ಬೇರೆಯವರಿಂದ ಕನ್ನಡ ಕಲಿಯಬೇಕಾಗಿಲ್ಲ; ಚಂಪಾಗೆ ಸೇಠ್ ತಿರುಗೇಟು
Team Udayavani, Nov 25, 2017, 4:32 PM IST
ಬೆಂಗಳೂರು: ಅಧಿವೇಶನದ ಹಿನ್ನೆಲೆಯಲ್ಲಿ ನಾನು ಸಮ್ಮೇಳನಕ್ಕೆ ಬರಲು ಆಗಿರಲಿಲ್ಲ. ನಾನು ಬೇರೆಯವರಿಂದ ಕನ್ನಡ ಕಲಿಯಬೇಕಾಗಿಲ್ಲ. ಆದರೆ ನಾನು ಸದಾ ಕನ್ನಡದ ಸೇವಕ ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂಪಾಗೆ ತಿರುಗೇಟು ನೀಡಿದ್ದಾರೆ.
ಕೇಂದ್ರೀಯ ಪಠ್ಯಕ್ರಮ ಹೇರಲು ಮುಂದಾಗಿರುವ ರಾಜ್ಯ ಶಿಕ್ಷಣ ಸಚಿವ ಸೇಠ್ ಅವರಿಗೆ ಚಂಪಾ ವೇದಿಕೆಯಿಂದಲೇ ಬಿಸಿ ಮುಟ್ಟಿಸಿದ್ದರು. ಒಂದೋ ರಾಜ್ಯ ಸಂಪುಟದಿಂದ ಅವರನ್ನು ಕೈಬಿಡಿ, ಇಲ್ಲವೆಂದರೆ ಅವರಿಗೆ ಪ್ರಿಯವಾದ ಖಾತೆಗೆ ವರ್ಗಾವಣೆ ಮಾಡಿ ಎಂದು ಸಿಎಂ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದ್ದರು.
ಸಾಹಿತಿಗಳಿಗೆ ಮಾಹಿತಿಯ ಕೊರತೆ ಇರುತ್ತದೆ. ನಾನು ಸದಾ ಕನ್ನಡದ ಸೇವಕ ಎಂದು ತಿರುಗೇಟು ನೀಡಿದ್ದಾರೆ.
ಸಮ್ಮೇಳನದಲ್ಲಿ ನಾಡು ನುಡಿಯನ್ನು ಒಗ್ಗೂಡಿಸಲು ಪ್ರಯತ್ನಿಸೋಣ ಎಂದು ಹೇಳಿದರು.
ಶುಕ್ರವಾರ ಸಾಹಿತ್ಯ ಸಮ್ಮೇಳನಕ್ಕೆ ಗೈರು ಹಾಜರಾಗಿದ್ದ ತನ್ವೀರ್ ಸೇಠ್ 2ನೇ ದಿನವಾದ ಶನಿವಾರ ಅಕ್ಷರ ಜಾತ್ರೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ