ಗಾಜಿನ ಅರಮನೆ


Team Udayavani, Feb 23, 2019, 12:30 AM IST

26.jpg

ಕರ್ನಾಟಕದ ಮ್ಯಾಂಚೆಸ್ಟರ್‌ ಅಂದರೆ ಅದು ದಾವಣಗೆರೆಯೇ. ಈ ಹೆಮ್ಮೆಯ ಜೊತೆಗೆ ಈಗ ಇನ್ನೊಂದು ಸೇರ್ಪಡೆ ಈ ಗಾಜಿನ ಮನೆ. ದೇಶದ ನಂ. 1 ಗಾಜಿನ ಮನೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಇದು,  ಇಲ್ಲಿನ ಕುಂದುವಾಡ ಕೆರೆಗೆ ಹೊಂದಿಕೊಂಡಂತೆಯೇ ಇದೆ. ಅಲ್ಲಿ ಏನುಂಟು, ಏನಿಲ್ಲ? ಇಲ್ಲಿದೆ ಮಾಹಿತಿ.

  

 ದಾವಣಗೆರೆಯಲ್ಲಿ ಈಗ ಎಲ್ಲರದ್ದೂ ಒಂದೇ ಮಾತು. ಅದುವೇ ಗ್ಲಾಸ್‌ ಹೌಸ್‌ ಬಗ್ಗೆ.   ಒಳಗೊಳಗೇ ಹೆಮ್ಮೆ. ನಮ್ಮೂರಲ್ಲಿ ಗ್ಲಾಸ್‌ ಹೌಸ್‌ ಇದೆ ಅಂತ. ಬೆಂಗಳೂರು, ಮೈಸೂರು, ತುಮಕೂರು ಹೀಗೆ ಹಲವೆಡೆ ಇರುವ ಗ್ಲಾಸ್‌ ಹೌಸ್‌ಗಳಿಗಿಂತ ದಾವಣಗೆರೆಯ ಗ್ಲಾಸ್‌ ಹೌಸ್‌ ಬಹಳ ದೊಡ್ಡದು. ದೇಶದ ನಂ. 1 ಗ್ಲಾಸ್‌ ಹೌಸ್‌ ಅಂತಲೂ ಹೆಸರಾಗಿದೆ.  ಇಷ್ಟೇ ಅಲ್ಲ, ಇದು ವಿಶ್ವದ ನಂ. 2 ಗ್ಲಾಸ್‌ ಹೌಸ್‌ ಕೂಡ ಆಗಿದೆಯಂತೆ. ಇದು ಎಲ್ಲಿದೆ ಅಂದರೆ, ದಾವಣಗೆರೆ ಜಿಲ್ಲೆಯ  ಕುಂದುವಾಡ ಕೆರೆಗೆ ಹೊಂದಿಕೊಂಡಿರುವಂತೆ, 10 ಎಕರೆ ವಿಸ್ತೀರ್ಣದ ಜಾಗದಲ್ಲಿ ಈ ಗ್ಲಾಸ್‌ ಹೌಸ್‌ ತಲೆ ಎತ್ತಿದೆ. 

ದಾವಣಗೆರೆಯಿಂದ 40 ಕಿ.ಮೀ ದೂರದಲ್ಲಿ ಶಾಂತಿಸಾಗರ ಕೆರೆಯಿದೆ. ಇದು ಇಡೀ ಜಿಲ್ಲೆಯನ್ನು ಹೆಸರುವಾಸಿ ಮಾಡಿತ್ತು. ಈಗ ಆ ಸರದಿ ಈ ಗಾಜಿನ ಮನೆಗೂ ಸಂದಿದೆ. 

ಇದರ ಒಳಗೆ ನಿಂತರೆ ಮನಸ್ಸು ಸಂಭ್ರಮದಲ್ಲಿ ತೇಲುತ್ತದೆ. ಗಾಜಿನ ಮನೆಯ ಮಹಿಮೆಯೇ ಅಂಥದ್ದು.  ಇದು ಕೇವಲ ಮನೆಯಂತೆ ಭಾಸವಾಗುವುದಿಲ್ಲ. ಬದಲಾಗಿ, ಯಾವುದೇ ಅರಮನೆಯಂತೆ ಅನಿಸುತ್ತದೆ.  ಗೋಡೆ ಸಿಕ್ಕರೂ ಅದೂ ಕೂಡ ಗಾಜೇ ಆದ್ದರಿಂದ ಬಯಲಲ್ಲಿ ನಿಂತಂತೆ ಆಗುತ್ತದೆ. 

ಗಾಜಿನ ಮನೆ ವಿಸ್ತೀರ್ಣ 75 ಸಾವಿರ ಚದುರ ಅಡಿ ಇದೆ. ಪೂರ್ವ-ಪಶ್ಚಿಮ 258 ಮೀಟರ್‌ ಉದ್ದ, ಉತ್ತರ-ದಕ್ಷಿಣ 63 ಮೀಟರ್‌ ಅಗಲವಿದೆ.  17 ಮೀಟರ್‌ ಎತ್ತರದ ಸೆಂಟ್ರಲ್‌ ಡ್ನೂಮ್‌ ಹಾಗೂ 14 ಮೀಟರ್‌ನ ಸೈಡ್‌ ವಿಂಗ್ಸ್‌ ಹೊಂದಿದೆ. 

5 ಕೋಟಿ ರೂ. ಅಂದಾಜಿನಲ್ಲಿ ಆರಂಭಿಸಿದ ಗಾಜಿನ ಮನೆ ನಿರ್ಮಾಣದ ವೆಚ್ಚ ಸದ್ಯ 26.28 ಕೋಟಿ ರೂ. ತಲುಪಿದೆ. ತೋಟಗಾರಿಕೆ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಈ ಗಾಜಿನ ಮನೆ ಅತ್ಯದ್ಭುತವಾಗಿ ಮೂಡಿ ಬರಲು ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಕಲ್ಪನೆ, ದೃಷ್ಟಿಕೋನ ಕಾರಣ. ಜೊತೆಗೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾಗಿದ್ದ ಎಸ್‌.ಟಿ.ವೇದಮೂರ್ತಿ ಮತ್ತವರ ತಂಡದ ಪರಿಶ್ರಮವೂ ಇದೆ. 

ಈ ಗ್ಲಾಸ್‌ ಹೌಸ್‌ನಿಂದಾಗಿ ಮಧ್ಯ ಕರ್ನಾಟಕದ ಕೇಂದ್ರ ಬಿಂದು,  ಶೈಕ್ಷಣಿಕ-ವಾಣಿಜ್ಯ ನಗರಿ ದಾವಣಗೆರೆ ಇನ್ನು ಮುಂದೆ ಮತ್ತಷ್ಟು ಜನಪ್ರಿಯವಾಗಲಿದೆ ಅನ್ನೋದರಲ್ಲಿ ಅನುಮಾನವೇ ಇಲ್ಲ. 

ಹೆಮ್ಮೆಯ ಸಂಗತಿ ಎಂದರೆ ದಾವಣಗೆರೆ ಗಾಜಿನ ಮನೆ ಆಕರ್ಷಕ ವಿನ್ಯಾಸಕ್ಕೆ ಝಾಕ್‌ ಗ್ರೂಪ್‌ ಪ್ರಶಸ್ತಿ ಲಭಿಸಿದೆ. ಆ ಮೂಲಕ  ಗಾಜಿನ ಮನೆಗೆ ಅಂತಾರಾಷ್ಟೀಯ ಮನ್ನಣೆ ಸಿಕ್ಕಂತಾಗಿದೆ.   

ವಿದೇಶಿ ಮರಗಳು..
ಪೈನಾಪಲ್‌ ಪಾಲ್ಮ್, ಇಟಾಲಿಯನ್‌ ಸೈಪ್ರಸ್‌, ಪೆರೆÕ$çನ್‌ ಸೈಪ್ರಸ್‌, ಇಟಾಲಿಯನ್‌ ಸೈಪ್ರಸ್‌ ಸ್ಟ್ರಿಕ್ಟ, ರೆಡ್‌ ನೆಕ್‌ ಪಾಲ್ಮ್, ಆಲಿವ್‌, ಮೆಕ್ಸಿಕಾನ್‌ ಫ್ಯಾನ್‌ ಪಾಲ್ಮ್, ಬಾಟಲ್‌ ಟ್ರಿ, ಡ್ರಾಗನ್‌, ಟರ್ಮಿನಲಿಯಾ ಮಸೊcಟ, ಫಿಕಸ್‌ ಸೇರಿ ವಿವಿಧ ವಿದೇಶಿ ಗಿಡ-ಮರಗಳನ್ನು ಗಾಜಿನ ಮನೆ ಉದ್ಯಾನ ವನದಲ್ಲಿ ನಾಟಿ ಮಾಡಲಾಗಿದೆ. 

ಜಿಮ್‌-ಆಟಿಕೆ
ವಿಶಾಲವಾದ ಜಾಗದಲ್ಲಿ ಬರೀ ಗಾಜಿನ ಮನೆಯೊಂದೇ ಇಲ್ಲ. ಆವರಣದಲ್ಲಿ ಕಂಗೊಳಿಸುತ್ತಿರುವ ಉದ್ಯಾನವನ, ಮಕ್ಕಳ ಆಟಿಕೆ, ವಯಸ್ಕರಿಗೆ ಜಿಮ್‌ ಇವೆ. ಪಾದಚಾರಿಗಳಿಗೆ ವಾಕಿಂಗ್‌ ಪಾಥ್‌ ಸೇರಿದಂತೆ  ಹಲವು ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಶೌಚಾಲಯ. ಕ್ಯಾಂಟೀನ್‌ ವ್ಯವಸ್ಥೆ ಯೋಜನೆ ರೂಪಿಸಲಾಗಿದೆ.
  ಗ್ಲಾಸ್‌ ಬಳಕೆ 
ಈ ಗಾಜಿನ ಮನೆ ನಿರ್ಮಾಣದಲ್ಲಿ 6+6 ಎಂ.ಎಂನ ಪೇಂಟ್‌ ಗ್ಲೋಬಿಂಗ್‌ ಗಾಜನ್ನು ಬಳಸಿದ್ದಾರೆ. ಹೈದರಾಬಾದ್‌, ಚೆನ್ನೈಯಿಂದ ಗಾಜನ್ನು ತರಿಸಿದ್ದಾರೆ. ವಿಶೇಷ ಸಂದರ್ಭದಲ್ಲಿ ಮೈಸೂರು ಅರಮನೆಯಂತೆ ಕಂಗೊಳಿಸಲು ವಿಶೇಷವಾದ ಲೈಟಿಂಗ್‌ ವ್ಯವಸ್ಥೆ ಮಾಡಿದ್ದಾರೆ. 

ಎನ್‌.ಆರ್‌.ನಟರಾಜ್‌

ಟಾಪ್ ನ್ಯೂಸ್

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-muddebihala

Muddebihal: ನೇಹಾ ಕೊಲೆ ಖಂಡಿಸಿ ಪ್ರತಿಭಟನೆ: ಮುಸ್ಲಿಂ ಮುಖಂಡರು ಭಾಗಿ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.