ಕಾರ್ತಿಕ ಮಾಸದ ಮಹತ್ವ ಏನು ಗೊತ್ತಾ?


Team Udayavani, Nov 24, 2018, 5:40 AM IST

1aa.jpg

 ಕಾರ್ತೀಕ ಮಾಸವು, ಹರಿಯು ಸಂಪ್ರೀತನಾದ ಕಾಲವೂ ಆಗಿರುವುದರಿಂದ ತುಳಸೀ ಪೂಜೆಯನ್ನೂ ಇದೇ ಮಾಸದಲ್ಲಿ ಮಾಡಲಾಗುತ್ತದೆ. ಒಳ್ಳೆಯ ಕಾಲದಲ್ಲಿ ಒಳ್ಳೆಯ ಕಾರ್ಯವನ್ನು ಮಾಡಿದರೆ ಅದರ ಫ‌ಲವು ಇನ್ನೂ ಒಳ್ಳೆಯದೇ ಆಗಿರುತ್ತದೆ ಎಂಬ ನಂಬಿಕೆ ಇದೆ. 

ಕಾರ್ತಿಕ ಮಾಸವು ದ್ವಾದಶ ಮಾಸಗಳಲ್ಲಿಯೇ ಶ್ರೇಷ್ಠವಾದುದು. ಪುಣ್ಯಕರವಾದವುಗಳಿಗೆಲ್ಲವೂ ಪುಣ್ಯಕರವೂ,  ಪಾವನಕರವಾಗಿರುವುದಕ್ಕೆಲ್ಲ ಪಾವನವೂ ಆಗಿರುವಂಥದ್ದು ಎಂಬುದು ಇದರ ಅರ್ಥ. ಹಿಂದೂ ಧರ್ಮದಲ್ಲಿ ಕಾಲವನ್ನು ಹನ್ನೆರಡು ಮಾಸಗಳಲ್ಲಿ ಮತ್ತು ಹನ್ನೆರಡು ತಿಂಗಳಲ್ಲಿ ಗುರುತಿಸಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಚೈತ್ರದಿಂದ ಆರಂಭಗೊಂಡು ಎಂಟನೆಯ ಮಾಸವೇ ಕಾರ್ತಿಕ ಮಾಸ. ಈ ಮಾಸದ ಮೊದಲ ದಿನವೇ ದೀಪಾವಳಿ ಮತ್ತು ಎರಡನೆಯ ದಿನ ಗೋಪೂಜೆ. ತಿಂಗಳಾಂತ್ಯದವರೆಗೂ ಮನೆ-ಮಂದಿರಗಳಲ್ಲಿ ದೀಪೋತ್ಸವ, ಭಜನೆ, ಸಂಕೀರ್ತನೆಗಳು ನಡೆಯುವ ಸುಕಾಲ ಈ ಮಾಸ. ಹರಿಸ್ಮರಣೆ, ಇಂದ್ರಿಯನಿಗ್ರಹ, ಗುರುಸೇವೆ, ತುಳಸೀಪೂಜೆ, ದೀಪಾರಾಧನೆ, ಅನ್ನದಾನ, ಉಪವಾಸಾದಿ ವ್ರತಾಚರಣೆಗೆ ಕಾರ್ತಿಕಮಾಸವು ಪವಿತ್ರವಾದ ಕಾಲವೆಂದು ಧರ್ಮಗ್ರಂಥಳಲ್ಲಿ ಹೇಳಲಾಗಿದೆ.

ಕಾರ್ತಿಕ ಮಹಾತ್ಮ$Â ಮತ್ತು ನಾರದೀಯ ಪುರಾಣಗಳಲ್ಲಿ ಹೇಳಲ್ಪಟ್ಟ ರುಕಾ¾ಂಗದನ ಚರಿತ್ರೆ ಬಹಳ ಸ್ವಾರಸ್ಯದಿಂದ ಕೂಡಿದೆ.  ಕಾರ್ತಿಕಮಾಸದಲ್ಲಿ ಏಕಾದಶೀ ವ್ರತವನ್ನು ಆಚರಿಸಿ ಹರಿಯ ಕೃಪೆಗೊಳಗಾದುದನ್ನು ಈ ಕಥೆ ಮಾರ್ಮಿಕವಾಗಿ ವಿವರಿಸುತ್ತದೆ. ರುಕಾ¾ಂಗದನ ಆಧಿಪತ್ಯದ ರಾಜ್ಯದಲ್ಲಿ ಪ್ರಜೆಗಳು ಈ ಏಕಾದಶಿ ವ್ರತವನ್ನು ಆಚರಿಸುವುದರಿಂದಾಗಿ ಎಲ್ಲರೂ ವಿಷ್ಣುಲೋಕವನ್ನೇ ಸೇರುತ್ತಿದ್ದರು. ಇದರಿಂದ ಯಮಲೋಕ ಮತ್ತು ದೇವಲೋಕವು ಖಾಲಿಯಾಗ ತೊಡಗಿತು. ದೇವತೆಗಳು ಬ್ರಹ್ಮನ ಬಳಿಯ ವಿಷಯವನ್ನು ಅರುಹಿದಾಗ, ಬ್ರಹ್ಮದೇವ ರುಕಾ¾ಂಗದನ ವ್ರತವನ್ನು ಕೆಡಿಸಲೆಂದು ಮೋಹಿನಿಯನ್ನು ಸೃಷ್ಟಿಮಾಡಿ ವಳಿಗೆ ಮಾಡಬೇಕಾದ ಕಾರ್ಯವನ್ನು ತಿಳಿಸಿದ. ರುಕಾ¾ಂಗದನನ್ನು ತನ್ನತ್ತ ಸೆಳೆದು ಆತ ತನ್ನ ಮಾತನ್ನು ಪಾಲಿಸುವುದಾದರೆ ಮಾತ್ರ ವರಿಸುವೆನೆಂದು ಹೇಳಿದಳು ಮೋಹಿನಿ. ನಂತರ ರುಕಾ¾ಂಗದನಿಂದ ಭಾಷೆ ಪಡೆದು ಮದುವೆಯಾಗುವುದಲ್ಲದೆ, ತನ್ನ ವ್ಯಾಮೋಹದಲ್ಲಿಯೇ ಆತ ಮುಳುಗಿರುವಂತೆ ಮಾಡಿ ವ್ರತವನ್ನು ಕಡೆಗಣಿಸುವಂತೆ ಮಾಡುವಲ್ಲಿ ಸಫ‌ಲಳಾಗುತ್ತಾಳೆ. ಆದರೆ, ರುಕಾ¾ಂಗದ ಕಾರ್ತೀಕ ಮಾಸದ ಏಕಾದಶಿಯ ದಿನ ಮಾತ್ರ ವ್ರತವಾಚರಿಸಲು ಅವಳಲ್ಲಿ ಕೇಳಿಕೊಂಡಾಗ ಅದಕ್ಕೊಪ್ಪದ ಮೋಹಿನಿ, ವ್ರತವನ್ನು ಕೆಡಿಸಲು ತನಗಿಂದು ದೇಹಸುಖವನ್ನು ಕೊಡುವಂತೆ ಹಟಮಾಡುತ್ತಾಳೆ. ರುಕಾ¾ಗಂದನು ಇದನ್ನು ತಿರಸ್ಕರಿಸಿದಾಗ, ಏಕಾದಶಿಯ ದಿನ ಭೋಜನವನ್ನು ಮಾಡಬೇಕು ಅಥವಾ ನಿನ್ನ ಮಗನ ತಲೆಯನ್ನು ಕತ್ತರಿಸಬೇಕು ಎಂದು ಭೀಕರವಾದ ಸವಾಲನ್ನೊಡ್ಡುತ್ತಾಳೆ. ಏಕಾದಶಿ ವ್ರತವನ್ನು ಮುರಿಯಲು ಸಿದ್ಧನಿರದ ರುಕಾ¾ಂಗದ, ಖಡ್ಗವನ್ನೆತ್ತಿ ಮಗನನ್ನು ಬಲಿಕೊಡಲು ಮುಂದಾಗುತ್ತಾನೆ. ಆಗ ಶ್ರೀಮನ್ನಾರಾಯಣನು ಪ್ರತ್ಯಕ್ಷನಾಗಿ, ನಾನು ನಿನ್ನ ಭಕ್ತಿಗೆ ಮೆಚ್ಚಿದ್ದೇನೆ, ನನ್ನ ಲೋಕಕ್ಕೆ ಬಾ ಎಂದು ಕರೆದೊಯ್ಯುತ್ತಾನೆ. ಮಡದಿ ಸಂಧ್ಯಾವಳಿಯೊಂದಿಗೆ ಸ್ವರ್ಗಪ್ರವೇಶ ಮಾಡಿದ ರುಕಾ¾ಂಗದ ಪರಮ ಭಾಗವೋತ್ತಮ ಎಂದು ಪ್ರಸಿದ್ಧನಾಗುತ್ತಾನೆ.

ಈ ಕಥೆಯು ಏಕಾದಶಿ ವ್ರತದ ಮಹಾತೆ¾ಯನ್ನು ಹೇಳುತ್ತದೆ. ಕಾರ್ತೀಕ ಮಾಸವು, ಹರಿಯು ಸಂಪ್ರೀತನಾದ ಕಾಲವೂ ಆಗಿರುವುದರಿಂದ ತುಳಸೀ ಪೂಜೆಯನ್ನೂ ಇದೇ ಮಾಸದಲ್ಲಿ ಮಾಡಲಾಗುತ್ತದೆ. ಒಳ್ಳೆಯ ಕಾಲದಲ್ಲಿ ಒಳ್ಳೆಯ ಕಾರ್ಯವನ್ನು ಮಾಡಿದರೆ ಅದರ ಫ‌ಲವು ಇನ್ನೂ ಒಳ್ಳೆಯದೇ ಆಗಿರುತ್ತದೆ ಎಂಬ ನಂಬಿಕೆ ಇದೆ. ಅಂತೆಯೇ, ಈ ಕಾರ್ತಿಕ ಮಾಸವು ಶ್ರೇಷ್ಠವಾಗಿರುವುದರಿಂದ ಈ ಸಮಯದಲ್ಲಿ ಮಾಡಿದ ಪುಣ್ಯಕಾರ್ಯಗಳು ಹೆಚ್ಚಿನ ಪುಣ್ಯಫ‌ಲಗಳನ್ನು ನೀಡುತ್ತವೆ. ಈ ಮಾಸದಲ್ಲಿ ನಡೆಯುವ ದೀಪೋತ್ಸವಗಳು ದೇವರನ್ನು ಆರಾಧಿಸುವ ಮಾರ್ಗವಾಗಿ ಕಂಡುಬಂದರೂ ನಮ್ಮ ಮನಸ್ಸನ್ನು ಲೌಕಿಕ ಚಿಂತೆಗಳಿಂದ ದೂರವಿರಿಸಿ, ಮನಸ್ಸಿಗೆ ಮುದ ನೀಡುತ್ತ ಚಿತ್ತಶಾಂತಿಗೆ ಕಾರಣವಾಗುತ್ತವೆ.

ವಿಷ್ಣು ಭಟ್‌ ಹೊಸ್ಮನೆ (ಭಾಸ್ವ)

ಟಾಪ್ ನ್ಯೂಸ್

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.