ಸೌದಿ ಭ್ರಷ್ಟ ನಿಗ್ರಹಕ್ಕೆ ಸೆನ್ಸೆಕ್ಸ್ ತಲ್ಲಣ
Team Udayavani, Nov 8, 2017, 7:05 AM IST
ಮುಂಬಯಿ: ಸೌದಿ ಅರೇಬಿಯಾದ ರಾಜಮನೆ ತನದ ಮಟ್ಟದಲ್ಲಿ ನಡೆದಿರುವ ಬೆಳವಣಿಗೆಗಳು ಮುಂಬೈ ಷೇರು ಪೇಟೆಯಲ್ಲೂ ಸಂಚಲನಕ್ಕೆ ಕಾರಣವಾಗಿದೆ. ಅರಬ್ ರಾಷ್ಟ್ರದ ವಿದ್ಯಮಾನಗಳಿಂದಾಗಿ ಕಚ್ಚಾ ತೈಲದ ದರ ಏರಿಕೆ ಆಗಲಿದೆಯೇ ಎಂಬ ಭೀತಿ ಹೂಡಿಕೆದಾರರಲ್ಲಿ ಮೂಡಿದ್ದು, ಬಹುತೇಕ ಮಂದಿ ಷೇರು ಮಾರಾಟದಲ್ಲಿ ತೊಡಗಿದರು.
ಪರಿಣಾಮ ಮಂಗಳವಾರ ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ 360 ಅಂಕಗಳ ಭಾರೀ ಕುಸಿತ ದಾಖಲಿಸಿ, 33,370ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿತು. ನಿಫ್ಟಿ 101 ಅಂಕ ಇಳಿಕೆಯಾಗಿ, 10,350ರಲ್ಲಿ ಅಂತ್ಯಗೊಂಡಿತು.
ಸೌದಿಯ ಭಾವೀ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ಲಿನ ಭ್ರಷ್ಟ ರಾಜಕುಮಾರರು, ಸಚಿವರ ವಿರುದ್ಧ ಕೈಗೊಂಡ ಕ್ರಮಗಳ ಪರಿಣಾಮ, ರಾತ್ರಿ ಬೆಳಗಾಗುವುದರೊಳಗೆ ಕಚ್ಚಾ ತೈಲದ ದರ ಶೇ.3.5 ರಷ್ಟು ಏರಿಕೆಯಾಗಿತ್ತು. ಜುಲೈ 2015ರ ನಂತರ ಇಷ್ಟೊಂದು ಏರಿಕೆ ಆಗಿದ್ದು ಇದೇ ಮೊದಲು. ತೈಲ ದರದ ಏರಿಕೆ ಭಾರತದಂತಹ ತೈಲ ಆಮದು ಮಾಡುವ ದೇಶಗಳಿಗೆ ಸಮಸ್ಯೆ ಆಗಲಿದ್ದು, ಹಣದುಬ್ಬರ, ವಿತ್ತೀಯ ಲೆಕ್ಕಾಚಾರದಲ್ಲಿ ಅಲ್ಲೋಲಕಲ್ಲೋಲ ಉಂಟಾಗುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
MUST WATCH
ಹೊಸ ಸೇರ್ಪಡೆ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ