ಒಡಿಶಾ ಜತೆ ಸಿಹಿ ಸಮರ: ಬಂಗಾಲಕ್ಕೆ ರಸಗುಲ್ಲ !
Team Udayavani, Nov 15, 2017, 6:00 AM IST
ಕೋಲ್ಕತಾ/ಚೆನ್ನೈ: ರಸಗುಲ್ಲ ನಮ್ಮ ರಾಜ್ಯದಲ್ಲಿಯೇ ಮೊದಲು ಸಿದ್ಧವಾದದ್ದು’ ಹೀಗೆಂದು ಎರಡು ವರ್ಷಗಳಿಂದ ಒಡಿಶಾ ಮತ್ತು ಪಶ್ಚಿಮ ಬಂಗಾಲ ಕೋಳಿ ಜಗಳ ಮಾಡಿಕೊಳ್ಳುತ್ತಿದ್ದವು. ಈಗ ಅವೆಲ್ಲದಕ್ಕೂ ಬ್ರೇಕ್ ಬಿದ್ದಿದೆ. ರಸಗುಲ್ಲ ಪಶ್ಚಿಮ ಬಂಗಾಲದ ಸಾಂಪ್ರ ದಾಯಿಕ ತಿನಿಸು ಎಂದು ಚೆನ್ನೈಯಲ್ಲಿರುವ ಜಿಯೋಗ್ರಾಫಿಕಲ್ ಇಂಡಿಕೇಷನ್ ಸಂಸ್ಥೆ ತಿಳಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಈ ಬೆಳವಣಿಗೆ ಖುಷಿ ತಂದಿದೆ.
ಈ “ಸಿಹಿ ಸಮರ’ದ ಹಿಂದೆ 2 ವರ್ಷಗಳ ರೋಚಕ ಕತೆಯಿದೆ. 2015ರಲ್ಲಿ ಒಡಿಶಾ ಸರಕಾರ ರಸಗುಲ್ಲವನ್ನು ಸಾಂಪ್ರದಾಯಿಕ ಸಿಹಿಯೆಂದು ಘೋಷಿಸಲು ಮುಂದಾಯಿತು. ಅದರ ವಿರುದ್ಧ ಪಶ್ಚಿಮ ಬಂಗಾಲ ಸರಕಾರ ಆಕ್ಷೇಪ ಮಾಡಿ, ತಗಾದೆ ತೆಗೆಯಿತು. ಆದರೆ ಹಠಬಿಡದ ಒಡಿಶಾ, ರಸಗುಲ್ಲ ಮೂಲವನ್ನು ಕೆದಕಲು ಹಲವು ಸಮಿತಿಗಳನ್ನು ರಚಿಸಿತು. ಜು. 30ರಂದು “ರಸಗುಲ್ಲ ದಿನ’ ಎಂದು ಆಚರಿಸುವುದಾಗಿಯೂ ಘೋಷಿಸಿತು.
ಇದಕ್ಕೆ ಪ್ರತಿಯಾಗಿ, ಪಶ್ಚಿಮ ಬಂಗಾಲವೂ ರಸಗುಲ್ಲ ಮೂಲ ಪತ್ತೆಗೆ ಸಮಿತಿ ರಚಿಸಿತು. 1868ರಲ್ಲಿ ನಬೀನ್ ಚಂದ್ರದಾಸ್ ಎಂಬ ಪ್ರಖ್ಯಾತ ಬಾಣಸಿಗ ಅದನ್ನು ಆವಿಷ್ಕರಿಸಿದರು ಎನ್ನುವ ಅಂಶವನ್ನು ಕಂಡುಕೊಂಡಿತು. ಜತೆಗೆ ಪಶ್ಚಿಮ ಬಂಗಾಲ ಮತ್ತು ಒಡಿಶಾ ಜಿಐ ರಿಜಿಸ್ಟ್ರಿ ಕಚೇರಿಗೆ ರಸಗುಲ್ಲ ಮೇಲೆ ತಮ್ಮ ಹಕ್ಕುಸ್ವಾಮ್ಯ ಸಾಧಿಸಲು ಅಹವಾಲು ಸಲ್ಲಿಸಿದ್ದವು.
ಒಡಿಶಾ ಮುಂದಿಟ್ಟಿದ್ದ ವಾದವೇನು ?
“ರಸಗುಲ್ಲ’ ತನ್ನದೆಂದು ಹೇಳಲು ಒಡಿಶಾ ಸರಕಾರ ಪುರಾಣದ ಕಥೆಯೊಂದನ್ನು ಆಧಾರವಾಗಿಟ್ಟುಕೊಂಡಿತ್ತು. ಒಡಿಶಾದಲ್ಲಿರುವ ಪುರಿಯ ಜಗನ್ನಾಥ ದೇಗುಲದಲ್ಲಿ ನೆಲೆನಿಂತಿದ್ದ ಶ್ರೀ ಜಗನ್ನಾಥನು ತನ್ನ ಪತ್ನಿಯಾದ ಲಕ್ಷ್ಮೀಯ ಸಮ್ಮತಿಯಿಲ್ಲದೇ 9 ದಿನಗಳ ರಥಯಾತ್ರೆಗೆ ಹೋಗಿಬಂದಿದ್ದ. ಆಗ ಮುನಿಸಿಕೊಂಡಿದ್ದ ಲಕ್ಷ್ಮೀಯು ದೇಗುಲದ ಬಾಗಿಲನ್ನು ತೆರೆಯದೆ ಸತಾಯಿಸಿದ್ದಳು. ಆಕೆಯ ಮನವೊಲಿಸುವ ಸಲುವಾಗಿ ರಸಗುಲ್ಲ ಸೃಷ್ಟಿಸಿಕೊಟ್ಟಿದ್ದ. ಇದರ ಕುರುಹಾಗಿ ಈಗಲೂ ಪುರಿ ದೇಗುಲದಲ್ಲಿ ನೈವೇದ್ಯಕ್ಕೆ ರಸಗುಲ್ಲಗಳನ್ನೇ ಇಡುವ ಸಂಪ್ರದಾಯ ಶತಮಾನಗಳಿಂದ ಚಾಲ್ತಿಯಲ್ಲಿದೆ. ಹಾಗಾಗಿ, ಈ ಸಿಹಿ ನಮ್ಮದೇ ಎಂದು ಒಡಿಶಾ ವಾದ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ