ಜಲ ವಿವಾದ ಪರಿಹಾರಕ್ಕೆ “ಏಕ ನ್ಯಾಯಮಂಡಳಿ’!
Team Udayavani, Mar 15, 2017, 6:17 AM IST
ಹೊಸದಿಲ್ಲಿ: ಕಾವೇರಿ, ಕೃಷ್ಣ, ಮಹಾದಾಯಿ… ಹೀಗೆ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ನೆರೆಯ ರಾಜ್ಯಗಳ ನಡುವಿನ ನಿರಂತರ ಹೋರಾಟಕ್ಕೆ ಒಂದೇ ಸೂರಿನಡಿ ನ್ಯಾಯ ದೊರಕಿಸಿಕೊಡುವ ಪ್ರಯತ್ನಕ್ಕೆ ಕೇಂದ್ರ ಸರಕಾರ ಮುಂದಾಗಿದೆ.
ಕರ್ನಾಟಕ ಸೇರಿ ದೇಶದ ಬಹುತೇಕ ರಾಜ್ಯಗಳು ಎದುರಿಸುತ್ತಿರುವ ಅಂತಾರಾಜ್ಯ ನೀರು ಹಂಚಿಕೆ ವಿವಾದಗಳನ್ನು ಇತ್ಯರ್ಥಗೊಳಿಸಲು ಅಂತಾರಾಜ್ಯ ನದಿ ನೀರು ವ್ಯಾಜ್ಯಗಳ ಕಾಯ್ದೆ 1956 ಎಂಬ ಹೆಸರಿನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದೆ. ಮಸೂದೆ ಮಂಡಿಸಿ ಮಾತನಾಡಿದ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಇದೊಂದು ಕ್ರಾಂತಿಕಾರಿ ಬೆಳವಣಿಗೆಗೆ ಕಾರಣವಾಗಲಿದೆ ಎಂದಿದ್ದಾರೆ. ಅದೇ ವೇಳೆ ವಿಪಕ್ಷಗಳಿಂದ ಆಕ್ಷೇಪವೂ ಕೇಳಿಬಂದಿದ್ದು, ಬಿಜೆಡಿ ನಾಯಕ ಭತೃìಹರಿ ಮೆಹತಾಭ್ “ಇದೊಂದು ಲೋಪಪೂರಿತ ಮಸೂದೆ’. ಸರಕಾರ ಲೋಕಸಭೆಯಲ್ಲಿ ಮಂಡಿಸುವುದಕ್ಕೂ ಮೊದಲು ರಾಜ್ಯಗಳ ಅಭಿಪ್ರಾಯಗಳನ್ನು ಕೇಳಬೇಕಿತ್ತು ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಉಮಾ, “ರಾಜ್ಯಗಳ ನಡುವಿನ ನೀರು ಹಂಚಿಕೆ ವಿವಾದಗಳು ಕ್ಷಿಪ್ರಗತಿಯಲ್ಲಿ ಪರಿಹಾರಗೊಳ್ಳಬೇಕೆನ್ನುವುದು ನಮ್ಮ ಉದ್ದೇಶವಾಗಿದೆ ಅಷ್ಟೆ. ಅದಕ್ಕೆ ಅವರು ಉದಾಹರಣೆಯನ್ನಾಗಿ ನೀಡಿದ್ದು ಕರ್ನಾಟಕ ಮತ್ತು ತಮಿಳುನಾಡು ನಡುವಿನ ದಶಕಗಳಷ್ಟು ಹಳೆಯದಾಗಿರುವ ಕಾವೇರಿ ನೀರಿನ ವ್ಯಾಜ್ಯ.
ಹೇಗೆ ರಚನೆಯಾಗಲಿದೆ ನ್ಯಾಯಮಂಡಳಿ?
ಅಂತಾರಾಜ್ಯ ನೀರು ಹಂಚಿಕೆ ವಿವಾದ ಏಕ ನ್ಯಾಯಮಂಡಳಿಯಲ್ಲಿ ಬೇರೆ ಬೇರೆ ನ್ಯಾಯಪೀಠಗಳ ನ್ಯಾಯಮೂರ್ತಿಗಳನ್ನು ಒಳಗೊಂಡಿರಲಿದೆ. ಮಸೂದೆಯಲ್ಲಿರುವಂತೆ ಈ ನೂತನ ನ್ಯಾಯಮಂಡಳಿಯಲ್ಲಿ ಒಬ್ಬ ಅಧ್ಯಕ್ಷ, ಒಬ್ಬ ಉಪಾಧ್ಯಕ್ಷ ಹಾಗೂ ಆರು ಅಥವಾ ಆರಕ್ಕಿಂತ ಹೆಚ್ಚು ಮಂದಿ ಸದಸ್ಯರು ಇರಲಿದ್ದಾರೆ.
ಕರ್ನಾಟಕ – ತಮಿಳುನಾಡು ನಡುವಿನ ಕಾವೇರಿ ವಿವಾದ ಸೇರಿ ಇಂಥ ಕ್ಲಿಷ್ಟ ಜಲ ವಿವಾದಗಳನ್ನು ಬಗೆಹರಿಸಲು ಹೊಸ ಕಾಯ್ದೆ ಸಹಕಾರಿ ಆಗಲಿದೆ.
ಉಮಾ ಭಾರತಿ, ಕೇಂದ್ರ ಜಲ ಸಂಪನ್ಮೂಲ ಸಚಿವೆ
ಮುಖ್ಯಾಂಶಗಳು
ಯಾವುದೇ ಜಲವಿವಾದ ನಾಲ್ಕೂವರೆ ವರ್ಷಕ್ಕಿಂತ ಜಾಸ್ತಿ ಇತ್ಯರ್ಥಗೊಳ್ಳದೇ ಇರುವಂತಿಲ್ಲ. ಇತ್ಯರ್ಥಕ್ಕೆ ಸಮಯ ನಿಗದಿಗೊಳಿಸುವುದು.
ನ್ಯಾಯಮಂಡಳಿ ನೀಡಿದ ತೀರ್ಪು ಅಂತಿಮವಾಗಿರಲಿದೆ. ಸಂಬಂಧಪಟ್ಟ ರಾಜ್ಯಗಳೂ ಇದಕ್ಕೆ ಬದ್ಧವಾಗಿರಬೇಕು.
ನ್ಯಾಯಮಂಡಳಿಯ ಮುಖ್ಯಸ್ಥರು, ಸದಸ್ಯರು ಐದು ವರ್ಷಕ್ಕಿಂತ ಹೆಚ್ಚು ಕಾಲ ಸೇವೆಯಲ್ಲಿ ಇರುವಂತಿಲ್ಲ. 70 ವರ್ಷ ಮೇಲ್ಪಟ್ಟವರು ಮುಂದುವರಿಯುವಂತಿಲ್ಲ.
ಕೇಂದ್ರ ನೀರು ಸರಬರಾಜು ಇಲಾಖೆಯ ತಜ್ಞ ಎಂಜಿನಿಯರ್ಗಳೂ ನ್ಯಾಯಮಂಡಳಿಯಲ್ಲಿರಬೇಕು.
ವಿವಾದ ಪರಿಹಾರ ಸಮಿತಿ ರಾಜ್ಯಗಳ ಜತೆ ವಿವಾದದ ಕುರಿತು ಮಾತುಕತೆ ನಡೆಸಿದ ಬಳಿಕ ನ್ಯಾಯಮಂಡಳಿಯ ಮುಂದೆ ಕೊಂಡೊಯ್ಯಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ