ಇತರರಿಗೆ ಛತ್ರಪತಿ ಶಾಹು ಮಹಾರಾಜ ಪ್ರೇರಣೆ
Team Udayavani, Jul 24, 2017, 12:05 PM IST
ಮೈಸೂರು: ದೇಶದ ನೂರಾರು ಮಹಾರಾಜರಲ್ಲಿ ಕೇವಲ ನಾಲ್ವರು ಮಾತ್ರ ದಲಿತ ಹಾಗೂ ಅಸ್ಪೃಶ್ಯರಿಗೆ ಮೀಸಲಾತಿ ನೀಡಿದ್ದು, ಇವರುಗಳಿಗೆ ಪ್ರೇರಣೆ ಆಗಿದ್ದು ಛತ್ರಪತಿ ಶಾಹು ಮಹಾರಾಜರು ಎಂದು ಪ್ರಜಾ ಪರಿವರ್ತನ ವೇದಿಕೆ ಕರ್ನಾಟಕ ರಾಜಾÂಧ್ಯಕ್ಷ ಬಿ.ಗೋಪಾಲ್ ಅಭಿಪ್ರಾಯಪಟ್ಟರು.
ಪ್ರಜಾ ಪರಿವರ್ತನಾ ವೇದಿಕೆ ಜಿಲ್ಲಾ ಘಟಕದಿಂದ ನಗರದ ಪುರಭವನದಲ್ಲಿ ಆಯೋಜಿಸಿದ್ದ ಛತ್ರಪತಿ ಶಾಹು ಮಹಾರಾಜರ ಜನ್ಮದಿನಾಚರಣೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿದ್ದ 563 ರಾಜಮನೆತನದಲ್ಲಿ ಕೇವಲ ನಾಲ್ವರು ರಾಜರು ಮಾತ್ರ ದಲಿತರು, ಅಸ್ಪೃಶ್ಯರಿಗೆ ಮೀಸಲಾತಿ ನೀಡಿದ್ದರು ಎಂದರು.
1894ರಲ್ಲಿ ಶಾಹು ಮಹಾರಾಜರು ಕೊಲ್ಲಾಪುರದ ರಾಜರಾಗಿ ನೇಮಕವಾದ ವೇಳೆ ನಡೆದ ಪಟ್ಟಾಭಿಷೇಕದ ವೇಳೆ ಶಾಹು ಮಹಾರಾಜರು ಅಸ್ಪೃಶ್ಯರೆಂಬ ಕಾರಣಕ್ಕೆ ಆಸ್ಥಾನದ ಅರ್ಚಕರು ವೇದಮಂತ್ರದ ಬದಲಾಗಿ ಪುರಾಣ ಮಂತ್ರವನ್ನು ಹೇಳುವ ಮೂಲಕ ರಾಜರಿಗೆ ಅವಮಾನ ಮಾಡಿದರು.
ಇದರಿಂದಾಗಿ ಶಾಹು ಮಹಾರಾಜರು ಅವರನ್ನು ಕೆಲಸದಿಂದ ತೆಗೆಯುವ ಮೂಲಕ ಆಸ್ಥಾನದ ಆಡಳಿತದಲ್ಲಿ ಶೇ.50 ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದರು. ಇವರ ಪ್ರೇರಣೆಯಿಂದ 1923ರಲ್ಲಿ ಮೈಸೂರಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸಹ ಪ್ರತಿಯೊಂದು ಕ್ಷೇತ್ರದಲ್ಲಿ ಅಸ್ಪೃಶ್ಯರಿಗೆ ಮೀಸಲಾತಿ ಕಲ್ಪಿ$ಸಿದರು ಎಂದು ತಿಳಿಸಿದರು.
ಅಲ್ಲದೆ ಪ.ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುತ್ತಾರೆಂಬ ಕಾರಣಕ್ಕೆ 23 ಶಾಲೆಗಳನ್ನು ತೆರೆದರು. ಜತೆಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆ ಮೊದಲ ಬಾರಿಗೆ ಜಾರಿಗೆ ತಂದರು. ಅಲ್ಲದೆ 7ನೇ ತರಗತಿ ಉತ್ತೀರ್ಣರಾದ ದಲಿತರನ್ನು ತಹಶೀಲ್ದಾರರನ್ನಾಗಿ ಮಾಡಿದರು.
ಹೀಗಾಗಿ ಶಾಹುಮಹರಾಜರು ಅಸ್ಪೃಶ್ಯತೆ ನಿವಾರಣೆಗೆ ಹೋರಾಡಿದ ವ್ಯಕ್ತಿಯಾಗಿದ್ದು, ದಲಿತರನ್ನು ಎಲ್ಲಾ ಕ್ಷೇತ್ರದಲ್ಲಿ ಬೆಳೆಸಬೇಕೆಂಬ ತುಡಿತ ಹೊಂದಿದ್ದವರು. ಈ ಕಾರಣದಿಂದ ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಿ, ಎಲ್ಲಾ ರಂಗದಲ್ಲೂ ಮೀಸಲಾತಿ ಕಲ್ಪಿಸುವ ಮೂಲಕ ಎಲ್ಲರಿಗೂ ಮಾದರಿ ಎನಿಸಿದರು ಎಂದು ಬಣ್ಣಿಸಿದರು.
ಉರಿಲಿಂಗಿಪೆದ್ದಿ ಮಠದ ಜಾnನಪ್ರಕಾಶ್ ಸ್ವಾಮೀಜಿ, ವೇದಿಕೆ ಜಿಲ್ಲಾಧ್ಯಕ್ಷ ಎಚ್.ಎಂ.ಸತೀಶ್, ಪೊ›.ವಿ.ಷಣ್ಮುಗಂ, ರಾಜ್ಯ ಉಪಾಧ್ಯಕ್ಷ ಡಾ.ರೋಷನ್ ಮುಲ್ಲಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಮಹಾರಾಜ್, ಖಜಾಂಜಿ ಪೊ›.ಚಂದ್ರಕಾಂತ್ ಹಾಗೂ ಕರ್ನಾಟಕ ಬುದ್ಧ ಧಮ್ಮ ಸಮಿತಿ ಆರ್. ಮಹದೇವಪ್ಪ, ರಾಜಮಣಿ ಇನ್ನಿತರರು ಇದ್ದರು.