ಮಲ್ಯಗೆ ನಮ್ಮ ಜೈಲೇ ಸಾಕು
Team Udayavani, Oct 18, 2017, 6:50 AM IST
ಮುಂಬಯಿ/ಹೊಸದಿಲ್ಲಿ: ಉದ್ಯಮಿ ವಿಜಯ ಮಲ್ಯಗೆ ಭಾರತದಲ್ಲಿ ಶಿಕ್ಷೆಯಾದರೆ ಮುಂಬಯಿಯ ಅರ್ಥರ್ ರಸ್ತೆಯಲ್ಲಿರುವ ಕಾರಾಗೃಹದ ವಿಶೇಷ ಸೆಲ್ ಅನ್ನೇ ನೀಡುವುದು ಎಂದು ಈಗಾಗಲೇ ಘೋಷಣೆಯಾಗಿದೆ. ಆದರೆ, ಭಾರತದ ಜೈಲು ಕೊಠಡಿಗಳ ಬಗ್ಗೆ ಮಲ್ಯ ಪರ ವಕೀಲರು ಆಕ್ಷೇಪವೆತ್ತಿರುವುದಕ್ಕೆ ತಿರುಗೇಟು ನೀಡಿರುವ ಮಹಾರಾಷ್ಟ್ರ ಸರಕಾರ, ಜೈಲು ಕೊಠಡಿಯ ಫೋಟೋವನ್ನು ಕಳುಹಿಸಿ, “ಈ ಸೆಲ್ ಐರೋಪ್ಯ ಒಕ್ಕೂಟದ ಜೈಲುಗಳಿಗೆ ಸಮನಾಗಿರುವ ವ್ಯವಸ್ಥೆ ಹೊಂದಿದೆ’ ಎಂದು ಹೇಳಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಸರಕಾರ ಈ ಕುರಿತು ಕೇಂದ್ರ ಸರಕಾರಕ್ಕೆ ದಾಖಲೆ ಸಹಿತ ವರದಿ ಸಲ್ಲಿಕೆ ಮಾಡಿದೆ.
ಜಾರಿ ನಿರ್ದೇಶನಾಲಯ ಸಲ್ಲಿಕೆ ಮಾಡಿದ ಗಡೀಪಾರು ಬೇಡಿಕೆಯ ಅರ್ಜಿ ವಿಚಾರಣೆ ಶೀಘ್ರದಲ್ಲಿಯೇ ಲಂಡನ್ನ ಕೋರ್ಟಲ್ಲಿ ಆರಂಭವಾಗಲಿದೆ. ಮಲ್ಯ ಪರ ವಕೀಲರು, “ಭಾರತದ ಜೈಲು ತಮ್ಮ ಕಕ್ಷಿದಾರನ ಭದ್ರತೆಗೆ ಪೂರಕವಾಗಿಲ್ಲ. ಶೌಚಾಲಯಗಳು ಶುಚಿ ಯಾಗಿಲ್ಲ. ಜತೆಗೆ ಅವರು ಮಧುಮೇಹದಿಂದ ಬಳಲುತ್ತಿರುವುದರಿಂದ ಮನೆಯಲ್ಲಿ ಸಿದ್ಧ ಪಡಿಸಿದ ಆಹಾರ ಸೇವಿಸಲು ಅನುಮತಿ ಮಾಡಿ ಕೊಡಬೇಕು’ ಎಂದು ಪ್ರತಿಪಾದಿಸಿ ದ್ದರು. ಅದಕ್ಕೆ ಪ್ರತಿಯಾಗಿ ಮಹಾರಾಷ್ಟ್ರ ಸರ್ಕಾರ ಕೇಂದ್ರಕ್ಕೆ ವರದಿ ಸಲ್ಲಿಸಿದೆ.
ಆರ್ಬಿಐ, ಇ.ಡಿ.ಗೆ ಸಲ್ಲಿಕೆ: ಮತ್ತೂಂದು ಬೆಳವಣಿಗೆಯಲ್ಲಿ ಗಂಭೀರ ಆರೋಪಗಳ ತನಿಖಾ ವಿಭಾಗ (ಎಸ್ಎಫ್ಐಒ) ಕಿಂಗ್ಫಿಶರ್ ಏರ್ಲೈನ್ಸ್ ಮತ್ತು ಏರ್ಬಸ್ ನಡುವೆ ನಡೆದಿದ್ದ ವಿಮಾನ ಖರೀದಿಗೆ ಸಂಬಂಧಿಸಿದ ಹಣಕಾಸು ವಹಿವಾಟನ್ನು ಆರ್ಬಿಐ, ಇ.ಡಿ.ಗೆ ವಹಿಸಿದೆ. 2006ರಲ್ಲಿ ನಡೆದ ಈ ವಹಿ ವಾಟಿನಲ್ಲಿ ವಿದೇಶಿ ವಹಿವಾಟು ನಿರ್ವಹಣ ಕಾಯ್ದೆಯನ್ನು ಉಲ್ಲಂ ಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಆವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು