“ಹವ್ಯಾಸಿ ರಾಜಕಾರಣಿ ಆಗಿಬಿಟ್ಟೆ’
Team Udayavani, Jul 21, 2017, 5:15 AM IST
ಚೆನ್ನೈ: ಸೂಪರ್ಸ್ಟಾರ್ ರಜನೀಕಾಂತ್ ಹಾದಿಯಲ್ಲೇ ಹೆಜ್ಜೆ ಇಡುತ್ತಿರುವ ನಟ ಕಮಲ್ ಹಾಸನ್ ರಾಜಕೀಯ ಪ್ರವೇಶ ಈಗ ಸಾಕಷ್ಟು ಕುತೂಹಲ ಮೂಡಿಸಿದೆ. ಇದೇ ವೇಳೆ, ಆಡಳಿತಾರೂಢ ಎಐಎ ಡಿಎಂಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಖಾರ ವಾದ ಪ್ರತಿಕ್ರಿಯೆಗಳೂ ಬರತೊಡಗಿವೆ.
ಗುರುವಾರ ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಕಮಲ್, “ಹಿಂದಿ ಹೇರಿಕೆ ವಿಚಾರವಾಗಿ ನಾನು ಎಂದು ಖಡಕ್ ಆಗಿ ಅಭಿಪ್ರಾಯ ವ್ಯಕ್ತಪಡಿಸಿದೆನೋ ಅಂದೇ ನಾನು ಹವ್ಯಾಸಿ ರಾಜಕಾರಣಿ ಆಗಿಬಿಟ್ಟಿದ್ದೇನೆ’ ಎಂದಿದ್ದಾರೆ. ಇದೇ ವೇಳೆ, ತಮ್ಮ ಮೇಲೆ ಕೆಲವರು ತೆರಿಗೆ ತಪ್ಪಿಸಿಕೊಂಡ ಆರೋಪದ ಮೇಲೆ ನಿಮ್ಮ ಮೇಲೆ ಕಠಿನ ಕ್ರಮ ಕೈಗೊಳ್ಳುವುದಾಗಿ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಅವರ ಇಂಥ ನಡವಳಿಕೆಗೆ ಕೋಪ, ನಗು ಎರಡೂ ಬರುತ್ತದೆ’ ಎಂದಿದ್ದಾರೆ.
ಡಿಎಂಕೆ ಆಹ್ವಾನಕ್ಕೆ ಒಪ್ಪಿಗೆ
ಡಿಎಂಕೆ, ಆ.8ರಂದು ನಡೆಯಲಿರುವ ಪಕ್ಷದ ಮುಖವಾಣಿ ಮುರುಸೊಳಿ ವಜ್ರಮಹೋತ್ಸವಕ್ಕೆ ಕಮಲ್ ಹಾಗೂ ರಜನೀಕಾಂತ್ಗೆ ಆಹ್ವಾನ ನೀಡಿದ್ದು, ಕಮಲ್ ಹಾಸನ್ ಆಹ್ವಾನ ಸ್ವೀಕರಿಸಿದ್ದಾರೆ. ಆದರೆ ರಜನೀಕಾಂತ್ ಇದರಲ್ಲಿ ಪಾಲ್ಗೊಳ್ಳುತ್ತಾರೆಯೇ ಎನ್ನುವುದಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಕಮಲ್ ಹಾಗೂ ರಜನಿ ಇಬ್ಬರೂ ರಾಜಕೀಯ ಪ್ರವೇಶದ ಸುಳಿವು ನೀಡುತ್ತಿರುವ ಹಿನ್ನೆಲೆಯಲ್ಲಿ ಡಿಎಂಕೆ ಕಾರ್ಯಕ್ರಮಕ್ಕೆ ಆಹ್ವಾನಿಸಿ ರಾಜಕೀಯವಾಗಿಯೂ ಲಾಭ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿದೆ. ಎಐಎಡಿಎಂಕೆ ಪಕ್ಷದ ಕೆಲವು ಸಚಿವರ ಜತೆ ಕಮಲ್ ಉತ್ತಮ ಬಾಂಧವ್ಯ ಹೊಂದಿಲ್ಲ, ಹೀಗಾಗಿ ಅವರೆಲ್ಲರಿಗೂ ಬಿಸಿ ತಟ್ಟಿಸುವ ಉದ್ದೇಶ ಕಮಲ್ರದ್ದು ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
MUST WATCH
ಹೊಸ ಸೇರ್ಪಡೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು
Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ