ತಮಿಳುನಾಡಲ್ಲಿ ಹೀಗೊಂದು ಮಾದರಿ ದೀಪಾವಳಿ!
Team Udayavani, Oct 20, 2017, 12:41 PM IST
ಚೆನ್ನೈ: ದೇಶದ ಪಟಾಕಿ ರಾಜಧಾನಿ ಯೆಂದೇ ಖ್ಯಾತಿ ಪಡೆದಿರುವ ತಮಿಳು ನಾಡು ರಾಜ್ಯದ ಹಲವೆಡೆ ಈ ಬಾರಿಯ ದೀಪಾವಳಿಯ ವೇಳೆ ಪಟಾಕಿ ಶಬ್ದವನ್ನು ನಿಲ್ಲಿಸಲಾಗಿದೆ. ಈ ಪಟಾಕಿ “ಹಠಾವೊ’ ನಿರ್ಧಾರ ಸರಕಾರಿ ಆದೇಶದಿಂದ ಆಗಿದ್ದಲ್ಲ, ಜನರೇ ಸ್ವಯಂಪ್ರೇರಿತರಾಗಿ ಕೈಗೊಂಡ ನಿರ್ಧಾರ. ಹಾಗಾಗಿ, ಈ ಬಾರಿಯ ದೀಪಾವಳಿ ಈ ಪ್ರದೇಶಗಳಲ್ಲಿ ಮಾದರಿ ದೀಪಾವಳಿ ಎಂದೆನಿಸಿದೆ. ಈ ರೀತಿ ಪಟಾಕಿ ನಿಷೇಧ ಜಾರಿ ಗೊಂಡಿರುವುದು ತಿರುನಲ್ವೇನಿ ಜಿಲ್ಲೆಯ ಕೂಥಂಕೂಳಂ, ಸೇಲಂ ಜಿಲ್ಲೆ ಯ ವಾ ವಲ್ ತೊಪ್ಪು, ಪೆರಂಬೂರು, ಕಂಚೀ ಪುರಂನ ವಿಶಾರ್ ಎಂಬ ಹಳ್ಳಿಗಳಲ್ಲಿ.
ಕೂಥಂಕೂಳಂ ಹಳ್ಳಿಯ ಬಳಿ ಪಕ್ಷಿಧಾಮವಿದೆ. ಅಲ್ಲಿ ಸಾಧಾರಣವಾಗಿ ಸೆಪ್ಟಂಬರ್, ಅಕ್ಟೋಬರ್, ನವೆಂಬರ್ ಮಾಸಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಗಳಿಂದ ಬಿಳಿ ಪೆಲಿಕನ್ ಹಕ್ಕಿಗಳು ವಲಸೆ ಬರುತ್ತವೆ. ಇದಲ್ಲದೆ ಫ್ಲಾಮಿಂಗೋ, ಸ್ಪನ್ಬಿಲ್, ಪೇಂಟೆಡ್ ಸ್ಟಾರ್ಕ್, ಎಗ್ರೆಟ್, ಡಕ, ಟೆರ್ನ್ ಹಾಗೂ ಐಬಿಎಸ್ನಂಥ ಅಪರೂಪದ ಪಕ್ಷಿಗಳು ಈ ಪಕ್ಷಿಧಾಮದಲ್ಲಿವೆ. ಆ ಪಕ್ಷಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಹಳ್ಳಿಯ ಜನರೇ ಪಟಾಕಿ ಸಿಡಿಸುವುದು ಬೇಡ ಎಂದು ನಿರ್ಧರಿಸಿದ್ದಾರೆ. ಯಾವುದೇ ಧಾರ್ಮಿಕ ಕಾರ್ಯ ಕ್ರಮಗಳಲ್ಲೂ ಧ್ವನಿವರ್ಧಕಗಳ ಬಳಸದಿರಲು ನಿರ್ಧರಿಸಲಾಗಿದೆ.
ಇದಲ್ಲದೆ, ವೇದಾಮುಗಮ್, ವೆಲ್ಲೂರ್, ಈರೋಡ್ಗಳಲ್ಲಿಯೂ ಪಟಾಕಿಗೆ ಸ್ವಯಂಪ್ರೇರಿತ ನಿಷೇಧ ಹೇರಲಾಗಿದೆ. ಆದರೆ, ಈ ಮೂರು ಹಳ್ಳಿಗಳ ವಿಶೇಷತೆಯೆಂದರೆ, ಇಲ್ಲಿ ಹೀಗೆ ಪಟಾಕಿ ನಿಷೇಧವಾಗುತ್ತಿರುವುದು ಸತತ 18ನೇ ದೀಪಾವಳಿಗೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ