Jio..Jio..ಬಂತು ನೋಡಿ FREE ಸ್ಮಾರ್ಟ್ ಫೋನ್ !!!
Team Udayavani, Jul 21, 2017, 12:01 PM IST
ಮುಂಬಯಿ : ಜಿಯೋ ಸಿಮ್ ಮೂಲಕ ಉಚಿತ ಡಾಟಾ ನೀಡುವ ಮೂಲಕ ಕ್ರಾಂತಿ ಎಬ್ಬಿಸಿದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶುಕ್ರವಾರ ಜಿಯೋ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿ ಹಲವು ಭರ್ಜರಿ ಆಫರ್ಗಳನ್ನುಗ್ರಾಹಕರಿಗೆ ನೀಡಿದೆ.ಎಲ್ಲರೂ ಅಚ್ಚರಿಯಾಗುವಂತೆ ಜಿಯೋ ಫೋನ್ ”0” ರೂಪಾಯಿಗೆ ಲಭ್ಯವಾಗಲಿದೆ ಎಂದು ಮುಖೇಶ್ ಅಂಬಾನಿ ಘೋಷಿಸಿದ್ದಾರೆ.
ವಾಯ್ಸ್ ಕಮಾಂಡ್ ಸೌಲಭ್ಯವುಳ್ಳ ಜಿಯೋ ಸ್ಮಾರ್ಟ್ ಫೋನ್ ನಲ್ಲಿ ಹಬ್ಬ ಹರಿದಿನಗಳ ಮಾಹಿತಿ ಸೇರಿದಂತೆ ಹಲವು ವಿಶೇಷ ಸೌಲಭ್ಯಗಳಿರುವ ಫೋನ್ ಅಗಸ್ಟ್ 15 ರಂದು ಮಾರುಕಟ್ಟೆಗೆ ಬರಲಿದೆ. ರಿಲಾಯನ್ಸ್ನ 40 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಫೋನ್ ಬಿಡುಗಡೆ ಮಾಡಲಾಯಿತು.
ಫೋನ್ ಫ್ರೀಯಾಗಿ ಸಿಗುತ್ತದೆಯಾದರೂ 1500 ರೂಪಾಯಿ ಡೆಪಾಸಿಟ್ ನೀಡಬೇಕಾಗಿದ್ದು , ಈ ಹಣ 3 ವರ್ಷಗಳ ಬಳಿಕ ವಾಪಾಸ್ ಕೈಗೆ ಸಿಗಲಿದೆ.
ಮೈ ಜಿಯೋ ಆ್ಯಪ್ ಮೂಲಕ ಫೋನ್ಗಳನ್ನು ಅಗಸ್ಟ್ 24ರಿಂದ ಅನ್ಲೈನ್ ಮೂಲಕ ಬುಕಿಂಗ್ ಮಾಡಬಹುದಾಗಿದ್ದು, ಸಪ್ಟಂಬರ್ನಲ್ಲಿ ಎಲ್ಲರಿಗೂ ಪೋನ್ ಲಭ್ಯವಾಗಲಿದೆ.
ಬೆಸ್ಟ್ ಟುಡೇ, ಬೆಟರ್ ಟುಮಾರೋ, ಜಿಯೋ ಟುಗೆದರ್ ಎಂಬ ಘೋಷವಾಕ್ಯದೊಂದಿಗೆ ವಾರಕ್ಕೆ 5 ಮಿಲಿಯ ಜಿಯೋ ಸ್ಮಾರ್ಟ್ ಫೋನ್ಗಳನ್ನು ಗ್ರಾಹಕರಿಗೆ ನೀಡುವ ಗುರಿ ನಮ್ಮದು ಎಂದು ಅಂಬಾನಿ ಹೇಳಿದರು.
ಜಿಯೋ ಧನ್ ಧನಾ ಪ್ಲಾನ್ ನಲ್ಲಿ ತಿಂಗಳಿಗೆ ಕೇವಲ 153 ರೂಪಾಯಿಗೆ ಅನ್ಲಿಮಿಟೆಡ್ ಡಾಟಾ. ಇದು ಜಿಯೋ ಸ್ಮಾರ್ಟ್ ಫೋನ್ನಲ್ಲಿ ಮಾತ್ರ ಲಭ್ಯ .ವಾಯ್ಸ್ ಕಾಲ್ ಈಗಿನಂತೆ ಉಚಿತವಾಗಿರಲಿದೆ.ಈ ಪ್ಯಾಕ್ ಹೊರತು ಪಡಿಸಿ 2 ದಿನಕ್ಕೆ 24 ರೂಪಾಯಿ ,ವಾರಕ್ಕೆ 54ರೂಪಾಯಿಗೆ ಅನ್ಲಿಮಿಟೆಟ್ ಡಾಟಾ ಲಭ್ಯವಾಗಲಿದೆ.
ಕೇವಲ ಜಿಯೋ ಫೋನ್ ಮೂಲಕ ಕೇಬಲ್ ಟಿವಿ ಸಂಪರ್ಕ ಒದಗಿಸಲಾಗುತ್ತಿದ್ದು, ಮಾಸಿಕ 309 ರೂಪಾಯಿ ಮಾತ್ರ .
ಪರಿಚಿತ ವಿನ್ಯಾಸಹೊಂದಿರುವ ಸ್ಮಾರ್ಟ್ ಫೋನ್ ಯಾರು ಕೂಡಾ ಬಳಕೆ ಮಾಡಬಹುದು ಎಂದು ಬಿಡುಗಡೆ ಮಾಡಿದ ಜಿಯೋ ಡೈರೆಕ್ಟರ್ಗಳಾದ ಆಕಾಶ್ ಮತ್ತು ಇಶಾ ಅಂಬಾನಿ ಹೇಳಿದರು.
ಫೋನ್ VoLTE (4G) ತಂತ್ರಜ್ಞಾನ ಹೊಂದಿದ್ದು, ಈ ತಂತ್ರಜ್ಞಾನ ಸಾಮಾನ್ಯ ಫೋನ್ಗಳಲ್ಲಿ ಲಭ್ಯವಿರುವುದಿಲ್ಲ. ಫೋನ್ನಲ್ಲಿ ಜಿಯೋ ಸಿನಿಮಾ, ಜಿಯೋ ಟಿವಿ ಮತ್ತು ಜಿಯೋ ಮ್ಯೂಸಿಕ್ನಂತಹ ಆ್ಯಪ್ಗಳು ಇವೆ.
125 ಮಿಲಿಯ ಗ್ರಾಹಕರೊಂದಿಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಂಪೆನಿ ಎಂಬ ಹೆಗ್ಗಳಿಕೆಗೆ ಜಿಯೋ ಪಾತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
MUST WATCH
ಹೊಸ ಸೇರ್ಪಡೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ