ಮಧ್ಯಪ್ರದೇಶದ 16 ಲಕ್ಷ ರೈತರಿಗೆ ಭಾವಾಂತರ್ ಯೋಜನೆ ಲಾಭ
Team Udayavani, Oct 25, 2017, 3:44 PM IST
ಭೋಪಾಲ್ : ರೈತರ ಉತ್ಪನ್ನಗಳಿಗೆ ಮಾದರಿ ಬೆಲೆಯನ್ನು ನಿಗದಿಸಿ ಆ ಹಣವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡುವ ಮಧ್ಯಪ್ರದೇಶದ “ಭಾವಾಂತರ್’ ಯೋಜನೆ’ಯ ಲಾಭವನ್ನು ಮಧ್ಯಪ್ರದೇಶದ 16 ಲಕ್ಷಕ್ಕೂ ಅಧಿಕ ರೈತರು ಪಡೆಯಲಿದ್ದಾರೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ರೈತರ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆಯನ್ನು ನಿಗದಿಸಿ ಆ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಮಧ್ಯಪ್ರದೇಶ ಸರಕಾರದ ಯೋಜನೆಗೆ “ಭಾವಾಂತರ್’ ಎಂದು ಹೆಸರಿಡಲಾಗಿದೆ.
ಈ ಯೋಜನೆಯಡಿ ಸರಕಾರ ನಿಗದಿಸುವ ಮಾರುಕಟ್ಟೆ ಧಾರಣೆ ಮತ್ತು ಕನಿಷ್ಠ ಬೆಂಬಲ ಬೆಲೆ ನಡುವಿನ ಅಂತರವನ್ನು “ಮಾದರಿ ಬೆಲೆ’ ಎಂದು ಕರೆಯಲಾಗುತ್ತದೆ. ಇದನ್ನು ಸರಕಾರವು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡುತ್ತದೆ.
ಹದಿನಾರು ಲಕ್ಷಕ್ಕೂ ಅಧಿಕ ರೈತರು ಈಗಾಗಲೇ ಈ “ಭಾವಾಂತರ್’ ಯೋಜನೆಗೆ ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಈ ವಿಶಿಷ್ಟ ಯೋಜನೆಯನ್ನು ಮಧ್ಯಪ್ರದೇಶ ಸರಕಾರ ಜಾರಿ ಮಾಡುತ್ತಿದೆ.
ಡಿ.31ರಂದು ಸ್ಥಳೀಯ ಮಾರುಕಟ್ಟೆಗಳಲ್ಲಿ (ಮಂಡಿಗಳಲ್ಲಿ) ಮಾರಾಟ ಕಿಂಡಿ ಮುಚ್ಚಲ್ಪಟ್ಟಾಗ ಸರಕಾರ ಅಂದೇ ಮಾದರಿ ಬೆಲೆಯನ್ನು ಘೋಷಿಸುತ್ತದೆ ಎಂದು ಅಧಿಕಾರಿ ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ