ಗಣೇಶೋತ್ಸವ:ತೇಜಸ್ ಎಕ್ಸ್ಪ್ರೆಸ್ ರೈಲಿನಲ್ಲಿ ಲಭಿಸಲಿದೆ ಮೋದಕ!
Team Udayavani, Aug 13, 2017, 2:02 PM IST
ಮುಂಬಯಿ: ಈ ಬಾರಿಯ ಗಣೇಶೋತ್ಸವದ ಸಂದರ್ಭದಲ್ಲಿ ಮುಂಬಯಿ-ಗೋವಾ ನಡುವಣ ಸಂಚರಿಸುವ ತೇಜಸ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ಯಾನಿಗಳಿಗೆ ಗಣಪನ ಅಚ್ಚುಮೆಚ್ಚಿನ ತಿನಿಸಾಗಿರುವ “ಮೋದಕ’ ಲಭಿಸಲಿದೆ. ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಸಾರಿಗೆ ನಿಗಮ (ಐಆರ್ಸಿಟಿಸಿ) ಈ ನಿರ್ಧಾರವನ್ನು ಕೈಗೊಂಡಿದ್ದು ಗಣೇಶೋತ್ಸವ ನಡೆಯಲಿರುವ 10ದಿನಗಳ ಅವಧಿಯಲ್ಲಿ ತೇಜಸ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುವ ಯಾನಿಗಳ ಬಾಯಿಯನ್ನು ಮೋದಕದಿಂದ ಸಿಹಿ ಮಾಡಲು ಮುಂದಾಗಿದೆ.
ಈ ವರ್ಷದ ಮೇ 21ರಂದು ರೈಲ್ವೇ ಸಚಿವ ಸುರೇಶ್ ಪ್ರಭು ಅವರಿಂದ ಚಾಲನೆ ನೀಡಲ್ಪಟ್ಟ ತೇಜಸ್ ಎಕ್ಸ್ಪ್ರೆಸ್ ರೈಲಿನಲ್ಲಿನ ಅತ್ಯಾಧುನಿಕ ವ್ಯವಸ್ಥೆಗಳು ಮತ್ತು ಸೌಲಭ್ಯಗಳಿಂದಾಗಿ ಬಲುಬೇಗ ಜನಪ್ರಿಯಗೊಂಡಿದೆ. ಗಣೇಶೋತ್ಸವದ ಅವಧಿಯಲ್ಲಿ ಯಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇರುವುದರಿಂದ ಐಆರ್ಸಿಟಿಸಿ ಯಾನಿಗಳಿಗೆ ಮೋದಕವನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಿದ್ದು ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಯಾನಿಗಳನ್ನು ತನ್ನತ್ತ ಸೆಳೆಯಲು ಯೋಜನೆ ರೂಪಿಸಿದೆ.
ಮುಂಬಯಿ-ದಿಲ್ಲಿ ನಡುವೆ ಸಂಚರಿಸುವ ರಾಜಧಾನಿ ಎಕ್ಸ್ಪ್ರೆಸ್ ರೈಲಿನ ಯಾನಿಗಳಿಗೆ ಕಳೆದ ವರ್ಷ ಐಆರ್ಸಿಟಿಸಿ ಮೋದಕವನ್ನು ಪೂರೈಕೆ ಮಾಡಿತ್ತು. ಅಲ್ಲದೆ ವಿವಿಧ ಹಬ್ಬಗಳ ಸಂದರ್ಭಗಳಲ್ಲಿ ಪೇಡಾ, ಜಿಲೇಬಿ..ಮತ್ತಿತರ ಸಿಹಿತಿನಿ ಸುಗಳನ್ನು ಯಾನಿಗಳಿಗೆ ಒದಗಿಸುತ್ತಾ ಬಂದಿದೆ. ಐಆರ್ಸಿಟಿಸಿಯ ಈ ಕ್ರಮ ಪ್ರಶಂಸೆಗೆ ಪಾತ್ರವಾಗಿದೆ ಎಂದು ಐಆರ್ಸಿಟಿಸಿಯ ವಕ್ತಾರರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!