ಮೈಸೂರು:ನಾಲೆಗೆ ಆಟೋ ಉರುಳಿ 3 ಮಕ್ಕಳ ದುರ್ಮರಣ
Team Udayavani, Aug 26, 2017, 4:25 PM IST
ಮೈಸೂರು: ಜಿಲ್ಲೆಯ ಟೀ.ನರಸೀಪುರದ ವಾಟಾಳುವಿನ ಬಲ್ಲೇಶ್ವರ ಸ್ವಾಮಿ ದೇಗುಲದ ಬಳಿ ಆಟೋ ರಿಕ್ಷಾವೊಂದು ನಾಲೆಗೆ ಉರುಳಿ ಬಿದ್ದ ಪರಿಣಾಮ ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಅವಘಡ ಶನಿವಾರ ನಡೆದಿದೆ.
ಮೃತರು ಚಾಮರಾಜನಗರದ ಯಳಂದೂರು ಗ್ರಾಮದ ಬೂಂದ ಹಳ್ಳಿ ಗ್ರಾಮದವರೆಂದು ತಿಳಿದು ಬಂದಿದ್ದು, ಮೃತ ಬಾಲಕ ಮಹದೇವಪ್ರಸಾದ್ (4)ಎಂದು ಗುರುತಿಸಲಾಗಿದ್ದು, ಮತ್ತಿಬ್ಬರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಆಟೋ ಚಾಲಕ ಪಾರಾಗಿದ್ದಾನೆ ಎಂದು ವರದಿಯಾಗಿದೆ.
ಟಿ.ನರಸೀಪುರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.