ಎಸ್ಬಿಐ ಸಹವರ್ತಿ ಬ್ಯಾಂಕುಗಳ 50,000 ನೌಕರರಿಗೆ ವಿಆರ್ಎಸ್ ಕೊಡುಗೆ
Team Udayavani, Feb 17, 2017, 5:44 PM IST
ಹೊಸದಿಲ್ಲಿ : ಎಸ್ ಬಿ ಐ ಜತೆಗೆ ವಿಲೀನವಾಗುವ ಐದು ಸಹವರ್ತಿ ಬ್ಯಾಂಕುಗಳು ವಿಲೀನಕ್ಕೆ ಮುನ್ನ ತಮ್ಮ ನೌಕರರಿಗೆ ವಿಆರ್ಎಸ್ ಕೊಡುಗೆಯನ್ನು ನೀಡಿವೆ.
ಎಸ್ಬಿಐ ಜತೆಗಿನ ವಿಲೀನ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ಹಾಗಿದ್ದರೂ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ (ಎಸ್ಬಿಎಚ್) ಈಗಾಗಲೇ ತನ್ನ ನೌಕರರಿಗೆ ವಿಆರ್ಎಸ್ ಕೊಡುಗೆಯನ್ನು ನೀಡಿದೆ.
ಇದೇ ರೀತಿಯ ವಿಆರ್ಎಸ್ ಕೊಡುಗೆ ನೀಡಲಿರುವ ಇತರ ಎಸ್ಬಿಐ ಸಹವರ್ತಿ ಬ್ಯಾಂಕ್ಗಳೆಂದರೆ ಸ್ಟೇಟ್ ಬ್ಯಾಂಕ್ ಆಪ್ ಬಿಕಾನೇರ್ ಆ್ಯಂಡ್ ಜೈಪುರ್ ಎಸ್ಬಿಬಿಜೆ), ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ (ಎಸ್ಬಿಎಂ), ಸ್ಟೇಟ್ ಬ್ಯಾಂಕ್ ಆಪ್ ಪಟಿಯಾಲಾ (ಎಸ್ಬಿಪಿ), ಸ್ಟೇಟ್ ಬ್ಯಾಂಕ್ ಆಫ್ ಟ್ರ್ಯಾವಂಕೂರ್ (ಎಸ್ಬಿಟಿ).
ಕೇಂದ್ರ ಸಂಪುಟ ಮೊನ್ನೆ ಬುಧವಾರ ಈ ಸಹವರ್ತಿ ಬ್ಯಾಂಕುಗಳು ಎಸ್ಬಿಐ ಜತೆಗೆ ವಿಲೀನವಾಗುವುದಕ್ಕೆ ಅನುಮೋದನೆ ನೀಡಿದೆ.
ಬ್ಯಾಂಕಿನಲ್ಲಿ 20 ವರ್ಷ ಸೇವೆ ಸಲ್ಲಿಸಿದವರಿಗೆ ಅಥವಾ 2016ರ ನವೆಂಬರ್ 30ರಂದು 55 ವರ್ಷ ಪ್ರಾಯ ಆದವರಿಗೆ (ಎಲ್ಲ ಪರ್ಮನೆಂಟ್ ಸ್ಟಾಫ್ ಮತ್ತು ಅಧಿಕಾರಿ ವರ್ಗದವರಿಗೆ) ವಿಆರ್ಎಸ್ ಪಡೆಯುವ ಅರ್ಹತೆ ಇರುತ್ತದೆ.
ಎಸ್ಬಿಐ ಜತೆಗೆ ವಿಲೀನವಾಗುವ ಎಲ್ಲ ಸಹವರ್ತಿ ಬ್ಯಾಂಕ್ಗಳ 50,000ಕ್ಕೂ ಅಧಿಕ ನೌಕರರಿಗೆ ವಿಆರ್ಎಸ್ ಅರ್ಹತೆ ಇರುತ್ತದೆ.
ವಿಆರ್ಎಸ್ ಪಡೆಯುವ ನೌಕಕರಿಗೆ, ನಿವೃತ್ತಿಗೆ ಮುನ್ನ ತಮಗಿನ್ನು ಉಳಿದಿರುವ ಸೇವಾವಧಿಗೆ ಸಿಗಬಹುದಾದ ವೇತನದ ಶೇ.50ರಷ್ಟು ಮೊತ್ತವನ್ನು ಎಕ್ಸ್ ಗ್ರೇಶಿಯಾ ಆಗಿ ನೀಡಲಾಗುತ್ತದೆ.ಆದರೆ ಇದು 30 ತಿಂಗಳ ಸಂಬಳದ ಗರಿಷ್ಠ ಮೊತ್ತಕ್ಕೆ ಒಳಪಟ್ಟಿರುತ್ತದೆ. ಇದು ಮೂಲ ವೇತನ, ಸ್ಟಾಗ್ನೇಶನ್ ಇನ್ಕ್ರಿಮೆಂಟ್, ವೃತ್ತಿಪರ ಅರ್ಹತಾ ವೇತನ, ವಿಶೇಷ ವೇತನ ಮತ್ತು ತುಟ್ಟಿ ಭತ್ಯೆಯನ್ನು ಒಳಗೊಂಡಿರುತ್ತದೆ. ವಿಆರ್ಎಸ್ ಮಂಜೂರಾದ ಐದು ವಾರಗಳ ಒಳಗೆ ಹಣ ಸಿಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…
MUST WATCH
ಹೊಸ ಸೇರ್ಪಡೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ