ಪೂಜೆಯ ಮೊದಲು ಧೂಪವನ್ನೇಕೆ ಬೆಳಗಬೇಕು ?
Team Udayavani, Feb 9, 2019, 12:30 AM IST
ಧೂಪದಲ್ಲಿ ತೀವ್ರ ಗಂಧವಿರುತ್ತದೆ. ಈ ಗಂಧವು ಸೂಕ್ಷ್ಮಶಸ್ತ್ರಗಳ ರೂಪವನ್ನು ಧರಿಸಿ ವಾತಾವರಣದಲ್ಲಿನ ರಜ-ತಮಗಳೊಂದಿಗೆ ಹೋರಾಡುತ್ತದೆ. ಇದರಿಂದಾಗಿ ವಾತಾವರಣದಲ್ಲಿನ ಸತ್ವಗುಣದ ಪ್ರಾಬಲ್ಯಹೆಚ್ಚಾಗಿ ಶುದ್ಧಿಯಾಗುತ್ತದೆ. ವಾತಾವರಣದಲ್ಲಿ ದೇವತೆಗಳಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮ ತಮ ಲಹರಿಗಳು ದೊಡ್ಡ ಪ್ರಮಾಣದಲ್ಲಿ ಗ್ರಹಿಸಲ್ಪಡುತ್ತವೆ. ಅದರಿಂದಾಗಿ ವಾತಾವರಣದಲ್ಲಿ ದುಷ್ಟ ಶಕ್ತಿಗಳ ತೊಂದರೆ ಇದ್ದಲ್ಲಿ ಅದು ಶೇ. 30ರಷ್ಟು ಕಡಿಮೆಯಾಗುತ್ತದೆ. ಈ ರೀತಿಯಲ್ಲಿ ದೇವರ ಕಾರ್ಯದಲ್ಲಿ ಕೆಟ್ಟ ಶಕ್ತಿಗಳಿಂದಾಗುವ ಅಡಚಣೆಗಳ ಪ್ರಮಾಣವು ಕಡಿಮೆಯಾಗುತ್ತದೆ. ಆದುದರಿಂದ ಮಂಗಳಾರತಿ ಮಾಡುವ ಮೊದಲು ಧೂಪದಿಂದ ಪೂಜಿಸಬೇಕು.