ಕಾರ್ತಿಕ ಮಾಸದ ಮಹತ್ವ ಏನು ಗೊತ್ತಾ?


Team Udayavani, Nov 24, 2018, 5:40 AM IST

1aa.jpg

 ಕಾರ್ತೀಕ ಮಾಸವು, ಹರಿಯು ಸಂಪ್ರೀತನಾದ ಕಾಲವೂ ಆಗಿರುವುದರಿಂದ ತುಳಸೀ ಪೂಜೆಯನ್ನೂ ಇದೇ ಮಾಸದಲ್ಲಿ ಮಾಡಲಾಗುತ್ತದೆ. ಒಳ್ಳೆಯ ಕಾಲದಲ್ಲಿ ಒಳ್ಳೆಯ ಕಾರ್ಯವನ್ನು ಮಾಡಿದರೆ ಅದರ ಫ‌ಲವು ಇನ್ನೂ ಒಳ್ಳೆಯದೇ ಆಗಿರುತ್ತದೆ ಎಂಬ ನಂಬಿಕೆ ಇದೆ. 

ಕಾರ್ತಿಕ ಮಾಸವು ದ್ವಾದಶ ಮಾಸಗಳಲ್ಲಿಯೇ ಶ್ರೇಷ್ಠವಾದುದು. ಪುಣ್ಯಕರವಾದವುಗಳಿಗೆಲ್ಲವೂ ಪುಣ್ಯಕರವೂ,  ಪಾವನಕರವಾಗಿರುವುದಕ್ಕೆಲ್ಲ ಪಾವನವೂ ಆಗಿರುವಂಥದ್ದು ಎಂಬುದು ಇದರ ಅರ್ಥ. ಹಿಂದೂ ಧರ್ಮದಲ್ಲಿ ಕಾಲವನ್ನು ಹನ್ನೆರಡು ಮಾಸಗಳಲ್ಲಿ ಮತ್ತು ಹನ್ನೆರಡು ತಿಂಗಳಲ್ಲಿ ಗುರುತಿಸಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಚೈತ್ರದಿಂದ ಆರಂಭಗೊಂಡು ಎಂಟನೆಯ ಮಾಸವೇ ಕಾರ್ತಿಕ ಮಾಸ. ಈ ಮಾಸದ ಮೊದಲ ದಿನವೇ ದೀಪಾವಳಿ ಮತ್ತು ಎರಡನೆಯ ದಿನ ಗೋಪೂಜೆ. ತಿಂಗಳಾಂತ್ಯದವರೆಗೂ ಮನೆ-ಮಂದಿರಗಳಲ್ಲಿ ದೀಪೋತ್ಸವ, ಭಜನೆ, ಸಂಕೀರ್ತನೆಗಳು ನಡೆಯುವ ಸುಕಾಲ ಈ ಮಾಸ. ಹರಿಸ್ಮರಣೆ, ಇಂದ್ರಿಯನಿಗ್ರಹ, ಗುರುಸೇವೆ, ತುಳಸೀಪೂಜೆ, ದೀಪಾರಾಧನೆ, ಅನ್ನದಾನ, ಉಪವಾಸಾದಿ ವ್ರತಾಚರಣೆಗೆ ಕಾರ್ತಿಕಮಾಸವು ಪವಿತ್ರವಾದ ಕಾಲವೆಂದು ಧರ್ಮಗ್ರಂಥಳಲ್ಲಿ ಹೇಳಲಾಗಿದೆ.

ಕಾರ್ತಿಕ ಮಹಾತ್ಮ$Â ಮತ್ತು ನಾರದೀಯ ಪುರಾಣಗಳಲ್ಲಿ ಹೇಳಲ್ಪಟ್ಟ ರುಕಾ¾ಂಗದನ ಚರಿತ್ರೆ ಬಹಳ ಸ್ವಾರಸ್ಯದಿಂದ ಕೂಡಿದೆ.  ಕಾರ್ತಿಕಮಾಸದಲ್ಲಿ ಏಕಾದಶೀ ವ್ರತವನ್ನು ಆಚರಿಸಿ ಹರಿಯ ಕೃಪೆಗೊಳಗಾದುದನ್ನು ಈ ಕಥೆ ಮಾರ್ಮಿಕವಾಗಿ ವಿವರಿಸುತ್ತದೆ. ರುಕಾ¾ಂಗದನ ಆಧಿಪತ್ಯದ ರಾಜ್ಯದಲ್ಲಿ ಪ್ರಜೆಗಳು ಈ ಏಕಾದಶಿ ವ್ರತವನ್ನು ಆಚರಿಸುವುದರಿಂದಾಗಿ ಎಲ್ಲರೂ ವಿಷ್ಣುಲೋಕವನ್ನೇ ಸೇರುತ್ತಿದ್ದರು. ಇದರಿಂದ ಯಮಲೋಕ ಮತ್ತು ದೇವಲೋಕವು ಖಾಲಿಯಾಗ ತೊಡಗಿತು. ದೇವತೆಗಳು ಬ್ರಹ್ಮನ ಬಳಿಯ ವಿಷಯವನ್ನು ಅರುಹಿದಾಗ, ಬ್ರಹ್ಮದೇವ ರುಕಾ¾ಂಗದನ ವ್ರತವನ್ನು ಕೆಡಿಸಲೆಂದು ಮೋಹಿನಿಯನ್ನು ಸೃಷ್ಟಿಮಾಡಿ ವಳಿಗೆ ಮಾಡಬೇಕಾದ ಕಾರ್ಯವನ್ನು ತಿಳಿಸಿದ. ರುಕಾ¾ಂಗದನನ್ನು ತನ್ನತ್ತ ಸೆಳೆದು ಆತ ತನ್ನ ಮಾತನ್ನು ಪಾಲಿಸುವುದಾದರೆ ಮಾತ್ರ ವರಿಸುವೆನೆಂದು ಹೇಳಿದಳು ಮೋಹಿನಿ. ನಂತರ ರುಕಾ¾ಂಗದನಿಂದ ಭಾಷೆ ಪಡೆದು ಮದುವೆಯಾಗುವುದಲ್ಲದೆ, ತನ್ನ ವ್ಯಾಮೋಹದಲ್ಲಿಯೇ ಆತ ಮುಳುಗಿರುವಂತೆ ಮಾಡಿ ವ್ರತವನ್ನು ಕಡೆಗಣಿಸುವಂತೆ ಮಾಡುವಲ್ಲಿ ಸಫ‌ಲಳಾಗುತ್ತಾಳೆ. ಆದರೆ, ರುಕಾ¾ಂಗದ ಕಾರ್ತೀಕ ಮಾಸದ ಏಕಾದಶಿಯ ದಿನ ಮಾತ್ರ ವ್ರತವಾಚರಿಸಲು ಅವಳಲ್ಲಿ ಕೇಳಿಕೊಂಡಾಗ ಅದಕ್ಕೊಪ್ಪದ ಮೋಹಿನಿ, ವ್ರತವನ್ನು ಕೆಡಿಸಲು ತನಗಿಂದು ದೇಹಸುಖವನ್ನು ಕೊಡುವಂತೆ ಹಟಮಾಡುತ್ತಾಳೆ. ರುಕಾ¾ಗಂದನು ಇದನ್ನು ತಿರಸ್ಕರಿಸಿದಾಗ, ಏಕಾದಶಿಯ ದಿನ ಭೋಜನವನ್ನು ಮಾಡಬೇಕು ಅಥವಾ ನಿನ್ನ ಮಗನ ತಲೆಯನ್ನು ಕತ್ತರಿಸಬೇಕು ಎಂದು ಭೀಕರವಾದ ಸವಾಲನ್ನೊಡ್ಡುತ್ತಾಳೆ. ಏಕಾದಶಿ ವ್ರತವನ್ನು ಮುರಿಯಲು ಸಿದ್ಧನಿರದ ರುಕಾ¾ಂಗದ, ಖಡ್ಗವನ್ನೆತ್ತಿ ಮಗನನ್ನು ಬಲಿಕೊಡಲು ಮುಂದಾಗುತ್ತಾನೆ. ಆಗ ಶ್ರೀಮನ್ನಾರಾಯಣನು ಪ್ರತ್ಯಕ್ಷನಾಗಿ, ನಾನು ನಿನ್ನ ಭಕ್ತಿಗೆ ಮೆಚ್ಚಿದ್ದೇನೆ, ನನ್ನ ಲೋಕಕ್ಕೆ ಬಾ ಎಂದು ಕರೆದೊಯ್ಯುತ್ತಾನೆ. ಮಡದಿ ಸಂಧ್ಯಾವಳಿಯೊಂದಿಗೆ ಸ್ವರ್ಗಪ್ರವೇಶ ಮಾಡಿದ ರುಕಾ¾ಂಗದ ಪರಮ ಭಾಗವೋತ್ತಮ ಎಂದು ಪ್ರಸಿದ್ಧನಾಗುತ್ತಾನೆ.

ಈ ಕಥೆಯು ಏಕಾದಶಿ ವ್ರತದ ಮಹಾತೆ¾ಯನ್ನು ಹೇಳುತ್ತದೆ. ಕಾರ್ತೀಕ ಮಾಸವು, ಹರಿಯು ಸಂಪ್ರೀತನಾದ ಕಾಲವೂ ಆಗಿರುವುದರಿಂದ ತುಳಸೀ ಪೂಜೆಯನ್ನೂ ಇದೇ ಮಾಸದಲ್ಲಿ ಮಾಡಲಾಗುತ್ತದೆ. ಒಳ್ಳೆಯ ಕಾಲದಲ್ಲಿ ಒಳ್ಳೆಯ ಕಾರ್ಯವನ್ನು ಮಾಡಿದರೆ ಅದರ ಫ‌ಲವು ಇನ್ನೂ ಒಳ್ಳೆಯದೇ ಆಗಿರುತ್ತದೆ ಎಂಬ ನಂಬಿಕೆ ಇದೆ. ಅಂತೆಯೇ, ಈ ಕಾರ್ತಿಕ ಮಾಸವು ಶ್ರೇಷ್ಠವಾಗಿರುವುದರಿಂದ ಈ ಸಮಯದಲ್ಲಿ ಮಾಡಿದ ಪುಣ್ಯಕಾರ್ಯಗಳು ಹೆಚ್ಚಿನ ಪುಣ್ಯಫ‌ಲಗಳನ್ನು ನೀಡುತ್ತವೆ. ಈ ಮಾಸದಲ್ಲಿ ನಡೆಯುವ ದೀಪೋತ್ಸವಗಳು ದೇವರನ್ನು ಆರಾಧಿಸುವ ಮಾರ್ಗವಾಗಿ ಕಂಡುಬಂದರೂ ನಮ್ಮ ಮನಸ್ಸನ್ನು ಲೌಕಿಕ ಚಿಂತೆಗಳಿಂದ ದೂರವಿರಿಸಿ, ಮನಸ್ಸಿಗೆ ಮುದ ನೀಡುತ್ತ ಚಿತ್ತಶಾಂತಿಗೆ ಕಾರಣವಾಗುತ್ತವೆ.

ವಿಷ್ಣು ಭಟ್‌ ಹೊಸ್ಮನೆ (ಭಾಸ್ವ)

ಟಾಪ್ ನ್ಯೂಸ್

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.