ಜಿಮ್ನಲ್ಲಿ ಲೈಂಗಿಕ ಕಿರುಕುಳ: ದೂರಿದ ಮಹಿಳೆಗೆ ಹಲ್ಲೆ, Watch
Team Udayavani, Aug 19, 2017, 5:03 PM IST
ಹೊಸದಿಲ್ಲಿ : ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ಇನ್ನೊಂದು ಆಘಾತಕಾರಿ ಪ್ರಕರಣ ಮಧ್ಯಪ್ರದೇಶದ ಇಂದೋರ್ನಿಂದ ವರದಿಯಾಗಿದೆ.
ಮಧ್ಯಪ್ರದೇಶದ ಇಂದೋರ್ನ ಜಿಮ್ ಒಂದರಲ್ಲಿ ವ್ಯಕ್ತಿಯೊಬ್ಬನ ನಡತೆಯ ಬಗ್ಗೆ ಮಹಿಳೆಯೊಬ್ಬಳು ಜಿಮ್ ಟ್ರೈನ್ರ್ಗೆ ದೂರಿದ್ದಳು. ಈ ಕಾರಣಕ್ಕೆ ಸಿಟ್ಟಿಗೆದ್ದ ಆ ವ್ಯಕ್ತಿಯು ಮಹಿಳೆಯನ್ನು ಕಾಲಿನಿಂದ ಒದ್ದು ಆಕೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆಯ ವಿಡಿಯೋ ಚಿತ್ರಿಕೆಯೊಂದು ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಪುನೀತ್ ಮಾಳವೀಯ ಎಂಬ ಆರೋಪಿಯು ಮಹಿಳೆಗೆ ಸಿಟ್ಟಿನ ಭರದಲ್ಲಿ ಕಾಲಿನಿಂದ ಒದೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಕಾಲಿನಿಂದ ಮಹಿಳೆಯನ್ನು ಒದ್ದ ಬಳಿಕವೂ ಆತ ಆಕೆಯನ್ನು ನಿಷ್ಕರುಣೆಯಿಂದ ಗುದ್ದಿದ್ದಾನೆ. ಆತನ ಹೊಡೆತ ತಾಳಿಕೊಳ್ಳಲಾರದೆ ಮಹಿಳೆಯು ಕುಸಿದು ಮಂಡಿಯೂರಿ ಕುಳಿತಿದ್ದಾಳೆ. ಆಗ ಆಸುಪಾಸಿನಲ್ಲಿ ಇದ್ದವರು ಒಡನೆಯೇ ಮಹಿಳೆಯ ನೆರವಿಗೆ ಬಂದು ಆರೋಪಿಯನ್ನು ತಡೆಯಲು ಯತ್ನಿಸಿದರೂ ಆತ ಆಕೆಗೆ ಒದೆ ನೀಡುವುದನ್ನು ನಿಲ್ಲಿಸಲಿಲ್ಲ.
ಇಂದೋರ್ ನ ಪ್ಯಾಲೇಸ್ ಕಾಲನಿಯ ನಿವಾಸಿಯಾಗಿರುವ ಮಹಿಳೆಯು ಶಾಲೆಯೊಂದರ ಉದ್ಯೋಗಿಯಾಗಿದ್ದು ಆರೋಪಿ ಮಾಳವೀಯ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಗ್ಗೆ ಜಿಮ್ ತರಬೇತಿದಾರನಲ್ಲಿ ದೂರಿದ್ದಳು.
ದೂರಿನ ಪ್ರಕಾರ ಪೊಲೀಸರು ಆರೋಪಿ ಮಾಳವೀಯ ವಿರುದ್ಧ ಲೈಂಗಿಕ ಕಿರುಕುಳ ಮತ್ತು ದೈಹಿಕ ಹಿಂಸೆಯ ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
#WATCH Man punches & kicks a woman at a gym in #Indore after she complained about his behavior during workout #MadhyaPradesh pic.twitter.com/eFQWUrMlbz
— ANI (@ANI) August 19, 2017
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
MUST WATCH
ಹೊಸ ಸೇರ್ಪಡೆ
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ