ಗೋವಾಕ್ಕಿಂದು ಹೊಸ ಸರಕಾರ
Team Udayavani, Mar 14, 2017, 3:50 AM IST
ಪಣಜಿ/ಹೊಸದಿಲ್ಲಿ: ಮಾಜಿ ಸಚಿವ ಮನೋಹರ್ ಪಾರೀಕರ್ ಮಂಗಳವಾರ ಸಂಜೆ 5ಕ್ಕೆ ದೋನಾಪಾವುಲ್ ರಾಜಭವನದಲ್ಲಿ 11 ಮಂದಿ ಸಂಪುಟ ದರ್ಜೆ ಸಚಿವರೊಂದಿಗೆ ಗೋವಾದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಕ್ಷಿಪ್ರ ಬೆಳವಣಿಗೆ ಹಿನ್ನೆಲೆಯಲ್ಲಿ ಪಾರೀಕರ್ ನಿರ್ವಹಿಸುತ್ತಿದ್ದ ಮಹತ್ವದ ರಕ್ಷಣಾ ಇಲಾಖೆಯ ಹೊಣೆಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಹೆಚ್ಚುವರಿಯಾಗಿ ನೀಡಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ.
ಮನೋಹರ ಪಾರೀಕರ್ ನೀಡಿರುವ ರಾಜೀನಾಮೆಯನ್ನು ರಾಷ್ಟ್ರಪತಿ ಅಂಗೀಕರಿಸಿದ್ದಾರೆ. ಇತ್ತ ಗೋವಾದಲ್ಲಿ ರಾಜ್ಯಪಾಲೆ ಮೃದುಲಾ ಸಿನ್ಹಾ 15 ದಿನಗಳಲ್ಲಿ ಬಹುಮತ ಸಾಬೀತು ಪಡಿಸುವಂತೆ ಗಡುವು ನೀಡುವ ಮೂಲಕ ಪಾರೀಕರ್ಗೆ ಸಿಎಂ ಪಟ್ಟಕ್ಕೇರಲು ಹಸಿರು ನಿಶಾನೆ ತೋರಿದ್ದಾರೆ. ಪಕ್ಷದ 13 ಶಾಸಕರ ಜತೆ ಬಹುಮತಕ್ಕೆ ಬೇಕಾದ ಉಳಿದ 8 ಮಂದಿ ಶಾಸಕರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಪಾರೀಕರ್ ಫಲಿತಾಂಶ ಪ್ರಕಟಗೊಂಡ 24 ಗಂಟೆಗಳಲ್ಲಿ ಯಶಸ್ವಿಯಾಗಿದ್ದಾರೆ.
ಗೋವಾ ಫಾರ್ವರ್ಡ್ ಪಕ್ಷ (ಜಿಎಫ್ಪಿ), ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ (ಎಂಜಿಪಿ) ಹಾಗೂ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಪರ್ರಿಕರ್ ಸಿಎಂ ಆಗುವುದೇ ಆದಲ್ಲಿ ಬೆಂಬಲಿಸುವುದಾಗಿ ಹೇಳಿದ್ದರು. ಅದೇ ಪ್ರಕಾರ, ಪಾರೀಕರ್ ಇದೀಗ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.
ಎಂಜಿಪಿ ತಿವಿದ ಜಿಎಸ್ಎಂ
ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ಮತ ಎಣಿಕೆ ಪ್ರಕ್ರಿಯೆಗೂ ಮುನ್ನವೇ ಬಿಜೆಪಿ ಜತೆ ಕೈಜೋಡಿಸಿ ಸರಕಾರ ರಚನೆಗೆ ಮುಂದಾಗಿದೆ. ಈ ಮೂಲಕ ಮತದಾರರನ್ನು ಅವಮಾನಿಸಿದೆ ಎಂದು ಗೋವಾ ಸುರಕ್ಷಾ ಮಂಚ್ ಆರೋಪಿಸಿದೆ. ಅಧಿಕಾರದ ಆಸೆಗಾಗಿ ಬಿಜೆಪಿ ಜತೆ ಕೈಜೋಡಿಸಿದೆ. ಇದು ಮತದಾರನಿಗೆ ಮಾಡುತ್ತಿರುವ ಅವಮಾನ. ಬಿಜೆಪಿ ಬೆಂಬಲದೊಂದಿಗೆ ಪಕ್ಷ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆಯೇ? ಎಂದು ಜಿಎಸ್ಎಂ ಅಧ್ಯಕ್ಷ ಆನಂದ್ ಶಿರೋಡ್ಕರ್ ಹೇಳಿದ್ದಾರೆ. ಎಂಜಿಪಿ ಪಕ್ಷ ಜಿಎಸ್ಎಂ ಮತ್ತು ಶಿವಸೇನೆ ಜತೆ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿದಿತ್ತು.
ಜೇಟ್ಲಿಗೆ ರಕ್ಷಣಾ ಖಾತೆ ಎರಡನೇ ಸಲ
ಸಚಿವ ಅರುಣ್ ಜೇಟ್ಲಿ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿರುವ ರಕ್ಷಣಾ ಖಾತೆ ನಿರ್ವಹಣೆ ಹೊಸದೇನಲ್ಲ. 2014, ಮೇ 26ರಿಂದ ನವೆಂಬರ್ 9ರ ತನಕ ಜೇಟ್ಲಿ ಅವರು ರಕ್ಷಣಾ ಖಾತೆ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಸಚಿವರಾಗುವ 11 ಶಾಸಕರು
ಮನೋಹರ್ ಪಾರೀಕರ್ ಜತೆ 11 ಮಂದಿ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಎಂಜಿಪಿ ಪಕ್ಷದ ಸುದೀನ ಧವಳೀಕರ್, ಬಾಬು ಆಜಗಾಂವಕರ್, ಗೋವಾ ಫಾರ್ವರ್ಡ್ನ ವಿಜಯ್ ಸರ್ದೇಸಾಯಿ, ವಿನೋದ್, ಪಕ್ಷೇತರ ಶಾಸಕರಾದ ರೋಹನ್ ಖಂವಟೆ ಮಂತ್ರಿ ಆಗಲಿದ್ದಾರೆ.
ಯಾರೆಲ್ಲ ಭಾಗಿ?
ಪಾರೀಕರ್ ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಸೇರಿದಂತೆ ಬಿಜೆಪಿಯ ವಿವಿಧ ರಾಜ್ಯಗಳ ನಾಯಕರು ಪಾಲ್ಗೊಳ್ಳಲಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಈಗಾಗಲೇ ಸಿದ್ಧತೆ ಆರಂಭವಾಗಿದೆ.
ಜನಾದೇಶವನ್ನು ಗೌರವಿಸದ ಬಿಜೆಪಿ ಚುನಾವಣೆ ಕದಿಯುತ್ತಿದೆ. ಗೋವಾ, ಮಣಿಪುರದಲ್ಲಿ 2ನೇ ಪಕ್ಷವನ್ನಾಗಿ ಜನ ಆದೇಶ ನೀಡಿದ್ದಾರೆ. ಆದರೂ ನಮಗೆ ಸರಕಾರ ರಚಿಸಲು ಬಿಡದಿರುವುದು ವಿಪರ್ಯಾಸ. 2ನೇ ಸ್ಥಾನ ಪಡೆದ ಪಕ್ಷಕ್ಕೆ ಸರಕಾರ ನಡೆಸಲು ಹಕ್ಕಿಲ್ಲ.
ಚಿದಂಬರಂ, ಕೇಂದ್ರದ ಮಾಜಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ