ಹೆಣ್ಣು ಪಿಶಾಚಿಗೆ ಹೆದರಿ ಹಳ್ಳಿ ತೊರೆದ ಗಂಡಸರು!
Team Udayavani, Oct 17, 2017, 7:05 AM IST
ಹೈದರಾಬಾದ್: ದೆವ್ವ, ಭೂತಗಳಿಗೆ ಹೆದರಿ ದೇವರು, ಮಾಟ, ಮಂತ್ರಗಳ ಮೊರೆ ಹೋಗುವುದನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ಇಲ್ಲೊಂದು ಹಳ್ಳಿಯಲ್ಲಿ ದೆವ್ವವಿದೆ ಎಂಬುದನ್ನು ನಂಬಿರುವ ಅಲ್ಲಿನ ಗಂಡಸರೆಲ್ಲಾ ಹಳ್ಳಿಬಿಟ್ಟು ಪರಾರಿಯಾಗಿದ್ದಾರೆ!
ಅಚ್ಚರಿಯಾದರೂ ಇದು ಸತ್ಯ. ಹೀಗಾಗಿರುವುದು ತೆಲಂಗಾಣದ ನಿರ್ಮಲ ಜಿಲ್ಲೆಯ ಕಾಸಿಗುಡದಲ್ಲಿ. ಈ ಹಳ್ಳಿಯಲ್ಲಿ ಹೆಣ್ಣು ಪಿಶಾಚಿಯೊಂದು ನೆಲೆಯೂರಿದೆ ಎಂಬ ವದಂತಿ ಹರಡಿದ್ದು, ಈ ಪಿಶಾಚಿಯು ಪುರುಷ ದ್ವೇಷಿಯಾಗಿದ್ದು ಪುರುಷರನ್ನು ಒಬ್ಬೊಬ್ಬರಾಗಿ ಕೊಲ್ಲುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ, ಇತ್ತೀಚೆಗೆ, ಆ ಹಳ್ಳಿಯ ಇಬ್ಬರು ಸಹೋದರರು ಹಾಗೂ ಮತ್ತೂಬ್ಬ ವ್ಯಕ್ತಿ ಪ್ರತ್ಯೇಕ ಘಟನೆಗಳಲ್ಲಿ ನಿಗೂಢವಾಗಿ ಹತರಾಗಿರುವುದು ಈ ಪಿಶಾಚಿ ವದಂತಿಗಳಿಗೆ ಜೀವ ತುಂಬಿದೆ.
ಇದರಿಂದ ಭೀತಿಗೊಂಡು ದಿಕ್ಕೆಟ್ಟಿರುವ ಆ ಹಳ್ಳಿಯ ಗಂಡಸರು ದಿಕ್ಕಾಪಾಲಾಗಿ ಆ ಹಳ್ಳಿಯಿಂದ ಕಾಲ್ಕಿತ್ತಿದ್ದಾರೆ. ಆ ಪಿಶಾಚಿಯ ನಿರ್ಮೂಲನೆಯಾಗುವವರೆಗೂ ಹಳ್ಳಿಗೆ ಬರದಿರಲು ನಿರ್ಧರಿಸಿದ್ದಾರಂತೆ. ಒಟ್ಟಿನಲ್ಲಿ, ಈಗ ಆ ಹಳ್ಳಿಯಲ್ಲಿ ಹೆಂಗಸರೇ ಜೀವಿಸುತ್ತಿದ್ದಾರೆಂದು ಹೇಳಲಾಗಿದೆ. ಪಿಶಾಚಿಗಳು ಹೆಂಗಸರಿಗೆ ಏನೂ ಮಾಡುತ್ತಿಲ್ಲ ಎನ್ನುತ್ತಾರೆ ಅಲ್ಲಿನ ಮಹಿಳೆಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…
MUST WATCH
ಹೊಸ ಸೇರ್ಪಡೆ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ