ಹಣ, ಅಧಿಕಾರದ ಬಲದಿಂದ ಗೆಲ್ಲುವ ಪಿತೂರಿ ಕಾಂಗ್ರೆಸ್ದು
Team Udayavani, Mar 21, 2017, 1:23 PM IST
ನಂಜನಗೂಡು: ಹಣ ಹಾಗೂ ಅಧಿಕಾರದ ಬಲದಿಂದ ಗೆಲ್ಲುವ ಪೀತೂರಿಯನ್ನು ಕಾಂಗ್ರೆಸ್ ನಾಯಕರು ನಡೆಸುತ್ತಿದ್ದಾರೆ ಎಂದು ವಿ. ಶ್ರೀನಿವಾಸ ಪ್ರಸಾದ್ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಹಾಗಾಗಿಯೇ ಆಯಕಟ್ಟಿ ಜಾಗದಲ್ಲಿ ಬೇಕಾದ ಅಧಿಕಾರಿಗಳನ್ನು ನಿಯೋಜಿಸಿಕೊಂಡಿದ್ದಾರೆ. ನಂಜನಗೂಡಿನ ಮತದಾರರು ಇವರ ಈ ಪಿತೂರಿ ವಿರೋಧಿಸಿಯೇ ತಮ್ಮನ್ನು ಗೆಲ್ಲಿಸಲಿದ್ದಾರೆ ಎಂದರು.
ನೂರಾರು ಕೋಟಿ ರೂಗಳ ಯೋಜನೆ ಯನ್ನು ಯಾವುದೇ ಸರ್ಕಾರ ನಿಂತ ನೆಲದಲ್ಲಿ ಮಾಡಲಾಗುವುದಿಲ್ಲ. ಯೋಜನೆಯ ರೂಪ ರೇಷೆಗಳು ಸಿದ್ಧವಾಗಬೇಕು. ಅದಕ್ಕಾಗಿ ನೀಲ ನಕ್ಷೆ ತಯಾರಾಗಬೇಕು ತಮ್ಮ ರಾಜೀನಾಮೆ ನಂತರ ಈ ಕ್ಷೇತ್ರದಲ್ಲಿ ಕಾಣಿಸಿಕೊಂಡ ಕಾಮಗಾರಿ ಹಾಗೂ ಶಂಕು ಸ್ಥಾಪನೆಗಳೆಲ್ಲ ತಮ್ಮ ಕಾಲದಲ್ಲಿ ರೂಪಗೊಂಡ ಯೋಜನೆಗಳು ಎಂದು ಹೇಳಿದರು.
ತಾವು ರಾಜೀನಾಮೆ ನೀಡಿದ್ದೆ ತಡ ಹಾರೆ ಪಿಕಾಸಿ ತಂದು ಆ ಎಲ್ಲ ಯೋಜನೆಗಳ ರೂವಾರಿ ತಾವು ಎಂದು ಓಡಾಡುತ್ತಿದ್ದಾರೆ. ತಾವು ಇಲ್ಲಿನ ಪ್ರತಿನಿಧಿಯಾಗಿ ಸಿದ್ದಪಡಿಸಿದ ಯೋಜನೆಗಳನ್ನು ತಮ್ಮ ರಾಜೀನಾಮೆಯ ನಂತರವಾದರೂ ಪ್ರಾರಂಭಿಸಿದ್ದಕ್ಕೆ ಜನತೆ ಪರವಾಗಿ ಧನ್ಯವಾದಗಳು ತಿಳಿಸಿದರು.
ತಾವು ಬಿಜೆಪಿಯ ನಾಯಕರೊಂದಿಗೆ ಪ್ರಚಾರ ನಡೆಸುತ್ತಿದ್ದು ಇಲ್ಲಿ ಹಣಬಲ ಅಧಿಕಾರದ ಬಲ ಹಾಗೂ ಸ್ವಾಭಿಮಾನದ ನಡುವಿ ಹೋರಾಟ ಪ್ರಾರಂಭವಾಗಿದೆ ತೀರ್ಪು ನೀಡಬೇಕಾದವರು ಮತದಾರರು. ಶೇ 50 ಕ್ಕಿಂತ ಹೆಚ್ಚು ಮತದಾರರು ತಮ್ಮನ್ನು ಬೆಂಬಲಿಸಿ ಕಾಂಗ್ರೆಸ್ನ ದುರಹಂಕಾರಕ್ಕೇ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.