ಭಗವಂತನ ಪ್ರೀತಿಯ ಭಕ್ತನಾಗುವುದು ಹೇಗೆ?


Team Udayavani, Dec 22, 2018, 3:25 AM IST

2554.jpg

ನಮ್ಮೊಳಗಿಂದ ಭಾವವೊಂದು ಹುಟ್ಟಬೇಕಾದರೆ ಅದಕ್ಕೆ ಸೂಕ್ತವಾದ ಅವಕಾಶಬೇಕು; ಸಂದರ್ಭವೂ ಬೇಕು. ಅಳು ಬರುವ ಸಮಯದಲ್ಲಿ ನಗಲಾಗದು. ನಕ್ಕರೂ ಅದು ಕೃತಕ, ಸುಳ್ಳು ನಗು. ಭಕ್ತಿಯ ಭಾವವೂ ಅಷ್ಟೇ, ಅದಕ್ಕೆ ತಕ್ಕುದಾದ ಸಂಸ್ಕಾರ ಉಂಟಾದಾಗ ಮಾತ್ರ ಭಕ್ತಿಯು ಹುಟ್ಟುತ್ತದೆ. 

ಭಕ್ತಿಯಿಂದ ದೇವರನ್ನು ಆರಾಧಿಸುವವನು ಭಕ್ತ. ಶುದ್ಧವಾದ ಮನದಿಂದ ದೇವನಲ್ಲಿ ಶ್ರದ್ಧೆಯನ್ನಿಟ್ಟುಕೊಳ್ಳುವವನು ಭಕ್ತ. ಪೂಜೆ, ಭಜನೆ, ನಾಮಸ್ಮರಣೆ, ಧ್ಯಾನ ಎಲ್ಲವೂ ಭಕ್ತಿಯ ಮಾರ್ಗಗಳೇ. ಆದರೆ, ದೇವನು ಯಾವಾಗ ನಮ್ಮನ್ನು ಇಷ್ಟ ಪಡುತ್ತಾನೆ? ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ದೇವರಿಗೆ ಪ್ರಿಯವಾದ ಕೆಲಸವನ್ನೇ ಮಾಡು ಎಂಬ ಮಾತಿದೆ. ಅಂದರೆ, ತಪ್ಪಿಲ್ಲದ ನೀತಿಯುತವಾದ ಕಾರ್ಯಗಳು ನಮ್ಮಿಂದಾಗಲಿ ಎಂದರ್ಥ. ದೇವರೆಂದರೆ ಭರವಸೆ. ಆ ಭರವಸೆಯಲ್ಲಿಟ್ಟ ನಂಬಿಕೆಯೇ ನಮ್ಮ ಭಕ್ತಿ. ಹಾಗಾದರೆ, ನಾವು ನಂಬಿ ಭಜಿಸುವ ದೇವರು ನಮ್ಮನ್ನು ಮೆಚ್ಚುತ್ತಾನಾ? ಅವನಿಗೆ ನಾನು ಪ್ರಿಯವಾದೆನಾ? ಎಂಬಿತ್ಯಾದಿ ಪ್ರಶ್ನೆಗಳು ಉದಯಿಸುವುದು ಸಹಜ.

ದೇವರು ಯಾವ ರೀತಿಯ ಭಕ್ತರನ್ನು ಇಷ್ಟಪಡುತ್ತಾನೆ ಎಂಬುದನ್ನು ಭಗವದ್ಗೀತೆಯ ಹನ್ನೆರಡನೇ ಅಧ್ಯಾಯದಲ್ಲಿ ಹೇಳಲಾಗಿದೆ.

ಅದ್ವೇಷ್ಟಾ ಸರ್ವ ಭೂತಾನಾಂ ಮೈತ್ರಃ ಕರುಣ ಏವ ಚ|
ನಿರ್ಮಮೋ ನಿರಂಹಕಾರಃ ಸಮದುಃಖಸುಖಃ ಕ್ಷಮೀ ||
ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ
ಮಯ್ಯರ್ಪಿತಮನೋ ಬುದ್ಧಿ ರ್ಯೋ ಮಧºಕ್ತಃ ಸ ಮೇ ಪ್ರಿಯಃ ||

ಯಾವ ಮನುಷ್ಯನು ಎಲ್ಲ ಪ್ರಾಣಿಗಳಲ್ಲಿಯೂ ದ್ವೇಷ-ಭಾವರಹಿತನಾಗಿ, ಸ್ವಾರ್ಥರಹಿತನಾಗಿ ಎಲ್ಲರ ಪ್ರೇಮಿಯಾಗಿರುತ್ತಾನೋ ಮತ್ತು ಕಾರಣವಿಲ್ಲದೆ ದಯಾಳುವಾಗಿದ್ದಾನೋ ಹಾಗೂ ಮಮತಾರಹಿತನೋ, ಅಹಂಕಾರರಹಿತನೋ ಸುಖದುಃಖವನ್ನು ಸಮಾನವಾಗಿ ಸ್ವೀಕರಿಸುವನೋ, ಮಾನವಂತನಾಗಿರುವನೋ ಹಾಗೂ ಯಾವ ಯೋಗಿಯು, ನಿರಂತರವಾಗಿ ಶರೀರವನ್ನು ವಶದಲ್ಲಿಟ್ಟುಕೊಂಡಿರುವನೋ ಮತ್ತು ನನ್ನಲ್ಲಿ ದೃಢನಿಶ್ಚಯವನ್ನು ಹೊಂದಿರುವನೋ, ಅಂಥವನು ಹಾಗೂ ನನ್ನಲ್ಲಿ ಮನಸ್ಸು ಬುದ್ಧಿಗಳನ್ನು ಅರ್ಪಿಸುವ ಭಕ್ತನು ನನಗೆ ಪ್ರಿಯವಾಗಿದ್ದಾ ನೆ.

ಭಕ್ತಿ ಎಂಬುದು ವಿಶೇಷವಾದ ಭಾವವೂ ಹೌದು. ನಮ್ಮೊಳಗಿಂದ ಭಾವವೊಂದು ಹುಟ್ಟಬೇಕಾದರೆ ಅದಕ್ಕೆ ಸೂಕ್ತವಾದ ಅವಕಾಶಬೇಕು; ಸಂದರ್ಭವೂ ಬೇಕು. ಅಳು ಬರುವ ಸಮಯದಲ್ಲಿ ನಗಲಾಗದು. ನಕ್ಕರೂ ಅದು ಕೃತಕ, ಸುಳ್ಳು ನಗು. ಭಕ್ತಿಯ ಭಾವವೂ ಅಷ್ಟೇ, ಅದಕ್ಕೆ ತಕ್ಕುದಾದ ಸಂಸ್ಕಾರ ಉಂಟಾದಾಗ ಮಾತ್ರ ಭಕ್ತಿಯು ಹುಟ್ಟುತ್ತದೆ. ಈ ಭಕ್ತಿಯು ಶುದ್ಧವಾಗಿರಬೇಕೆಂದರೆ ಮೊದಲು ಎಲ್ಲ ಪ್ರಾಣಿಗಳಲ್ಲೂ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಯಾವ ಪ್ರಾಣಿಯ ಬಗೆಗೂ ದ್ವೇಷವನ್ನಿಟ್ಟುಕೊಳ್ಳದೆ ಪ್ರೇಮದಿಂದ ನೋಡುವ ಪರಿಪಾಠವನ್ನು ಬೆಳಸಿಕೊಳ್ಳಬೇಕು. ಆಗ ಮನಸ್ಸು ಶುದ್ಧವಾಗಿರುವ ಕಾರಣ, ಸದ್ಭಕ್ತಿ ಹುಟ್ಟಲು ಸಾಧ್ಯ. ಇನ್ನು ಯಾರನ್ನೂ ನಮ್ಮ ಸ್ವಾರ್ಥಕ್ಕಾಗಿಯೋ, ನಮ್ಮ ಸ್ವಕಾರ್ಯ ಸಾಧನೆಗಾಗಿಯೋ ಪ್ರೀತಿಸದೆ ನಿಸ್ವಾರ್ಥದಿಂದ ಎಲ್ಲರನ್ನೂ ಪ್ರೇಮಿಸಿದಾಗ, ಪರಸ್ಪರರಲ್ಲಿ ಉತ್ತಮ ಸಂಬಂಧ ಬೆಳೆದು ಅÇÉೊಂದು ಧನಾತ್ಮಕ ಶಕ್ತಿಯನ್ನು ಬೆಳಸಿದಂತಾಗುತ್ತದೆ.

ಧನಾತ್ಮಕ ಶಕ್ತಿ ಇದ್ದಲ್ಲಿ ಭಕ್ತಿಯೂ ದೃಢವಾಗಿರುತ್ತದೆ. ಕಾರಣವಿಲ್ಲದೆ ದಯಾಳು ಆಗಬೇಕು. ಮುಂದೊಂದು ದಿನ ಉಪಕಾರವಾಗುವುದೆಂಬ ಕಾರಣಕ್ಕೋ, ತಾನು ಪ್ರಸಿದ್ಧಿಗೆ ಬರುವ ಹಂಬಲಕ್ಕೋ ನಾವು ದಯಾಳುಗಳಾಗಬಾರದು. ಅಹಂ ಅನ್ನು ಸಂಪೂರ್ಣವಾಗಿ ತ್ಯಜಿಸಬೇಕು. “ಅಹಂ’ ಎಂಬುದು ನಮ್ಮನ್ನು ಕುರುಡರನ್ನಾಗಿಸುವುದರಿಂದ ನಮ್ಮ ಬುದ್ಧಿಗೆ ಸರಿತಪ್ಪುಗಳು ಅರಿವಿಗೆ ಬರುವುದಿಲ್ಲ. ಆಗ ಭಕ್ತಿ ಹುಟ್ಟುವುದೇ ಇಲ್ಲ. ಸುಖದುಃಖಗಳು ಬದುಕಿನಲ್ಲಿ ಬರುವುದು ಸಹಜ. ಅವನ್ನು ಸಮಾನವಾಗಿ ಸ್ವೀಕರಿಸುವ ಚಾತುರ್ಯವನ್ನು ಅರಿತು ಅಳವಡಿಸಿಕೊಳ್ಳಬೇಕು. ಕ್ಷಮಿಸುವ ಬುದ್ಧಿಯು ಧಾರಾಳವಾಗಿರಬೇಕು. ತನ್ನ ಶರೀರವನ್ನು ನಿಯಂತ್ರಣದಲ್ಲಿಟ್ಟುಕೊಂಡು ಭಗವಂತನಲ್ಲಿ ದೃಢವಾದ ನಂಬಿಕೆಯನ್ನು ಇಟ್ಟುಕೊಂಡವನ ಭಕ್ತಿಯನ್ನು ದೇವನು ಮೆಚ್ಚುತ್ತಾನೆ. ಅಂಥ ಮನುಷ್ಯನು ದೇವನಿಗೆ ಪ್ರಿಯವಾದವನೂ ಆಗುತ್ತಾನೆ.

ಭಕ್ತಿಯು ಡಾಂಭಿಕವಾಗಿರಬಾರದು ಎಂಬುದನ್ನು ಇಲ್ಲಿ ಸೂಚ್ಯವಾಗಿ ಹೇಳಲಾಗಿದೆ. 
ಭಕ್ತನಾಗುವುದು ಎಂದರೆ ಉತ್ತಮವಾದ ವ್ಯಕ್ತಿಣ್ತೀವನ್ನು ಬೆಳೆಸಿಕೊಳ್ಳುವುದು ಎಂದರ್ಥ. ಹಾಗಾಗಿ, ಪ್ರತಿಯೊಬ್ಬರೂ ದೇವನಿಗೆ ಪ್ರಿಯವಾಗುವಂಥ ಭಕ್ತನಾಗಬೇಕು. ಹೀಗೆ ಮಾಡಿದರೆ, ಈ ಭುವಿಯೇ ಮುಂದೊಂದು ದಿನ ಸ್ವರ್ಗವಾಗುತ್ತದೆ.

ವಿಷ್ಣು ಭಟ್‌ ಹೊಸ್ಮನೆ 

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.