ರಾಷ್ಟ್ರಪತಿ ಭವನ, ಸಂಸತ್ ಭವನವನ್ನೂ ಧ್ವಂಸ ಮಾಡಿ: ಆಜಂ ಖಾನ್
Team Udayavani, Oct 17, 2017, 12:08 PM IST
ಹೊಸದಿಲ್ಲಿ : ”ಆಗ್ರಾದಲ್ಲಿ ತಾಜಮಹಲ್ ಭಾರತೀಯ ಸಂಸ್ಕೃತಿಯಲ್ಲಿನ ಕಪ್ಪು ಚುಕ್ಕೆ ಎಂದು ಹೇಳಬಹುದಾದರೆ ರಾಷ್ಟ್ರಪತಿ ಭವನ ಮತ್ತು ಸಂಸತ್ ಭವನ ಗುಲಾಮಗಿರಿಯ ಸಂಕೇತ ಎಂದು ಹೇಳಬಹುದು. ಆದುದರಿಂದ ತಾಜಮಹಲ್ ಕಟ್ಟಡವನ್ನು ನೀವು ಧ್ವಂಸ ಮಾಡುವಿರಾದರೆ ರಾಷ್ಟಪತಿ ಭವನ, ಸಂಸತ್ ಭವನವನ್ನೂ ಧ್ವಂಸ ಮಾಡಿ” ಎಂದು ವಿವಾದಾತ್ಮಕ ಹೇಳಿಕೆಗಳಿಗೆ ಖ್ಯಾತರಾಗಿರುವ ಆಜಂ ಖಾನ್ ಸವಾಲು ಹಾಕಿದ್ದಾರೆ.
ಬಿಜೆಪಿಯ ಶಾಸಕ ಸಂಗೀತ್ ಸೋಮ್ ಅವರು “ತಾಜಮಹಲ್ ಕಟ್ಟಡ ದ್ರೋಹಿಗಳ ನಿರ್ಮಾಣ. ಅಂತೆಯೇ ಅದು ಭಾರತೀಯ ಇತಿಹಾಸದಲ್ಲಿ, ಸಂಸ್ಕೃತಿಯಲ್ಲಿನ ಕಪ್ಪು ಚುಕ್ಕೆಯಾಗಿದೆ” ಎಂದು ವಿವಾದ್ಮಾಕ ಹೇಳಿಕೆ ನೀಡಿದ್ದರು.
ಇದಕ್ಕೆ ಉತ್ತರವೆಂಬಂತೆ ಆಜಂ ಖಾನ್ ಅವರು, “ಭಾರತದಲ್ಲಿ ಬ್ರಿಟಿಷರು ನಿರ್ಮಿಸಿದ ಕಟ್ಟಡಗಳು ಮತ್ತು ಸ್ಮಾರಕಗಳು ಭಾರತೀಯರ ಗುಲಾಮಗಿರಿಯ ಸಂಕೇತಗಳಾಗಿರುವುದರಿಂದ ಅವುಗಳನ್ನು ಧ್ವಂಸ ಮಾಡಬೇಕು; ಭಾರತೀಯ ಸಂಸ್ಕೃತಿಯಲ್ಲಿನ ಕಪ್ಪು ಚುಕ್ಕೆ ಎಂಬ ಕಾರಣಕ್ಕೆ ತಾಜಮಹಲ್ ಕಟ್ಟಡವನ್ನು ಧ್ವಂಸ ಮಾಡುವುದೇ ಆದರೆ ಬ್ರಿಟಿಷ್ ಗುಲಾಮಗಿರಿಯ ಸಂಕೇತಗಳಾಗಿರುವ ರಾಷ್ಟ್ರಪತಿ ಭವನ, ಸಂಸತ್ ಭವನವನ್ನು ಕೂಡ ಧ್ವಂಸ ಮಾಡಬಹುದಾಗಿದೆ’ ಎಂದು ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
MUST WATCH
ಹೊಸ ಸೇರ್ಪಡೆ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ