ನೋಟು ಅಪಮೌಲ್ಯ ಪರಿಣಾಮ: ಮೊದಲೇ ಎಚ್ಚರಿಕೆ ನೀಡಿದ್ದೆ


Team Udayavani, Sep 4, 2017, 6:30 AM IST

note.jpg

ಹೊಸದಿಲ್ಲಿ: ನೋಟು ಅಪಮೌಲ್ಯದ ಕ್ರಮದಿಂದ ದೀರ್ಘ‌ಕಾಲದ ಪ್ರಯೋಜನಗಳಿದ್ದರೂ, ತತ್‌ಕ್ಷಣದಲ್ಲೇ ಎದುರಾಗಬಹುದಾದ ಸಂಕಷ್ಟ ಗಳ ಕುರಿತು ಕೇಂದ್ರ ಸರಕಾರವನ್ನು ಎಚ್ಚರಿಸಿದ್ದೆ. ಅಲ್ಲದೆ ಕಪ್ಪು ಹಣವನ್ನು ಹೊರ ತರುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ “ಅನ್ಯ ಕ್ರಮ’ಗಳ ಕುರಿತೂ ಸಲಹೆ ನೀಡಿದ್ದೆ’ 

ಎಂದು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದ (ಆರ್‌ಬಿಐ) ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಹೇಳಿದ್ದಾರೆ. ಇದರ ಜತೆಗೆ 2ನೇ ಅವಧಿಗೆ ಹುದ್ದೆಯಲ್ಲಿ ಮುಂದುವರಿಸುವ ಬಗ್ಗೆ ಕೇಂದ್ರ ಸರಕಾರವೇ ಇರಾದೆ ಹೊಂದಿರಲಿಲ್ಲ. ಜತೆಗೆ ತನ್ನ ಬಳಿ ಆ ಬಗ್ಗೆ ಪ್ರಸ್ತಾವವನ್ನೂ ಮಾಡಿಯೇ ಇರಲಿಲ್ಲ ಎಂಬ ಮಾಹಿತಿ ನೀಡಿದ್ದಾರೆ.

ಆರ್‌ಬಿಐ ಗವರ್ನರ್‌ ಹುದ್ದೆಯಿಂದ ಕೆಳಗಿಳಿದು ಸರಿಯಾಗಿ ಒಂದು ವರ್ಷದ ಅನಂತರ ರಘುರಾಮ್‌ ರಾಜನ್‌ ಮೌನ ಮುರಿದಿದ್ದಾರೆ. ಬರುವ ವಾರ ಬಿಡುಗಡೆ ಗೊಳ್ಳಲಿರುವ ತಮ್ಮ “ಐ ಡು ವಾಟ್‌ ಐ ಡು: ನೋ ರಿಫಾಮ್ಸ್‌ì ರೆಟೋರಿಕ್‌ ಆ್ಯಂಡ್‌ ರಿಸಾಲ್‌Ì’ ಪುಸ್ತಕದಲ್ಲಿ ನೋಟು ಅಪಮೌಲ್ಯ ಹಾಗೂ ದೇಶದ ಆರ್ಥಿಕ ಸ್ಥಿತಿ ಕುರಿತು ಅವರು ಪ್ರಸ್ತಾವಿಸಿದ್ದಾರೆ. ನೋಟು ಅಪಮೌಲ್ಯದ ಬಳಿಕ ಎದುರಾಗುವ ಸಮಸ್ಯೆಗಳ ಕುರಿತು 2016ರ ಫೆಬ್ರವರಿಯಲ್ಲೇ ಕೇಂದ್ರಕ್ಕೆ ಮೌಖೀಕವಾಗಿ ಎಚ್ಚರಿಕೆ ನೀಡಿದ್ದೆ ಎಂದು  “ಟೈಮ್ಸ್‌ ಆಫ್ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಸಂದರ್ಶನದ ಕೆಲವು ಅಂಶಗಳು ಇಲ್ಲಿವೆ.

ಒಳಿತು-ಕೆಡುಕು ಎರಡೂ ಇದೆ: “ನೋಟು ಅಪಮೌಲ್ಯ ದಿಂದ ಬರೀ ಸಂಕಷ್ಟಗಳೇ ಎದುರಾಗುತ್ತವೆ ಎಂಬುದು ಸರಿಯಲ್ಲ. ಅದರಿಂದ ಸಾಕಷ್ಟು ಅನುಕೂಲಗಳಿವೆ. ಆದರೆ ಅದಾವುದೂ ಸದ್ಯದ ಜನಜೀವನ ಅಥವಾ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರಬಲ್ಲ ಅನುಕೂಲಗಳಲ್ಲ. ನೋಟು ಅಪಮೌಲ್ಯ ಒಂದೇ ಅಲ್ಲ, ಯಾವುದೇ ನೀತಿ, ಕ್ರಮದ ವಿಷಯದಲ್ಲೂ ಒಳಿತು-ಕೆಡುಕುಗಳಿರುವುದು ಸಹಜ. ಬರೀ ಒಳ್ಳೆಯದನ್ನೇ ಮಾಡುವ ನಿಯಮ ರೂಪಿಸುವುದು ಅಸಾಧ್ಯ’.

ನಷ್ಟ ಎಂದರೆ ಹಣವಷ್ಟೇ ಅಲ್ಲ: “ಕಪ್ಪು ಹಣ ಹೊರತರಲು ಕೇಂದ್ರ ಸರಕಾರ ನೋಟು ಅಮಾನ್ಯ ಕ್ರಮ ಕೈಗೊಂಡಿದ್ದು ಒಳ್ಳೆಯ ಬೆಳವಣಿಗೆಯೇ. ಆದರೆ ಈ ಕ್ರಮಕ್ಕೂ ಮೊದಲು ಒಂದಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದರೆ ಒಳಿತಿತ್ತು. ಈ ನಿರ್ಧಾರದಿಂದ ಮೊದಲು ಪೆಟ್ಟು ಬಿದ್ದಿದ್ದು ಜಿಡಿಪಿ ಮೇಲೆ. ಮೇಲ್ನೋಟಕ್ಕೆ ಕುಸಿದಿರುವುದು ಒಂದೆರಡು ಅಂಶಗಳಷ್ಟೇ ಅನಿಸಿದರೂ ಒಟ್ಟಾರೆ ನಷ್ಟ ಗಮನಿಸಿದಾಗ ಅದು 2.5 ಲಕ್ಷ ಕೋಟಿ ರೂ.ಗಳನ್ನೂ ಮೀರುತ್ತದೆ! ನಷ್ಟ ಎಂದರೆ ಬರೀ ಹಣವೇ ಅಲ್ಲ. ನೋಟು ಅಮಾನ್ಯದ ಅನಂತರ ಜನ ಸಾಲುಗಳಲ್ಲಿ ನಿಂತು ಕಾಯುವಂತಾಯಿತು. ಇದರಿಂದ ಕೋಟ್ಯಂತರ ಮಂದಿಯ ಅಮೂಲ್ಯ ಸಮಯ ನಷ್ಟವಾಗಿದೆ. ಹೊಸ ನೋಟುಗಳನ್ನು ಮುದ್ರಿಸಲು ಆರ್‌ಬಿಐ 8 ಸಾವಿರ ಕೋಟಿ ರೂ. ವ್ಯಯಿಸಿದ್ದನ್ನೂ ನಷ್ಟ ಎಂದೇ ಪರಿಗಣಿಸಬೇಕು. ಇದರೊಂದಿಗೆ ಹಳೇ ನೋಟುಗಳನ್ನು ಖಾತೆಗೆ ಜಮಾ ಮಾಡಿಕೊಳ್ಳಲು ಬ್ಯಾಂಕ್‌ಗಳು ಹೆಚ್ಚುವರಿ ಸಿಬಂದಿಯನ್ನು ನಿಯೋಜಿಸಿದ್ದವು. ಬ್ಯಾಂಕ್‌ ಸಿಬಂದಿ, ಮ್ಯಾನೇಜರ್‌ಗಳು ಹೆಚ್ಚುವರಿ ಅವಧಿಗೆ ಕೆಲಸ ಮಾಡಿದ್ದರು. ಇವೆಲ್ಲವೂ ನಷ್ಟವೇ,’.

ಇ-ವ್ಯವಹಾರ ವೃದ್ಧಿ:  “ಅಮಾನ್ಯದ ಅನಂತರ ಶೇ. 99ರಷ್ಟು ಹಳೇ ನೋಟು ಗಳು ವಾಪಸ್‌ ಬಂದಿವೆ ಎಂದು ಆರ್‌ಬಿಐ ಹೇಳಿದೆ. ಹೀಗಾಗಿ ಇದೊಂದು ಯಶಸ್ವಿ ಕ್ರಮವಲ್ಲ. ಆದರೆ ದೇಶದಲ್ಲಿ ಬ್ಯಾಂಕ್‌ ಮುಖವನ್ನೇ ನೋಡದ ಕೋಟ್ಯಂತರ ಮಂದಿ ಬ್ಯಾಂಕ್‌ಗಳಿಗೆ ಹೋಗುವಂತೆ ಮಾಡಿದ್ದು, ಕೋಟಿ ಕೋಟಿ ಹೊಸ ಖಾತೆಗಳು ಸೃಷ್ಟಿಯಾಗಿದ್ದು ಒಂದು ಯಶಸ್ಸು. ಮುಖ್ಯವಾಗಿ ದೇಶಾದ್ಯಂತ ಇ-ವ್ಯವಹಾರದ ಟ್ರೆಂಡ್‌ ಶುರುವಾಗಿದೆ. ದೇಶದ ಆರ್ಥಿಕ ಪ್ರಗತಿ ದೃಷ್ಟಿಯಿಂದ ನೋಡಿದಾಗ ಇದೊಂದು ಆಶಾದಾಯಕ ಬೆಳವಣಿಗೆ ಎನ್ನಬಹುದು’.

“ಕೇಂದ್ರದ ನೋಟು ಅಮಾನ್ಯ ನಿರ್ಧಾರದ ಹಿಂದಿನ ಉದ್ದೇಶ ಒಳ್ಳೆಯದೇ ಇರಬಹುದು. ಆದರೆ ಈ ಕ್ಷಣದಲ್ಲಿ ಆ ಕ್ರಮವನ್ನು ಒಂದು ಆರ್ಥಿಕ ಯಶಸ್ಸು ಎಂದು ಹೇಳಲು ಸಾಧ್ಯವೇ ಇಲ್ಲ. ಹಾಗಂತ ಎಲ್ಲವೂ ಇಲ್ಲಿಗೇ ಮುಗಿದಿಲ್ಲ. ಮುಂದೆ ಕಾಲ ಎಲ್ಲಕ್ಕೂ ಉತ್ತರ ನೀಡಲಿದೆ’ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.