ಚಮಚ ಕೊಕ್ಕಿನ ಕೊಕ್ಕರೆ


Team Udayavani, Mar 9, 2019, 12:30 AM IST

8.jpg

ಚಮಚ ಕೊಕ್ಕಿನ ಕೊಕ್ಕರೆಗಳಲ್ಲಿ ಕಪ್ಪು ಕೊಕ್ಕಿನವು, ಹಳದಿ ಬಣ್ಣದವು, ಅಷ್ಟೇ ಯಾಕೆ ಗುಲಾಬಿ ಬಣ್ಣದ ಚಮಚ ಕೊಕ್ಕರೆಗಳೂ ಇವೆ. ಗುಲಾಬಿ ಚಮಚ ಕೊಕ್ಕರೆ ಹೆಚ್ಚಾಗಿ ಕೆಂಪು ಬಣ್ಣದ ಷಟಿÛ- ತಿನ್ನುವುದರಿಂದ ಗುಲಾಬಿ ಬಣ್ಣ ಅದರ ದೇಹದಲ್ಲಿ ತೋರುವುದು ಎಂಬ ಅಭಿಪ್ರಾಯ ಸಹ ಇದೆ. 

Eurasain Spoonbill (Platalea leucorodia)RM Duck ಈ ಪಕ್ಷಿಗೆ ಚಮಚ ಕೊಕ್ಕಿನ ಕೊಕ್ಕರೆ ಎಂಬ ಹೆಸರು ಇದೆ.  ಇದು “ತ್ರೆಸ್ಕಿಯೊರ್ನಿತಿಡಿಯಾ’ ಕುಟುಂಬಕ್ಕೆ ಸೇರಿದೆ. ಬಿಳಿ ಬಣ್ಣದ ಗರಿ, ಉದ್ದದ ಬೂದುಗಪ್ಪು ಕಾಲು, ತುದಿಯಲ್ಲಿ ದೋಸೆ ಸೊಟ್ಟುಗದಂತೆ ಅಗಲವಾಗಿರುವ ಚುಂಚು ಇದನ್ನು ದೂರದಿಂದಲೇ ಸುಲಭವಾಗಿ ಗುರುತಿಸಲು ಸಹಾಯಕವಾಗಿದೆ. ಇದು ಸುಮಾರು 60 ಸೆಂ.ಮೀ ಎತ್ತರ ಬೆಳೆಯಬಲ್ಲುದು. ಇದರ ವೈಜ್ಞಾನಿಕ ಹೆಸರಿನಲ್ಲಿರುವ “ಪ್ಲೇಟಲಿಯ’ ಪದ ಲ್ಯಾಟಿನ್‌ನಿಂದ ಬಂದಿದೆ. ಪ್ಲೇಟಲಿಯಾ ಅಂದರೆ ಅಗಲವಾಗಿರುವ- ಪ್ರತ್ಯೇಕ ಚುಂಚನ್ನು ಹೊಂದಿರುವ ಕೊಕ್ಕರೆ ಎಂದರ್ಥ. 

ಗ್ರೀಕ್‌ ಪುರಾಣಗಳಲ್ಲೂ ಈ ಹಕ್ಕಿಯ ಉಲ್ಲೇಖವಿದೆ. ಅಲ್ಲದೆ ಇಂಗ್ಲೆಂಡಿನಲ್ಲಿ ಇದನ್ನು “ಶೋವೆಲಾರ್ಡ’ ಎಂದು ಕರೆಯುತ್ತಾರೆ. ಅದರರ್ಥ “ಚಂದದ ಕೊಕ್ಕರೆ’ ಎಂದು. ರಾಜನ ಕಿರೀಟದ ತುದಿಯಲ್ಲಿರುವ ಗರಿಯಂತೆ ಚಮಚ ಕೊಕ್ಕಿನ ಕೊಕ್ಕರೆಯ ತಲೆಯಲ್ಲಿ ಸುಂದರ ಬಿಳಿಬಣ್ಣದ ಗರಿಯ ಗುಚ್ಚ ಮೂಡುತ್ತದೆ. ಜೊತೆಗೆ ಅದರ ಗಾಂಭಿರ್ಯ ನಡಿಗೆಯೂ ಸೇರಿ ರಾಜನಡಿಗೆಯನ್ನು ನೆನಪಿಸುವುದು.

ಇದು ತನ್ನ ಚುಂಚನ್ನು ನೀರಲ್ಲಿ ಆಚೆ, ಈಚೆ ತಿರುಗಿಸಿ- ಜಾಲರಿ ಆಡಿಸಿದಂತೆ ಮಾಡಿ ನೀರಿನಲ್ಲಿರುವ ಚಿಕ್ಕ ಕ್ರಿಮಿ, ನುಸಿ, ಚಿಕ್ಕ ಮೀನು ಇಲ್ಲವೇ ಇತರ ಜಲಚರಗಳ ಮೊಟ್ಟೆಯನ್ನು ಹಿಡಿದು ತಿನ್ನುವುದು. 

ಚಮಚ ಕೊಕ್ಕಿನ ಕೊಕ್ಕರೆಗಳಲ್ಲಿ ಕಪ್ಪು ಕೊಕ್ಕಿನವು, ಹಳದಿ ಬಣ್ಣದವು, ಅಷ್ಟೇ ಯಾಕೆ ಗುಲಾಬಿ ಬಣ್ಣದ ಚಮಚ ಕೊಕ್ಕರೆಗಳೂ ಇವೆ. ಗುಲಾಬಿ ಚಮಚ ಕೊಕ್ಕರೆ ಹೆಚ್ಚಾಗಿ ಕೆಂಪು ಬಣ್ಣದ ಷಟಿÛ- ತಿನ್ನುವುದರಿಂದ ಗುಲಾಬಿ ಬಣ್ಣ ಅದರ ದೇಹದಲ್ಲಿ ತೋರುವುದು ಎಂಬ ಅಭಿಪ್ರಾಯ ಸಹ ಇದೆ. ಅದರ ಮೈಬಣ್ಣಕ್ಕೆ ಆಹಾರ ಕಾರಣವೋ ಅಥವಾ ದೇಹದಲ್ಲಿರುವ ಹಾರ್ಮೋನ್‌ ಕಾರಣವೋ ಎಂಬುದು ಇದುವರೆಗೂ ಗೊತ್ತಾಗಿಲ್ಲ. 

ಸಾಮಾನ್ಯವಾಗಿ ಈ ಪಕ್ಷಿ ನೀರು ನಿಂತ ಗದ್ದೆ, ಕೃಷಿ ನೀರಾವರಿಗಾಗಿ ನಿರ್ಮಿಸಿದ ಕಟ್ಟೆ, ಆಣೆಕಟ್ಟಿನ ಹಿನ್ನೀರ ಪ್ರದೇಶ, ಜೌಗು ಪ್ರದೇಶ- ನದಿ ತೀರದ ಕೆಸರಿನ ಪ್ರದೇಶಗಳಲ್ಲಿ ಆಹಾರವನ್ನು ಹುಡುಕಿಕೊಳ್ಳುತ್ತವೆ. 

ಕಪ್ಪೆ ಚಿಪ್ಪು, ಗೊದ್ದ, ಕಟ್ಟಿರುವೆ, ಅವುಗಳ ಮೊಟ್ಟೆ, ಕಪ್ಪೆ, ಶಂಖದ ಹುಳು, ಚಿಕ್ಕ ಏಡಿ, ಮೀನು, ಶಟಿÛಗಳು ಇದರ ಪ್ರಮುಖ ಆಹಾರ. ಅಲ್ಲದೆ ಕೆಸರಿನಲ್ಲಿರುವ ಮಣ್ಣು ಹುಳು, ಎರೆಹುಳದ ಮೊಟ್ಟೆಗಳನ್ನೂ ತಿನ್ನುವವು. ಇವುಗಳು ಸಂತಾನೋತ್ಪತ್ತಿ ಮಾಡುವ ಸಮಯ ಜುಲೈನಿಂದ ನವೆಂಬರ್‌. ಈ ಸಂದರ್ಭದಲ್ಲಿ ಕೆರೆ ದಂಡೆಯಲ್ಲಿರುವ ಮರಗಳ ಮೇಲೆ ಸಾಮಾನ್ಯ ಎತ್ತರದಲ್ಲಿ ಕೋಲುಗಳನ್ನು ಸಂಗ್ರಹಿಸಿ ಅಟ್ಟಣಿಗೆ ನಿರ್ಮಿಸಿ, ಮಧ್ಯ ಜಲಸಸ್ಯ ಮುಂತಾದ ಮೆತ್ತನೆ ಹಾಸು- ಹಾಕಿ ಮೊಟ್ಟೆ ಇಡುವುದು. 

ಸಂಜೆ ಮತ್ತು ಬೆಳಗ್ಗೆ ಆಹಾರ ಸಂಗ್ರಹಿಸುವ ಚಟುವಟಿಕೆಯಲ್ಲಿ ತೊಡಗುವುದು. ತನ್ನ ಗೂಡಿನ ಸುಮಾರು 15 ಕಿ.ಮೀ ವ್ಯಾಪ್ತಿಯಲ್ಲಿ ತನ್ನ ಮರಿಗಳಿಗೆ ಆಹಾರ ಹುಡುಕುತ್ತವೆ. ಇದೊಂದು ಸುಂದರ ಚುಂಚಿನ ಹಕ್ಕಿ. ಏಷಿಯನ್‌ ಬಿಲ್‌ ಸ್ಟೋರ್ಕ್‌, ಐಬಿಸ್‌, ಪೆಲಿಕನ್‌ನ ಸಹಚರಿಯಾಗಿರುವ ಈ ಸುಂದರ ಹಕ್ಕಿ ಪರಿಸರದ ಚೆಲುವನ್ನು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು. 

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.