹ ಸಾಧನೆಯನ್ನೇ ಹೇಳುತ್ತದೆ. ಮಂತ್ರಗಳಲ್ಲಿನ ತಲ್ಲೀನತೆಯೂ ಒಂದು ಸಾಧನೆಯೇ. ಯಾಕೆಂದರೆ ಮರ್ಕಟನಂತಾಡುವ ಮನಸ್ಸನ್ನು ನಿಯಂತ್ರಿಸಿದರಷ್ಟೇ ಪಠಣ, ತಲ್ಲೀನತೆ ಎಲ್ಲವೂ ಸಾಧ್ಯ. ನಾವು ಗೊತ್ತಿ¨ªೋ, ಗೊತ್ತಿಲ್ಲದೆಯೋ ಬದುಕಿನ ಅನಿವಾರ್ಯತೆಗಾಗಿಯೋ ಒಂದಲ್ಲ ಒಂದು ಪಾಪಕಾರ್ಯದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತೊಡಗಿಕೊಳ್ಳುತ್ತೇವೆ. ಅಂತಹ ಪಾಪಗಳನ್ನು ಕಳೆಯುವವನು ಗಣನಾಯಕ. ಆತನನ್ನು ಪಠಿಸುವ ಮೂಲಕ ನಮ್ಮ ಮನಸ್ಸನ್ನು ಶುದ್ಧವಾಗಿಸಿಕೊಳ್ಳಲು ಈ ಉಪನಿಷತ್ತು ಸಹಕಾರಿಯಾಗಿದೆ. ಪರಮಾತ್ಮನ ಸ್ವರೂಪವನ್ನು ಹಲವು ಬಗೆಗಳಲ್ಲಿ ನಾವು ಕಾಣುವವರು. ಮತ್ತು ಮಂತ್ರ ತಂತ್ರ ಮುಖೇನ ಪೂಜಿಸುವವರು. ಮನುಷ್ಯನ ಪ್ರಾರ್ಥನೆಯೆಂದರೆ ಮುಖ್ಯವಾಗಿ ಇಷ್ಟಾರ್ಥ ಸಿದ್ಧಿ. ಇಂತಹ ಉಪನಿಷತ್ತುಗಳನ್ನು ದೇವರು ತೋರಿದದಾರಿ ಎಂದು ಪರಿಗಣಿಸಿ ಪಠಿಸಿದರೆ, ಆಲಿಸಿದರೆ ನಾವು ವಿಘ್ನರಹಿತವಾದ ಜೀವನ ನಡೆಸಬಹುದು.

ಓಂ ನಮೋ ವ್ರಾತಪತಯೇ ನಮೋ ಗಣಪತೆಯೇ ನಮಃ ಪ್ರಮಥಪತೆಯೇ ನಮಸ್ತೇಸ್ತು
ಲಂಬೋದರಾಯೈಕದಂತಾಯ ವಿಘ್ನನಾಶಿನೇ ಶಿವಸುತಾಯ ಶ್ರೀ ವರವರದಮೂರ್ತಯೇ ನಮಃ||

ಜಗತ್ತಿನ ಪರಮಸತ್ಯ ಸಾವು. ಅಂತಹ ಸಾವು ಬರುತ್ತದೆಂಬುದು ಎಲ್ಲರಿಗೂ ಗೊತ್ತು. ಆದರೆ ಹೇಗೆ? ಯಾವಾಗ? ಎಲ್ಲಿ? ಎಂಬುದು ಯಾರಿಗೂ ಗೊತ್ತಿಲ್ಲ! ಆದರೂ ಸಾವು ನಮ್ಮನ್ನು ದೇವರ ಬಳಿ ಸೇರಿಸಲಿ ಎಂದುಕೊಳ್ಳುತ್ತೇವೆ. ಸಾವಿನ ಘಳಿಗೆಯಲ್ಲಿ ದೇವರನ್ನು ಸ್ಮರಿಸಿದರೆ ಸ್ವರ್ಗಪ್ರಾಪ್ತಿಯೋ ಪುನರ್ಜನ್ಮದಿಂದ ಮುಕ್ತಿಯೋ ದೊರೆಯುವುದೆಂಬ ನಂಬಿಕೆ ಹಿಂದಿನಿಂದಲೂ ಬಂದಿದೆ. 

ಆತ್ಮವು ದೇವರನ್ನು ಸೇರಲು ಏನು ಮಾಡಬೇಕು?

ಆತ್ಮವು ದೇಹದ ಒಳಗೆ ಇದ್ದಷ್ಟು ಹೊತ್ತು ಮಾತ್ರ ನಮ್ಮ ದೇಹಕ್ಕೆ ಬೆಲೆ. ಆತ್ಮವು ದೇಹವನ್ನು ತ್ಯಜಿಸಿದ ತಕ್ಷಣ ಅದು ಜೀವ ಎಂದು ಕರೆಸಿಕೊಳ್ಳದೆ ಶವ, ಕಳೇಬರ ಮೊದಲಾದ ಶಬ್ದಗಳಿಂದ ಕರೆಸಿಕೊಳ್ಳುತ್ತದೆ. ಆ ಕ್ಷಣದಿಂದ, ಅದೊಂದು ಬೇಗನೆ ಕೆಡುವ ವಸ್ತುವಾಗಿಬಿಡುತ್ತದೆ. ಆತ್ಮವೆಂಬುದೇ ನಮ್ಮ ಅಸ್ತಿತ್ವ. ಹಾಗಾಗಿ, ಜೀವನದ ಅಂತ್ಯದಲ್ಲಿ ಆತ್ಮವು ದೇವರನ್ನು ಸೇರಲಿ ಎಂದು ಪ್ರತಿಯೊಬ್ಬನೂ ಪ್ರಾರ್ಥಿಸುತ್ತಾನೆ. ಯೋಚಿಸುತ್ತಾನೆ.  ಮತ್ತೂಂದು ಜನ್ಮ ಈ ಭುವಿಯಲ್ಲಿ ಬೇಡ ಎಂಬ ನಿರ್ಧಾರ ತಳೆಯುವವರೇ ಹೆಚ್ಚು. ಮಾನವ ಜನ್ಮ ದೊಡ್ಡದು ಎಂಬ ಮಾತಿದೆ. ಆದರೂ, ಮಾನವನು ಕೊನೆಯಲ್ಲಿ ಬಯಸುವುದು ಈ ದೇಹದಿಂದ ಬಿಡುಗಡೆ ಪಡೆಯುವುದು ಮತ್ತು ತನ್ನ ಆತ್ಮ ದೇವರನ್ನು ಸೇರುವುದು. ನಮ್ಮ ಆತ್ಮ ದೇವರನ್ನು ಸೇರಲು ಏನು ಮಾಡಬೇಕು? ಎಂಬ ಪ್ರಶ್ನೆ ಕೊನೆಯ ಘಳಿಗೆಯಲ್ಲಿ ಎಲ್ಲರಿಗೂ ಬರುವಂಥದ್ದು. ಪ್ರತಿಯೊಬ್ಬ ಹಿರಿಯರೂ ಅಂದರೆ ಸಾವಿನಂಚಿನಲ್ಲಿರುವವರು ದೇವರಪಾದವನ್ನು ಸೇರಿದರೆ ಸಾಕಪ್ಪ! ಎಂದು ಉದ್ಗರಿಸುವುದೇ ಇದಕ್ಕೆ ಉದಾಹರಣೆ.

ಬದುಕಿನ ಕೊನೆಯಲ್ಲಿರುವ ಹಿರಿಯರು ಯಾವಾಗಲೂ ಶಿವಶಿವ ಅಂತಲೋ, ರಾಮರಾಮ ಅಂತಲೋ, ಕೃಷ್ಣಕೃಷ್ಣ ಅಂತಲೋ ಪ್ರಾಣ ಬಿಟ್ಟರೆ ಸಾಕು ಎಂದುಕೊಳ್ಳುವುದನ್ನು ಕೇಳಿರುತ್ತೇವೆ. ಜಗತ್ತಿನ ಪರಮಸತ್ಯ ಸಾವು. ಅಂತಹ ಸಾವು ಬರುತ್ತದೆಂಬುದು ಎಲ್ಲರಿಗೂ ಗೊತ್ತು. ಆದರೆ ಹೇಗೆ? ಯಾವಾಗ? ಎಲ್ಲಿ? ಎಂಬುದು ಯಾರಿಗೂ ಗೊತ್ತಿಲ್ಲ! ಆದರೂ ಸಾವು ನಮ್ಮನ್ನು ದೇವರ ಬಳಿ ಸೇರಿಸಲಿ ಎಂದುಕೊಳ್ಳುತ್ತೇವೆ. ಸಾವಿನ ಘಳಿಗೆಯಲ್ಲಿ ದೇವರನ್ನು ಸ್ಮರಿಸಿದರೆ ಸ್ವರ್ಗಪ್ರಾಪ್ತಿಯೋ ಪುನರ್ಜನ್ಮದಿಂದ ಮುಕ್ತಿಯೋ ದೊರೆಯುವುದೆಂಬ ನಂಬಿಕೆ ಹಿಂದಿನಿಂದಲೂ ಬಂದಿದೆ. ಆದರೆ, ಈ ದೇವರ ಸಾನಿಧ್ಯವನ್ನು ಸೇರಲು ಮಾಡಬೇಕಾದುದಾದರೂ ಏನು? ಹಿರಿಯರು ಅಂದುಕೊಂಡಂತೆ, ಪರಿಶುದ್ಧ ಮನಸ್ಸಿನಿಂದ ದೇವರನ್ನು ಸ್ಮರಿಸುತ್ತ ಸದ್ಭಾವವನ್ನು ಹೊಂದಿದ್ದಾಗ ಮಾತ್ರವೇ ನಮ್ಮ ಆತ್ಮ ದೇವರನ್ನ ಸೇರಲು ಸಾಧ್ಯ.

ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಇದನ್ನೇ ಹೇಳುತ್ತಾನೆ.
ಯಂ ಯಂ ವಾಪಿ ಸ್ಮರನ್‌ ಭಾವಂ ತ್ಯಜತ್ಯನೆ¤à ಕಲೇವರಮ… | ತಂ ತಮೇವೈತಿ ಕೌಂತೇಯ ಸದಾ ತದ್ಭಾವಿತಃ ||,
(ಅಧ್ಯಾಯ  8, ಶ್ಲೋಕ 6) ಅಂದರೆ, ಮನುಷ್ಯನು ತನ್ನ ದೇಹವನ್ನು ಬಿಡುವ ವೇಳೆಯಲ್ಲಿ ಯಾವ ಭಾವವನ್ನು ಸ್ಮರಿಸುತ್ತಾನೋ ಅದೇ ಭಾವವನ್ನು ಖಂಡಿತವಾಗಿಯೂ ಪಡೆಯುತ್ತಾನೆ ಎಂದರ್ಥ.
ಮರಣಕಾಲದಲ್ಲಿ ದೇವ ಸ್ಮರಣೆಯಂಥ ಆಧ್ಯಾತ್ಮಿಕ ಭಾವದಲ್ಲಿದ್ದರೆ ದೇಹವನ್ನು ಬಿಟ್ಟ ಆತ್ಮವು ದಿವ್ಯವಾದ ಭಾವವನ್ನೇ ಪಡೆಯುತ್ತದೆ ಮತ್ತು ದೇವರನ್ನು ಸೇರುತ್ತದೆ. ಇದಕ್ಕೆ ಎಲ್ಲರಿಗೂ ತಿಳಿದಿರುವ ಶ್ವೇತಕುಮಾರ ಚರಿತ್ರೆ ಸಾಕ್ಷಿಯಾಗಿದೆ. ಶ್ವೇತಕುಮಾರನು, ಸಾಯುವ ಸಮಯದಲ್ಲಿ ಶಿವಶಿವ ಎಂದು ಉಚ್ಚರಿಸಿದ ಕಾರಣದಿಂದಾಗಿ ಮತ್ತೆ ಅವನ ಆತ್ಮ ದೇಹವನ್ನು ಸೇರುತ್ತದೆ ಎಂಬುದು ಈ ಕಥೆಯ ಸಾರಾಂಶ. ಯದ್ಭಾವಂ ತದ್ಭವತಿ ಎಂಬಂತೆ ನಾವು ಏನನ್ನು ಅಂದುಕೊಳ್ಳುತ್ತೇವೆಯೋ ಅದೇ ಆಗುತ್ತಲೇ ಹೋಗುತ್ತದೆ. ನಮ್ಮ ಯೋಚನೆಗಳು ಸದಾ ಸಕಾರಾತ್ಮಕವಾಗಿರಬೇಕು. ಪ್ರತಿಯೊಂದು ಕ್ಷಣವೂ ನಮಗೆ ಹೊಸತೇ; ಕಳೆದ ಪ್ರತಿಯೊಂದು ಕ್ಷಣವೂ ಹಳೆಯದು, ಮರಳಿ ಪಡೆಯಲಾಗದ್ದು. ಹಾಗಾಗಿ, ಸದಾಕಾಲ ದೇವಚಿಂತನೆಯಿಂದ ಉತ್ತಮಭಾವವನ್ನು ಬೆಳಸಿಕೊಂಡಾಗ ಪ್ರತಿಕ್ಷಣವೂ ನಮಗೆ ಒಳ್ಳೆಯದಾಗುತ್ತದೆ. ಸಣ್ತೀಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಜೀವಿತಾವಧಿಯಲ್ಲೂ ಮರಣಾನಂತರದಲ್ಲೂ ದಿವ್ಯತೆಯನ್ನು ಹೊಂದಲು ಸಾಧ್ಯ.

ವಿಷ್ಣು ಭಟ್‌ ಹೊಸ್ಮನೆ 

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.