4 ತಿಂಗಳಾದ್ರೂ ಮಗಳು ಸಿಕ್ಕಿಲ್ಲ!


Team Udayavani, Dec 15, 2018, 11:36 AM IST

m1-4tin.jpg

ಮೈಸೂರು: ನನ್ನ ಮಗಳು ಈವರೆಗೆ ಸಿಕ್ಕಿಲ್ಲ…ಸರ್ಕಾರದವರು ಬಾಡಿ (ಮೃತದೇಹ) ಸಿಗಬೇಕು ಅಂತಿದ್ದಾರೆ. ನನ್ನ ಮಗಳ ಬಾಡಿ ಇನ್ನೆಲ್ಲಿ ಹುಡುಕಿ ಕೊಡ್ತಾರೋ ಗೊತ್ತಿಲ್ಲ, ಇದು ಕೊಡಗಿನಲ್ಲಿ ಸುರಿದ ಮಹಾ ಮಳೆ ದುರಂತದಲ್ಲಿ ಮಗಳನ್ನು ಕಳೆದುಕೊಂಡಿರುವ ಬೆಟ್ಟತ್ತೂರು ಗ್ರಾಮದ ಸೋಮಯ್ಯ ಅವರ ಮನಕಲಕುವ ನುಡಿ.

ಮೈಸೂರಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅಭಿರುಚಿ ಪ್ರಕಾಶನ ಹೊರತಂದಿರುವ ಪತ್ರಕರ್ತ ರವಿ ಪಾಂಡವಪುರ ಅವರ ಕಥೆ ಹೇಳುವೆ ನನ್ನ; ಕೊಡಗಿನ ನೊಂದ ಹೃದಯಗಳು.. ಮಿಡಿದ ಮನಗಳು ಪುಸ್ತಕವನ್ನು ಬಿಡುಗಡೆಗೊಳಿಸಿದ ಅವರು ಆಗಸ್ಟ್‌ ತಿಂಗಳಲ್ಲಿ ಸುರಿದ ಮಹಾಮಳೆಯಿಂದ ತಾವು ಎದುರಿಸಿದ ಸಂಕಷ್ಟವನ್ನು ಬಿಚ್ಚಿಟ್ಟರು.

ಕುಡಿಯ ಬುಡಕಟ್ಟು ಜನಾಂಗದ ನಾನು ಪತ್ನಿ ಜಯಂತಿ, ಮೂವರು ಗಂಡು ಮಕ್ಕಳು, ಕೊನೆಯ ಮಗಳು ಮಂಜುಳಾ ಜೊತೆಗೆ ಬೆಟ್ಟತ್ತೂರು ಗ್ರಾಮದಲ್ಲಿ ವಾಸವಿದ್ದೆವು. ಆ.17ರಂದು ಬೆಳಗ್ಗೆ 8.45ರ ಸುಮಾರಿಗೆ ಜೋಡುಪಾಲ ಗ್ರಾಮದಲ್ಲಿರುವ ಅಕ್ಕನ ಮನೆಯಿಂದ ಸಹೋದರ ಚೆಂಗಪ್ಪ, ನಮ್ಮ ಮನೆಗೆ ದೂರವಾಣಿ ಕರೆ ಮಾಡಿ ಭಾವ ಬಸಪ್ಪನ ಮೃತದೇಹ ಹೈವೇ ಬಳಿ ಬಿದ್ದಿದೆ ಎಂದು ತಿಳಿಸಿದರು. 

ಎಸ್ಸೆಸೆಲ್ಸಿ ಓದುತ್ತಿದ್ದ ನನ್ನ ಮಗಳು ಮಂಜುಳಾ ನಮ್ಮ ಮನೆಯಿಂದ ಶಾಲೆಗೆ ಹೋಗಬೇಕೆಂದರೆ ಒಂದು ಕಿ.ಮೀ. ಅರಣ್ಯದಲ್ಲಿ ಸೇರಿದಂತೆ ನಾಲ್ಕು ಕಿ.ಮೀ ನಡೆದು, ನಂತರ 10 ಕಿ.ಮೀ. ಬಸ್‌ನಲ್ಲಿ ಹೋಗಬೇಕಿತ್ತು. ಈ ಕಾರಣಕ್ಕೆ ನಾಲ್ಕೂವರೆ ತಿಂಗಳ ಹಿಂದೆ ಮಗಳನ್ನು ಅಕ್ಕನ ಮನೆಗೆ ಬಿಟ್ಟಿದ್ದೆ. ಮದೇನಾಡಿಂದ ಬೆಟ್ಟತ್ತೂರಿಗೆ ಸಂಪರ್ಕ ಕಡಿತ ಆಗಿದ್ದರಿಂದ ಬರಲಾಗಿಲ್ಲ. ನಾಲ್ಕು ದಿನಗಳ ನಂತರ ಭಾವ ಬಸಪ್ಪನ ಮಗಳ ಮೃತದೇಹ ಸಿಕ್ಕಿತು.

ಊರಿಗೆ ತರಲು ಸಂಪರ್ಕ ಸಾಧ್ಯವಿಲ್ಲದ್ದರಿಂದ ಸುಳ್ಯದಲ್ಲೇ ಅಂತ್ಯಕ್ರಿಯೆ ನಡೆಸಬೇಕಾಯಿತು. ಮಳೆ ಕಡಿಮೆಯಾದ ನಂತರ ಹೊಳೆ ಬದಿಯಲ್ಲೇ ನಡೆದು ಬಂದೆವಾದರೂ ಮನೆಯಲ್ಲಿದ್ದ ಒಂದೇ ಒಂದು ವಸ್ತು ನಮಗೆ ಸಿಗಲಿಲ್ಲ… ಆ.24ರಂದು ಹೊಳೆಯ ಮಧ್ಯೆ ಅಕ್ಕ ಗೌರಮ್ಮಳ ಮೃತದೇಹ ಸಿಕ್ಕಿತಾದರೂ ಹೊರ ತೆಗೆಯುವಾಗ ಒಂದು ಕಾಲು ಕಳಚಿಹೋಗಿತ್ತು. ಅವರ ಮನೆಯಲ್ಲೇ ಇದ್ದ ನನ್ನ ಮಗಳು ಮಂಜುಳಾ ಈವರೆಗೆ ಸಿಕ್ಕಿಲ್ಲ.

ಸಂಶಯ ಇರುವ ಜಾಗದಲ್ಲಿ ಹುಡುಕಿ ಎಂದು ಬೇಡಿಕೊಂಡಾಗ ಜೆಸಿಬಿ ಕಳಿಸುತ್ತೇವೆ ಎಂದು 15 ದಿನ ನಮ್ಮನ್ನು ರಸ್ತೆ ಬದಿ ಕಾಯಿಸಿದರೇ ಹೊರತು ಜೆಸಿಬಿ ಕಳಿಸಲಿಲ್ಲ. ಕೊನೆಗೆ ದೊರೆತ ಮೂಳೆಯೊಂದನ್ನು ಪರೀಕ್ಷೆಗೆ ಕಳುಹಿಸಿದಾಗ ಅದು ಪ್ರಾಣಿಯ ಮೂಳೆ ಎಂಬ ವರದಿ ಬಂತು ಕಣ್ಣೀರಾದರು ಮಗಳ ಫೋಟೋ ಇಟ್ಟು ಅಂತ್ಯಕ್ರಿಯೆ ನಡೆಸಿರುವ ಸೋಮಯ್ಯ.

ಕೊಡಗು ಜಿಲ್ಲೆ ಪೊಲೀಸ್‌ ವರಿಷ್ಠಾಧಿಕಾರಿ ಸುಮನ ಡಿ.ಪಣ್ಣೇಕರ್‌ ಮಾತನಾಡಿ, ಆ.16ರಂದು ಮಳೆ ಹೆಚ್ಚಾದಂತೆ ಸಂತ್ರಸ್ತರಿಂದ ದೂರವಾಣಿ ಕರೆಗಳು ಬರಲು ಆರಂಭವಾಯಿತು. ಎಲ್ಲಿ ಎಷ್ಟು ಜನ ಸಿಲುಕಿದ್ದಾರೆ ಎಂಬ ಮಾಹಿತಿ ಕಲೆ ಹಾಕಿ, ಜನರ ಸಹಕಾರದಿಂದ ಕೆಲಸ ಮಾಡಲು ಸಾಧ್ಯವಾಯಿತು.

ಮೊದಲ ಮೂರು ದಿನ ಬದುಕಿಸಿ ಹೊರತರಲು ಗಮನ ಹರಿಸಿದೆವು. ನಂತರ ಸೆ.3ರವರೆಗೂ ಮೃತದೇಹಗಳನ್ನು ಪತ್ತೆಹಚ್ಚಿ ಹೊರತರುವ ಕೆಲಸ ಮಾಡಿದೆವು. ಸೋಮಯ್ಯ ಅವರ ಮಗಳು ಮಂಜುಳಾ ಬದುಕುಳಿದಿಲ್ಲ, ಪರಿಹಾರ ನೀಡಿ ಎಂದು ಜಿಲ್ಲಾ ಮಂತ್ರಿ ಹಾಗೂ ಮುಖ್ಯಮಂತ್ರಿಯವರಿಗೆ ವರದಿ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಪತ್ರಕರ್ತ ಅನಂತ ಚಿನಿವಾರ್‌ ಮಾತನಾಡಿ, ಮಹಾ ಮಳೆಯಿಂದ ಕೊಡಗು ನಲುಗಿ ನಾಲ್ಕೂ ತಿಂಗಳಾದರು ಕೊಡಗು ಮರು ನಿರ್ಮಾಣದ ಕೆಲಸ ಆಗಬೇಕಾದಷ್ಟು ಆಗಲಿಲ್ಲ. ಸಂತ್ರಸ್ತರಿಗೆ ಮನೆ ಕಟ್ಟಿಕೊಡುವ ಜೊತೆಗೆ ಬದುಕು ಕಟ್ಟಿಕೊಡುವ ಕೆಲಸವೂ ಆಗಬೇಕಿದೆ ಎಂದು ಹೇಳಿದರು. ಕೊಡಗು ಪ್ರಸ್‌ಕ್ಲಬ್‌ ಅಧ್ಯಕ್ಷ ಅಜ್ಜಮಾಡ ರಮೇಶ್‌ ಕುಟ್ಟಪ್ಪ ಅಧ್ಯಕ್ಷತೆವಹಿಸಿದ್ದರು. ಕೃತಿಕಾರ ರವಿ ಪಾಂಡವಪುರ, ಪ್ರಕಾಶಕ ಅಭಿರುಚಿ ಗಣೇಶ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.