ನಿರೀಕ್ಷೆಯಷ್ಟು ಸಿಗದ ದಂಡದ ಮೊತ್ತ
Team Udayavani, Apr 7, 2017, 3:45 AM IST
ನವದೆಹಲಿ: ನೋಟುಗಳ ಅಮಾನ್ಯದ ಬಳಿಕ ಸರ್ಕಾರ ಆರಂಭಿಸಿದ ಆದಾಯ ಘೋಷಣಾ ಯೋಜನೆ(ಐಡಿಎಸ್) ಭಾಗ-2ರಡಿ ಆದಾ ಯವನ್ನು ಘೋಷಿಸಿಕೊಂಡು, ಸರ್ಕಾರಕ್ಕೆ ತೆರಿಗೆ ಮೇಲೆ ದಂಡ ಪಾವತಿಸಿದವರ ಸಂಖ್ಯೆ ನಿರೀಕ್ಷೆಗಿಂತ ಬಹಳ ಕಡಿಮೆಯಿದ್ದು, ಕೇವಲ 2,300 ಕೋಟಿ ರೂ.ಗಳಷ್ಟೇ ಸಂಗ್ರಹವಾಗಿದೆ ಎಂಬ ವಿಚಾರ ಬಹಿರಂಗವಾಗಿದೆ.
ಹಣಕಾಸು ಲೆಕ್ಕವನ್ನು ಸರ್ಕಾರಕ್ಕೆ ನೀಡದವರಿಗೆ, ಅದನ್ನು ಬಹಿರಂಗಪಡಿಸುವ ಅವಕಾಶವನ್ನು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ನೀಡಲಾಗಿತ್ತು. 3 ತಿಂಗಳ ಅವಧಿಯಲ್ಲಿ ತಮ್ಮ ಆದಾಯ ಘೋಷಿಸುವಂತೆ ಸೂಚಿಸಲಾಗಿತ್ತು. ಅದರಂತೆ, ಕೆಲವರು ಆದಾಯವನ್ನು ಘೋಷಿಸಿದ್ದರೂ, ತೆರಿಗೆ ಇಲಾಖೆಯ 1 ಲಕ್ಷ ಕೋಟಿಯ ಗುರಿಗೆ ಹೋಲಿಸಿದರೆ ಸಂಗ್ರಹವಾದ ಮೊತ್ತವು ಅತ್ಯಂತ ಕಡಿಮೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
110 ಕೋಟಿ ಪಾವತಿಸದ ಬ್ಯಾಂಕ್ಗಳು: ಈ ನಡುವೆ ನೋಟು ಅಮಾನ್ಯ ಘೋಷಣೆ ಬಳಿಕ ದೇಶಾದ್ಯಂತದ ಎಟಿಎಂಗಳ ಮರುವಿನ್ಯಾಸಕ್ಕಾಗಿ ಹಗಲಿರುಳೆನ್ನದೆ ದುಡಿದ ಕೈಗಳಿಗೆ ಇನ್ನೂ ಕೂಲಿ ಸಿಕ್ಕಿಲ್ಲ. ಎಟಿಎಂಗಳ ಮರುಅಳವಡಿಕೆಯ ಹೊಣೆ ಹೊತ್ತಿದ್ದ ಕ್ಯಾಷ್ ಲಾಜಿಸ್ಟಿಕ್ಸ್ ಸಂಸ್ಥೆಗಳಿಗೆ ಬ್ಯಾಂಕುಗಳು ಬರೋಬ್ಬರಿ 110 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿವೆ “ಶೇ.90ರಷ್ಟು ಬ್ಯಾಂಕುಗಳು ನಿಮಗೆ ಹಣ ಒದಗಿಸುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೈತೊಳೆದುಕೊಂಡರೆ, ಇನ್ನು ಕೆಲವು ಬ್ಯಾಂಕುಗಳು ನೀವು ಮಾಡಿರುವ ಕೆಲಸವು ದೇಶದ ಹಿತಕ್ಕಾಗಿ ಮಾ ಡಿದ ಸೇವೆ ಎಂದು ಹೇಳಿ ಜವಾಬ್ದಾರಿ ಯಿಂದ ನುಣುಚಿಕೊಂಡಿವೆ. ಪ್ರತಿ ಎಟಿಎಂ ಗಳಿಗೆ 5,615ರೂ.ಗಳಂತೆ ಪಾವತಿಸಬೇಕಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ