ಬಿಎಸ್ಎಫ್ ಯೋಧನ ಮೇಲೆ ಗೋ ಕಳ್ಳಸಾಗಣೆಗಾರರಿಂದ ಹಲ್ಲೆ
Team Udayavani, Oct 16, 2017, 3:53 PM IST
ಅಗರ್ತಲಾ : ಬಿಎಸ್ಎಫ್ ಕಮಾಂಡೆಂಟ್ ದೀಪಕ್ ಮಂಡಲ್ ಅವರ ಮೇಲೆ ತ್ರಿಪುರದಲ್ಲಿ ಅಪರಿಚಿತ ದುಷ್ಕರ್ಮಿಗಳು ದಾಳಿ ಮಾಡಿದ್ದು ಗಂಭೀರವಾಗಿ ಗಾಯಗೊಂಡಿರುವ ಮಂಡಲ್ ಅವರನ್ನು ವಿಮಾನ ಮೂಲಕ ಕೋಲ್ಕತಕ್ಕೆ ತರಲಾಗಿದೆ.
ಮಂಡಲ್ ಅವರು 145ನೇ ಬಿಎಸ್ಎಫ್ ಬೆಟಾಲಿಯನ್ಗೆ ಸೇರಿದವರು.
ಲಾಠಿ, ಇಟ್ಟಿಗೆಗಳನ್ನು ಹೊಂದಿದ್ದ ಗೋ ಕಳ್ಳಸಾಗಣೆಗಾರರನ್ನು ಮಂಡಲ್ ಅವರು ತಡೆದಾಗ ಅವರ ಮೇಲೆ ದಾಳಿ ನಡೆಸಲಾಯಿತು ಎಂದು ಬಿಎಸ್ಎಫ್ ಮೂಲಗಳು ತಿಳಿಸಿವೆ.
ಮಂಡಲ್ ಅವರು ಎಂದಿನಂತೆ ತ್ರಿಪುರ ಗಡಿಯಲ್ಲಿನ ಪಿ ಎಸ್ ಸೋನಮುರಾ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗೋ ಕಳ್ಳಸಾಗಾಟಗಾರರನ್ನು ಕಂಡು ಅವರನ್ನು ತಡೆದಿದ್ದರು ಎಂದು ಬಿಎಸ್ಎಫ್ ಮೂಲಗಳು ತಿಳಿಸಿವೆ.