ಯೋಧರ ಪತ್ನಿಯರ ಬಗ್ಗೆ ಕೀಳು ಹೇಳಿಕೆ:ಮಹಾರಾಷ್ಟ್ರ ಎಂಎಲ್ಸಿ ಸಂಸ್ಪೆಂಡ್
Team Udayavani, Mar 10, 2017, 10:43 AM IST
ಮುಂಬಯಿ: ಭಾರತೀಯ ಸೇನೆಯ ಯೋಧರ ಪತ್ನಿಯರ ಬಗೆಗೆ ಆಕ್ಷೇಪಕಾರಿ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ ತೀವ್ರ ವಿವಾದಕ್ಕೀಡಾಗಿದ್ದ ರಾಜ್ಯ ವಿಧಾನಪರಿಷತ್ನಲ್ಲಿನ ಬಿಜೆಪಿ ಬೆಂಬಲಿತ ಸದಸ್ಯ ಪ್ರಶಾಂತ್ ಪರಿಚಾರಕ್ ಅವರನ್ನು ಒಂದೂವರೆ ವರ್ಷಗಳ ಕಾಲ ಸದನದಿಂದ ಅಮಾನತುಗೊಳಿಸಲಾಗಿದೆ.
ಪ್ರಶಾಂತ್ ಪರಿಚಾರಕ್ ಅವರು ನೀಡಿರುವ ರೆನ್ನಲಾಗಿರುವ ವಿವಾದಾತ್ಮಕ ಹೇಳಿಕೆಯ ಸಂಬಂಧ ಪರಿಷತ್ನ ಸಭಾಪತಿ ರಾಮರಾಜೇ ನಿಂಬಾಳ್ಕರ್ ನೇತೃತ್ವದ ಸಮಿತಿ ತನಿಖೆ ನಡೆಸಲಿದೆ ಎಂದು ವಿಧಾನ ಪರಿಷತ್ನ ನಾಯಕರಾದ ಚಂದ್ರಕಾಂತ ಪಾಟೀಲ್ ಪ್ರಕಟಿಸಿದರು.
ಪ್ರಶಾಂತ್ ಪರಿಚಾರಕ್ ಅವರ ಅಮಾನತಿಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಸದನ ದಲ್ಲಿ ವಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದಾಗಿ ಕಲಾಪ ವನ್ನು ಮುಂದೂಡುತ್ತಲೇ ಬರಲಾಗಿತ್ತು.
ಪ್ರಶಾಂತ್ ಪರಿಚಾರಕ್ ಅವರು ಸೇನಾ ಯೋಧರ ಕುರಿತಂತೆ ನೀಡಿರುವ ಹೇಳಿಕೆಯು ತೀರಾ ಅಕ್ಷೇಪಕಾರಿ ಮತ್ತು ಮಹಿಳೆಯರಿಗೆ ಅಪಮಾನ ಉಂಟುಮಾಡುವಂತಹ ಹೇಳಿಕೆ ಯಾಗಿದ್ದು ಇದು ಸದನದ ಘನತೆಗೆ ಕುಂದುಂಟುಮಾಡಿರುವುದರಿಂದ ತನಿಖೆ ಪೂರ್ಣಗೊಳ್ಳುವವರೆಗೆ ಪರಿಚಾರಕ್ ಅವರನ್ನು ಸದನದಿಂದ ಅಮಾನತು ಗೊಳಿಸಲಾಗುವುದು ಎಂದು ಸಚಿವ ಚಂದ್ರಕಾಂತ ಪಾಟೀಲ್ ತಿಳಿಸಿದರು.
ಚುನಾವಣಾ ಪ್ರಚಾರದ ವೇಳೆ ಪ್ರಶಾಂತ್ ಪರಿಚಾರಕ್ ಅವರು ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಯೋಧರು ತಮಗೆ ಮಗು ಜನಿಸಿದ ಸಂತಸದಲ್ಲಿ ಪಂಜಾಬ್ ಗಡಿ ಯಲ್ಲಿ ಸಿಹಿಯನ್ನು ಹಂಚುತ್ತಾರೆ. ಆದರೆ ಅವರು ವರ್ಷವಿಡೀ ಮನೆಗೆ ತೆರಳಿರುವುದಿಲ್ಲ ಎಂಬ ಅವರ ಹೇಳಿಕೆ ತೀವ್ರ ವಿವಾದಕ್ಕೀಡಾದ ಬಳಿಕ ಪರಿಚಾರಕ್ ತಮ್ಮ ಹೇಳಿಕೆಗಾಗಿ ಕ್ಷಮೆ ಯಾಚಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?