ರೋಮಾಂಚಕಾರಿ ವಜ್ರಮುಷ್ಠಿ ಕಾಳಗ


Team Udayavani, Oct 23, 2018, 11:48 AM IST

m2-romanchana.jpg

ಮೈಸೂರು: ವಿಜಯದಶಮಿ ದಿನ ನಡೆಯಬೇಕಿದ್ದ ರೋಮಾಂಚಕಾರಿ ವಜ್ರಮುಷ್ಠಿ ಕಾಳಗ ಅರಮನೆಯ ಸವಾರಿ ತೊಟ್ಟಿಯಲ್ಲಿ ಸೋಮವಾರ ನಡೆಯಿತು. ಮೈಸೂರಿನ ಮಂಜುನಾಥ ಜಟ್ಟಿ -ಚನ್ನಪಟ್ಟಣದ ದ್ಯಾದರ ಜಟ್ಟಿ ಜೋಡಿ, ಚಾಮರಾಜ ನಗರದ ಪುರುಷೋತ್ತಮ ಜಟ್ಟಿ ಹಾಗೂ ಬೆಂಗಳೂರಿನ ರಾಘವೇಂದ್ರ ಜಟ್ಟಿ ಜೊಡಿಗಳು ಅಖಾಡಕ್ಕಿಳಿದು ವಜ್ರಮುಷ್ಠಿ ಕಾಳಗ ನಡೆಸಿದರು.

ಭಾನುವಾರ ರಾತ್ರಿಯೇ ಮೈಸೂರು ನಗರಕ್ಕೆ ಆಗಮಿಸಿದ್ದ ಜಟ್ಟಿಗಳು ಸೋಮವಾರ ಬೆಳಗ್ಗೆಯೇ ನಜರ್‌ಬಾದ್‌ನಲ್ಲಿರುವ ನಿಂಬುಜಾದೇವಿ ದೇವಸಾನದಲ್ಲಿ ಪೂಜೆ ಸಲ್ಲಿಸಿ,ಅಲ್ಲಿಂದ ಮೆರವಣಿಗೆಯಲ್ಲಿ ಹೊರಟು ಬೆಳಗ್ಗೆ 9.15ಕ್ಕೆ ಅರಮನೆಗೆ ಆಗಮಿಸಿದರು. ಅರಮನೆಯ ಕಲ್ಯಾಣಮಂಟಪದ ಎದುರಿನ ಸವಾರಿತೊಟ್ಟಿಯಲ್ಲಿನ ಅಖಾಡದ ಮಟ್ಟಿಗೆ ಪೂಜೆ ಸಲ್ಲಿಸಲಾಯಿತು. ಕಾಳಗಕ್ಕೆ ಸಜ್ಜಾಗಿದ್ದ ಜಟ್ಟಿಗಳು ಪೂಜೆ ಸಲ್ಲಿಸಿ, ಮಟ್ಟಿಗೆ ನಮಸ್ಕಾರ ಮಾಡಿದರು.

ಹಿರಿಯ ಜಟ್ಟಿಗಳು ಸಾಂಪ್ರದಾಯಿಕವಾಗಿ ಎರಡೂ ಜೋಡಿಗಳನ್ನು ಕಾಳಗಕ್ಕೆ ಬಿಡುತ್ತಿದ್ದಂತೆ ನಾಲ್ವರೂ ಅಖಾಡದಲ್ಲಿ ಸೆಣಸಾಡಿದರು. ಪುರುಷೋತ್ತಮ ಜಟ್ಟಿಯ ಆಕ್ರಮಣಕ್ಕೆ ರಾಘವೇಂದ್ರಜಟ್ಟಿಯ ತಲೆಯಿಂದ ರಕ್ತ ಚಿಮ್ಮುತ್ತಿದ್ದಂತೆ ಕಾಳಗವನ್ನು ಅಂತ್ಯಗೊಳಿಸಲಾಯಿತು.

ಈ ವೇಳೆ ವಿಜಯಯಾತ್ರೆಗೆ ಹೊರಟ ಯದುವೀರ್‌ ಅವರಿಗೆ ಶಿರಬಾಗಿ ನಮಿಸಿದ ಜಟ್ಟಿಗಳಿಗೆ ಫ‌ಲ-ತಾಂಬೂಲ ಹಾಗೂ ಗೌರವ ಧನ ನೀಡಿ ಸತ್ಕರಿಸಲಾಯಿತು. ವಿಜಯದಶಮಿಯ ದಿನ ನಡೆಯುವ ವಜ್ರಮುಷ್ಠಿ ಕಾಳಗವನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು,

ಆದರೆ, ಈ ವರ್ಷ ರಾಜಮನೆತನದ ಇಬ್ಬರ ಸಾವಿನ ಹಿನ್ನೆಲೆಯಲ್ಲಿ ಬೇರೆ ದಿನ ನಡೆಸಿದ್ದರಿಂದ ಜಟ್ಟಿಗಳ ಕುಟುಂಬದವರು, ನೆಂಟರು ಹಾಜರಿದ್ದು ಕಾಳಗವನ್ನು ಕಣ್ತುಂಬಿಕೊಂಡರು. ಪ್ರತಿವರ್ಷ ಜಟ್ಟಿ ಕಾಳಗ ನಡೆಯುವಾಗ ಪ್ರಮೋದಾದೇವಿ ಒಡೆಯರ್‌ ಸೇರಿದಂತೆ ರಾಜವಂಶಸ್ಥರು ಕಲ್ಯಾಣಮಂಟಪದ ಮಾಳಿಗೆಯಲ್ಲಿ ನಿಂತು ಕಾಳಗ ವೀಕ್ಷಿಸುತ್ತಿದ್ದರು. ಆದರೆ, ಈ ಬಾರಿ ಅವರು ವೀಕ್ಷಣೆಯಿಂದ ದೂರ ಉಳಿದರು. 

ಟಾಪ್ ನ್ಯೂಸ್

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Viral: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

11-

UPSC ಪರೀಕ್ಷೆಯಲ್ಲಿ ಹುಣಸೂರಿನ ಲೇಖನ್‌ಗೆ 77ನೇ ರ‍್ಯಾಂಕ್

ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

Congress ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

ಸಮಾವೇಶ ನಡೆದ ಮೈದಾನದಲ್ಲಿ ಸ್ವಚ್ಚತೆ ನಡೆಸಿದ ಯದುವೀರ್ ಒಡೆಯರ್ ದಂಪತಿ

Mysore; ಸಮಾವೇಶ ನಡೆದ ಮೈದಾನದಲ್ಲಿ ಸ್ವಚ್ಛತೆ ನಡೆಸಿದ ಯದುವೀರ್ ಒಡೆಯರ್ ದಂಪತಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.