ಬಿಜೆಪಿಗೆ ಗೋವು ಯುಪಿಯಲ್ಲಿ ‘ಮಮ್ಮಿ’ ಆದ್ರೆ ಈಶಾನ್ಯದಲ್ಲಿ ‘ಯಮ್ಮಿ’!
Team Udayavani, Apr 1, 2017, 3:36 PM IST
ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಿಸುತ್ತಿರುವ ಕ್ರಮದ ವಿರುದ್ಧ ಎಐಎಂಐಎಂ ಸಂಸದ ಅಸಾದುದ್ಧೀನ್ ಓವೈಸಿ ಕಿಡಿ ಕಾರಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಓವೈಸಿ ‘ಬಿಜೆಪಿಗೆ ಗೋವು ಉತ್ತರ ಪ್ರದೇಶದಲ್ಲಿ ಮಮ್ಮಿ ಆದರೆ ಈಶಾನ್ಯರಾಜ್ಯಗಳಲ್ಲಿ ಯಮ್ಮಿ’ ಎಂದು ವ್ಯಂಗ್ಯವಾಡಿದರು.
‘ಬಿಜೆಪಿ ದ್ವಂದ ನೀತಿಗಳನ್ನು ಅನುಸರಿಸಿ ಬೂಟಾಟಿಕೆಯ ರಾಜಕಾರಣ ಮಾಡುತ್ತಿದೆ’ ಎಂದು ಕಿಡಿ ಕಾರಿದರು.
ಚುನಾವಣೆ ನಡೆಯಲಿರುವ ಈಶಾನ್ಯ ರಾಜ್ಯಗಳಾದ ಮೇಘಾಲಯ,ಮಿಜೋರಾಮ್ ಮತ್ತು ನಾಗಾಲ್ಯಾಂಡ್ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಮಾಡುವುದಿಲ್ಲ ಎಂದು ಘೋಷಿಸಿತ್ತು.