ಕಾವೇರಿ ತಟದಲ್ಲಿ 6 ಪುರಾತನ ಶಿವಲಿಂಗ ಪತ್ತೆ
Team Udayavani, May 17, 2018, 1:46 PM IST
ಶ್ರೀರಂಗಪಟ್ಟಣ: ತಾಲೂಕಿನ ಬಾಬುರಾಯನ ಕೊಪ್ಪಲು ಗ್ರಾಮದ ಬಳಿ ಕಾವೇರಿ ನದಿ ತೀರದಲ್ಲಿ ಪುರಾತನ ಕಾಲದ ಶಿವ ಲಿಂಗಗಳು ಪತ್ತೆಯಾಗಿವೆ. ಪುರಾತನ ಗುಂಜಾ ನರಸಿಂಹಸ್ವಾಮಿ ದೇವಾಲಯದ ಹಿಂಭಾಗಕ್ಕೆ ಇರುವ ಸರ್ವೆ
ನಂಬರ್ 185ರಲ್ಲಿ ಪಾಳು ಬಿದ್ದ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಾಲಯ ಜಾಗವನ್ನು ಸ್ವತ್ಛ ಮಾಡಲಾಗುತ್ತಿತ್ತು.
ಪುನರ್ ಜೀರ್ಣೋದ್ಧಾರಕ್ಕಾಗಿ ಗ್ರಾಮಸ್ಥರು ದೇವಾಲಯದ ಸುತ್ತಲೂ ಬೆಳೆದಿದ್ದ ಗಿಡ ಗಂಟಿಗಳನ್ನು ತೆಗೆದು ಸ್ವತ್ಛ ಮಾಡಿ ಕಾವೇರಿ ನದಿ ತೀರದಲ್ಲಿ ಜೆಸಿಬಿ ಯಂತ್ರದಿಂದ ಮಣ್ಣು ತೆಗೆದು ಸಮತಟ್ಟು ಮಾಡಲಾಗುತ್ತಿತ್ತು.
ಈ ವೇಳೆ ಪುರಾತನ ಕಾಲದ 6 ಬೃಹತ್ ಶಿವಲಿಂಗಗಳು ದೊರೆತಿವೆ. ಇವುಗಳನ್ನು ನೂರಾರು ವರ್ಷಗಳ
ಹಿಂದೆಯೇ ಕೆತ್ತನೆ ಮಾಡಿ ಅದನ್ನು ಪ್ರತಿಷ್ಟಾಪಿಸಲು ಮರಳಿನಲ್ಲಿ ಹೂತಿಟ್ಟಿರಬಹುದು ಎಂದು ಹಿರಿಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೊದಲು ಗಿಡಗಂಟಿಗಳನ್ನು ತೆಗೆದು ಮಣ್ಣನ್ನು ಸಮತಟ್ಟು ಮಾಡಿಕೊಳ್ಳಲು ಜೆಸಿಬಿ ಯಂತ್ರದಿಂದ ನದಿ ತೀರದಲ್ಲಿ ಬಗೆದಾಗ ಒಂದು ಶಿವಲಿಂಗದ ಮಧ್ಯ ಭಾಗದ ಪೀಠ ಕಂಡು ಬಂದಿತು.
ಅದರ ಜೊತೆಯಲ್ಲಿ ಲಿಂಗದ ಮೇಲೆ ಕೂರುವ ಉದ್ದನೆ ಗುಂಡು ಆಕಾರದಂತಿರುವ ಲಿಂಗದ ಕಂಬಮೇಲೆ ಬಂದಿದೆ. ಹೀಗೆ ಒಂದರ ಹಿಂದೆ ಒಂದೊಂದಾಗಿ ಸಾಲಾಗಿ 6 ಲಿಂಗಗಳು ಸಿಕ್ಕಿವೆ.
ನಂತರ ಗ್ರಾಮಸ್ಥರು ಲಿಂಗಗಳನ್ನು ಹೊರ ತೆಗೆದು ದೇವಾಲಯದ ಪಕ್ಕದಲ್ಲಿಟ್ಟಿದ್ದಾರೆ. ದೇವಾಲಯದ ಬಳಿ ನದಿ ತೀರದಲ್ಲಿ ಲಿಂಗಗಳು ಸಿಕ್ಕ ಸುದ್ದಿ ಹಬ್ಬುತ್ತಿದ್ದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಜಮಾಯಿಸಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ