ಮುಕ್ತಿ ಪಡೆಯಲು ಸುಲಭ ಮಾರ್ಗ ಯಾವುದು?


Team Udayavani, Dec 8, 2018, 10:59 AM IST

13.jpg

ಪರಮ ಪದವನ್ನು ಪಡೆಯುವುದೆಂದರೆ ದೇವರನ್ನು ಸೇರುವುದು. ಅಂದರೆ ಮುಕ್ತನಾಗುವುದು. ದಾಸರು ಹಾಡಿದ ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ, ನೀ ದೇಹದೊಳಗೋ ನಿನ್ನೊಳು ದೇಹವೋ ಎಂಬಂತೆ ದೇವನು ಮಾಯೆಯಾಗಿದ್ದಾನೋ ಅಥವಾ ದೇಹವೇ ಆಗಿದ್ದಾನೋ? ಎಂಬ ಪ್ರಶ್ನೆ ಹುಟ್ಟಿಕೊಂಡಾಗ ಸರ್ವವೂ ಅವನೇ ಆಗಿದ್ದಾನೆ, ಆತ್ಮಸ್ವರೂಪವೂ ಅವನೇ ಎಂದೇ ಪುರಾಣಗಳು, ವೇದಗಳಿಂದ ತಿಳಿಯುತ್ತದೆ. ಮಾನವನು ಗೃಹಸ್ಥಾಶ್ರಮವನ್ನು ದಾಟಿ ವಾನಪ್ರಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಂತೆ ದೇಹ ಸೊರಗುತ್ತ ಹೋಗಿ ಆತ್ಮವು ದೇವರಲ್ಲಿ ಐಕ್ಯ ಹೊಂದುವ ಆಸೆಯನ್ನು ಸಹಜವಾಗಿಯೇ ಇರಿಸಿಕೊಂಡಿರುತ್ತದೆ. ಆದರೆ, ಈ ಪರಮ ಪದವನ್ನು ಸೇರುವುದಾದರೂ ಹೇಗೆ? ಎಂಬ ಚಿಂತೆಗೆ ದೇವತಾಕಾರ್ಯಗಳೇ ದಾರಿ ಎಂಬ ಉತ್ತರವನ್ನು ಕಂಡುಕೊಂಡು ಯಜ್ಞ, ಯಾಗಾದಿ ಪೂಜೆ-ಪುನಸ್ಕಾರಗಳನ್ನು ಮಾಡಿಸುವುದನ್ನು ನೋಡಿದ್ದೇವೆ. ಇದೂ ಕೂಡ ದೇವರನ್ನು ಸೇರಲು ಇರುವ ಒಂದು ಮಾರ್ಗವಾಗಿದೆ. ಆದರೆ ತುಂಬಾ ಸುಲಭವಾದ ಇನ್ನೊಂದು ಮಾರ್ಗವೂ ಇದೆ!

ಮಧಾºಗವತದ ಏಕಾದಶ ಸ್ಕಂಧದ ಹನ್ನೆರಡನೆಯ ಅಧ್ಯಾಯದಲ್ಲಿ ಅತಿ ಸುಲಭವಾಗಿ ದೇವರನ್ನು ಸೇರುವುದು ಹೇಗೆಂದು ಹೇಳಲಾಗಿದೆ. ಈ ಸುಲಭ ಹಾಗೂ ಸರಳವಾದ ಮಾರ್ಗವೇ ಸತ್ಸಂಗ.
ಸತ್ಸಂಗ ಎಂಬ ಪದದ ಅರ್ಥ ಸಜ್ಜನರ ಸಹವಾಸ ಅಥವಾ ಒಳ್ಳೆಯವರ ಗೆಳೆತನ. ಸನ್ಮಾರ್ಗಿಗಳ ಸ್ನೇಹವೂ ಹೌದು. ಮಧಾºಗವತದ ಈ ಅಧ್ಯಾಯದಲ್ಲಿ ಶ್ರೀ ಕೃಷ್ಣನು ಯಜ್ಞ, ಯಾಗ, ತಪಸ್ಸು, ಮಂತ್ರ,
ಧರ್ಮ ಮೊದಲಾದ ಸಾಧನೆಗಳಿಗಿಂತಲೂ ಮತ್ತು ಇವುಗಳಿಂದ ಪಡೆಯಲಾಗದಂತಹ ದೇವರ ಸಾನ್ನಿಧ್ಯ ಅಥವಾ ನನ್ನನ್ನು ಸೇರಲು ಸತ್ಸಂಗವೇ ಸುಲಭಮಾರ್ಗವೆಂದಿದ್ದಾ ನೆ. ಎಲ್ಲ ಯುಗಗಳಲ್ಲಿಯೂ ರಾಕ್ಷಸರೂ, ಪಶುಪಕ್ಷಿ$ಗಳೂ, ಗಂಧರ್ವಅಪ್ಸರೆಯರೂ ಮೊದಲಾದವರೆಲ್ಲರೂ ಸತ್ಸಂಗದಿಂದಾಗಿಯೇ ನನ್ನನ್ನು ಸೇರಿರುವರು.

ಮಾನವರಲ್ಲಿಯೂ ಬಹಳಷ್ಟು ಜನರು  ಸತ್ಸಂಗದಿಂದಲೇ ಪರಮ ಪದವನ್ನು ಪಡೆದುಕೊಂಡಿದ್ದಾರೆ. ವೃತಾಸುರ, ಬಲಿ, ಪ್ರಹ್ಲಾದ, ವಿಭೀಷಣ, ಜಟಾಯು, ಹನುಮಂತ, ಸುಗ್ರೀವ, ಜಾಂಬವಂತ ಮೊದಲಾದವರು ಇದಕ್ಕೆ ಉದಾಹರಣೆಯಾಗಿದ್ದಾರೆ. ಸತ್ಸಂಗವಿದ್ದಲ್ಲಿ ವಿಷಯಾಸಕ್ತಿಗಳು ನಾಶವಾಗಿ ಸಹಜವಾಗಿಯೇ ದೃಢವಾದ ಭಕ್ತಿ ಬೆಳೆಯುವುದರಿಂದ ಪರಮ ಪದವನ್ನುಪಡೆಯುವುದು ಸುಲಭವೆಂದು ಶ್ರೀಕೃಷ್ಣ ಇಲ್ಲಿ ಹೇಳಿದ್ದಾನೆ.

ಲೋಕದಲ್ಲೊಂದು ಮಾತಿದೆ: ಸಜ್ಜನರ ಸಂಗವದು ಹೆಜ್ಜೇನು  ಸವಿದಂತೆ, ದುರ್ಜನ ಸಂಗ ಹೆಜ್ಜೇನು  ಕಡಿದಂತೆ ಎಂಬಂತೆ ನಮ್ಮ ಜೀವನವು ಸನ್ಮಾರ್ಗದಲ್ಲಿದೆಯೋ ಅಥವಾ ದುರ್ಮಾರ್ಗದಲ್ಲಿದೆಯೋ ಎಂಬುದಕ್ಕೆ ಸಾಕ್ಷಿ ನಮ್ಮ ಸಂಗವೇ ಆಗಿದೆ. ಇದು ಮುಖ್ಯವಾಗಿ ಮನಸ್ಸಿನ ಚಂಚಲತೆಯ ಸೂಚಕ. ಕೆಟ್ಟದೊಂದನ್ನು ಕಾಣದೇ ಇದ್ದವನು ಕೆಟ್ಟವರ ಸಹವಾಸದಿಂದ ಕೆಟ್ಟ ಸಂಗತಿಗಳತ್ತ ಒಲವು ತೋರಬಹುದು. ಆಗ ಜೀವನಕ್ರಮವೂ ವಿಹಿತವಾದ ಮಾರ್ಗದಲ್ಲಿ ಸಾಗತೊಡಗುತ್ತದೆ. ಸಹಜವಾಗಿಯೇ ಪಾಪಕಾರ್ಯಗಳಿಗೆ ಅವಕಾಶ ದೊರೆಯುವಂತಾಗುತ್ತದೆ. ಇದರಿಂದ ಪಾರಾಗಲು ಯಾವ ಯಜ್ಞಯಾಗಗಳಿಂದಲೂ ಸಾಧ್ಯವಿಲ್ಲ. ಯಾಕೆಂದರೆ ಅಲ್ಲಿ ಭಕ್ತಿಯೇ ಇರದು. ನಿಶ್ಚಲವಾದ ಭಕ್ತಿಗೆ ಮನಸ್ಸು ಶುದ್ಧವಾಗಿರಬೇಕು. ಆಗ ಮಾತ್ರ ಪೂಜಾದಿಗಳಿಂದ ಫ‌ಲ ಸಿಗುತ್ತದೆ. ಶುದ್ಧವಾದ ಮನಸ್ಸು ಸತ್ಸಂಗದಿಂದ ಮಾತ್ರ ಸಾಧ್ಯ.

ಸತ್ಸಂಗ ಎಂಬುದು ಕೇವಲ ಒಳ್ಳೆಯವರ ಸಂಗ ಎಂಬರ್ಥಕ್ಕೆ ಮೀಸಲಾಗಿರದೆ ಒಳ್ಳೆಯ ತಣ್ತೀಗಳನು,° ಯೋಚನೆಗಳನ್ನು ಹೊಂದಿರುವುದೂ ಆಗಿವೆ. ದೇವನ ಸಂಗವನ್ನು ಬಯಸುವುದೂ ಸತ್ಸಂಗದ ರೂಪವೇ. ವಿಷಯಾಸಕ್ತಿಗಳನ್ನು ಕಡೆಗಣಿಸಿ ಸತ್ಸಂಗವನ್ನು ಹೊಂದಿ ಬದುಕಿದರೆ ಯಾವ ಮಹಾನ್‌ ಯಾಗದಿಂದಲೂ ದೊರೆಯದ ಪರಮ ಪದವನ್ನು ಹೊಂದುವುದು ಖಂಡಿತ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.