ಕಾಪ್ಟರ್ ಹತ್ತುವಾಗ ಜಾರಿ ಬಿದ್ದ ಜೇಟ್ಲಿ
Team Udayavani, Mar 13, 2017, 3:45 AM IST
ಹರಿದ್ವಾರ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಹೆಲಿಕಾಪ್ಟರ್ ಹತ್ತುವ ವೇಳೆ ಕಾಲು ಜಾರಿ ಗಾಯ ಮಾಡಿಕೊಂಡ ಘಟನೆ ಹರಿದ್ವಾರದಲ್ಲಿ ಭಾನುವಾರ ನಡೆದಿದೆ.
ಯೋಗಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಹರ್ಬಲ್ ಫುಡ್ ಪಾರ್ಕ್ ವೀಕ್ಷಿಸಲೆಂದು ಅವರು ಹರಿದ್ವಾರಕ್ಕೆ ತೆರಳಿದ್ದರು. ಪಾರ್ಕ್ನಲ್ಲಿ ಸುತ್ತಾಡಿದ ಬಳಿಕ ಮರಳಿ ದೆಹಲಿಗೆ ವಾಪಸಾಗಲೆಂದು ಅವರು ಕಾಪ್ಟರ್ಗೆ ಹತ್ತುತ್ತಿದ್ದಾಗ ಕಾಲು ಜಾರಿ, ಕೆಳಕ್ಕೆ ಬಿದ್ದರು. ಕೂಡಲೇ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಅವರು ಗುಣಮುಖರಾಗಿದ್ದು, ಅದೇ ಕಾಪ್ಟರ್ನಲ್ಲಿ ದೆಹಲಿಗೆ ವಾಪಸಾಗಿದ್ದಾರೆ.