ಸ್ತ್ರೀಯರ ಹಿತಕ್ಕೆ ಮಂತ್ರಿಗಿರಿ ತ್ಯಜಿಸಿದ್ದ ಅಂಬೇಡ್ಕರ್
Team Udayavani, Mar 19, 2019, 7:15 AM IST
ಮೈಸೂರು: ದುಡಿಯುವ ವರ್ಗ ಅನುಭವಿಸುವ ಎಲ್ಲಾ ಹಕ್ಕುಗಳ ಹಿಂದೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಶ್ರಮ ಮತ್ತು ಕೊಡುಗೆಯಿದೆ ಎಂದು ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದರು.
ನಗರದ ಯುವರಾಜ ಕಾಲೇಜು ಜ್ಞಾನವಾಹಿನಿ ಪಠ್ಯೇತರ ಚಟುವಟಿಕೆಗಳ ಸಮಿತಿ 2018-19 ವತಿಯಿಂದ ಅಂಬೇಡ್ಕರ್ 128ನೇ ಸಂಸ್ಮರಣೆ ಹಾಗೂ ಡಾ.ಎಂ.ರುದ್ರಯ್ಯ ಅವರ “ಮಾನವೀಯ ಮೌಲ್ಯಗಳು ಮತ್ತು ವ್ಯಕ್ತಿತ್ವ ವಿಕಸನ’ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗಾಗಿ ಜಾರಿಗೆ ತರಲು ಉದ್ದೇಶಿಸಿದ್ದ ವಿಧೇಯಕಕ್ಕೆ ಅನುಮೋದನೆ ಸಿಗಲಿಲ್ಲವೆಂಬ ಕಾರಣಕ್ಕೆ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ ಮಹಿಳೆಯರ ಹಿತಕ್ಕಾಗಿ ಈವರೆಗೆ ಬೇರ್ಯಾವ ಮಂತ್ರಿಯೂ ರಾಜೀನಾಮೆ ಕೊಟ್ಟಿದ್ದಿಲ್ಲ ಎಂದರು.
ಅಂಬೇಡ್ಕರ್ ಉತ್ತಮ ವಕೀಲ, ಅರ್ಥಶಾಸ್ತ್ರಜ್ಞ, ಸಮಾಜ ವಿಜ್ಞಾನಿ, ಆಡಳಿತಗಾರ, ತತ್ವಜ್ಞಾನಿ, ಸಂವಿಧಾನ ಶಿಲ್ಪಿ, ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯತೆ ಮೆರೆದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು. ತಮ್ಮ ಇಡೀ ಜೀವನವನ್ನು ಈ ದೇಶದ ಒಳಿತಿಗಾಗಿ, ಶೋಷಿತ, ದಮನಿತ, ನೊಂದವರ ವಿಮೋಚನೆಗಾಗಿ ಹೋರಾಟ ನಡೆಸಿದರು,
ಅವರ ಈ ಹೋರಾಟ ಕೇವಲ ಲೌಕಿಕ ಹೋರಾಟವಾಗಿರಲಿಲ್ಲ. ಆದರೆ, ಸಂಕುಚಿತ ಮನೋಭಾವದಿಂದ ಈ ದೇಶದಲ್ಲಿ ಅಂಬೇಡ್ಕರ್ ಅವರನ್ನು ಕೇವಲ ಒಂದು ಜಾತಿಯ ನಾಯಕನಾಗಿ ಮಾಡುವ ಪ್ರಯತ್ನ ನಡೆಯಿತು. ಇದು ಸತ್ಯಕ್ಕೆ ಎಸಗಿದ ಅಪಚಾರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹರಿದು ಹಂಚಿಹೋಗಿದ್ದ ದಲಿತ ಸಮುದಾಯವನ್ನು ಸಂಘಟಿಸಿ ರಾಷ್ಟ್ರಮಟ್ಟದಲ್ಲಿ ವೇದಿಕೆ ರೂಪಿಸಿದರು. ಕುಂಭಕರ್ಣ ನಿದ್ದೆ ಮಾಡುತ್ತಿದ್ದ ಜನಸಾಮಾನ್ಯರನ್ನು ಎಬ್ಬಿಸಿ ಅವರಲ್ಲಿ ಧೈರ್ಯ, ಸ್ಥೆçರ್ಯ ಆತ್ಮವಿಶ್ವಾಸ ಮೂಡಿಸಿದರು. ನ್ಯಾಯ, ಸಮಾನತೆ ಸ್ವಾಭಿಮಾನದ ಹೋರಾಟಕ್ಕೆ ಹಚ್ಚಿದರು.
ಅವರು ದಲಿತ ಸಮುದಾಯದ ಮಹಾನಾಯಕ ಎನ್ನುವುದು ನಿರ್ವಿವಾದ ಎಂದರು. ಡಾ.ಎಂ.ರುದ್ರಯ್ಯನವರು ವಿಜ್ಞಾನ ಕಲಿಸುವವರಾದರೂ ಕನ್ನಡದಲ್ಲಿ ಕೃತಿಯನ್ನು ಬರೆದು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ಅನೇಕ ಕೃತಿ ರಚಿಸಿ ಕನ್ನಡದ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ಲೇಖಕ ಡಾ.ಎಂ.ರುದ್ರಯ್ಯ, ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣಾ ಕೇಂದ್ರದ ಸಂಯೋಜನಾಧಿಕಾರಿ ಡಾ.ನರೇಂದ್ರ ಕುಮಾರ್, ಆಡಳಿತಾಧಿಕಾರಿ ಡಾ.ಎಚ್.ಸಿ.ದೇವರಾಜೇಗೌಡ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಎಚ್.ಬಿ.ಮಹೇಶ್, ಸಂಯೋಜಕಿ ಡಾ.ಕೆ.ಸೌಭಾಗ್ಯವತಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2006ರ ನಕಲಿ ಎನ್ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೊಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ
Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..
ಉದ್ಯಾವರ-ಮರ್ಣೆ-ಬೆಳ್ಳೆ ರಸ್ತೆ ಅಭಿವೃದ್ಧಿ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ