ಲೆಕ್ಕದ ಶಿಕ್ಷಕಿ ಬೈದರೆಂದು ಕಟ್ಟಡದಿಂದ ಕೆಳ ಹಾರಿದ ವಿದ್ಯಾರ್ಥಿನಿ
Team Udayavani, Nov 6, 2017, 4:03 PM IST
ಹೈದರಾಬಾದ್ : ಲೆಕ್ಕದ ಶಿಕ್ಷಕಿ ತನ್ನನ್ನು ಸಹಪಾಠಿಗಳೆದುರು ಬೈದರೆಂಬ ಕಾರಣಕ್ಕೆ ಹತ್ತನೇ ತರಗತಿಯ 16 ವರ್ಷ ಪ್ರಾಯದ ವಿದ್ಯಾರ್ಥಿನಿ ನಗರ ಹೊರವಲಯದ ಸರಕಾರಿ ವಸತಿ ಶಾಲೆಯ ಕಟ್ಟಡದ ಒಂದನೇ ಮಹಡಿಯಿಂದ ಕೆಳಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
ಕಾಲಿಗೆ ತೀವ್ರವಾಗಿ ಗಾಯ ಉಂಟಾಗಿರುವ ಹುಡುಗಿಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ.
ಹುಡುಗಿಯ ತಂದೆ ಕೊಟ್ಟ ದೂರಿನ ಪ್ರಕಾರ ಪೊಲೀಸರು ಶಾಲೆಯ ಲೆಕ್ಕದ ಶಿಕ್ಷಕಿ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಶಂಶದಾಬಾದ್ ಪೊಲೀಸ್ ಠಾಣೆಯ ಎಸ್ಐ ಎಸ್ ಸುರೇಶ್ ತಿಳಿಸಿದ್ದಾರೆ.
ಹುಡುಗಿಯು ಆಸ್ಪತ್ರೆಯಲ್ಲೀಗ ಚೇತರಿಸಿಕೊಳ್ಳುತ್ತಿದ್ದು ಆಕೆಯ ದೇಹಾರೋಗ್ಯ ಸ್ಥಿರವಾಗಿದೆ; ನಾವೀಗ ಆರೋಪಿ ಶಿಕ್ಷಕಿಯನ್ನು ಪ್ರಶ್ನಿಸುವುದಕ್ಕೆ ಮುಂದಾಗಿದ್ದೇವೆ ಎಂದು ಸುರೇಶ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?