“ಪದ್ಮಾವತಿ’ ಬಗ್ಗೆ ಜೋಶಿ ಕಿಡಿ
Team Udayavani, Nov 19, 2017, 6:20 AM IST
ಮುಂಬಯಿ: “ಪದ್ಮಾವತಿ’ ಸಿನೆಮಾ ವಿವಾದ ಸದ್ಯಕ್ಕಂತೂ ತಣ್ಣಗಾಗು ವಂತೆ ಕಾಣುತ್ತಿಲ್ಲ. ಪ್ರಮಾಣಪತ್ರಕ್ಕೆಂದು ಬಂದಿದ್ದ ಸಿನೆಮಾ ವನ್ನು ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ವಾಪಸ್ ಕಳುಹಿಸಿದ ಬೆನ್ನಲ್ಲೇ ಸಿಬಿಎಫ್ಸಿ ಮುಖ್ಯಸ್ಥ ಪ್ರಸೂನ್ ಜೋಶಿ ಅವರು ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಮಾಣ ಪತ್ರವನ್ನು ವಿತರಿಸುವ ಮೊದಲೇ ಚಿತ್ರದ ಸ್ಕ್ರೀನಿಂಗ್ ಮಾಡುತ್ತಿರುವುದೇಕೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸೆನ್ಸಾರ್ ಸರ್ಟಿಫಿಕೇಟ್ ಸಿಗುವ ಮುನ್ನವೇ ಪದ್ಮಾವತಿ ನಿರ್ಮಾಪಕರು ಚಿತ್ರ ವನ್ನು ಮಾಧ್ಯಮಗಳ ಮುಂದೆ ಸ್ಕ್ರೀನಿಂಗ್ ಮಾಡಿದ್ದಾರೆ. ಅಲ್ಲದೆ, ಚಿತ್ರಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕರ್ಣಿ ಸೇನಾ ಸದಸ್ಯ ರಿಗೂ ಚಿತ್ರವನ್ನು ಪ್ರದರ್ಶಿ ಸಲು ಸಿದ್ಧತೆ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಸಿಬಿಎಫ್ಸಿ ಮುಖ್ಯಸ್ಥ ಜೋಶಿ ಕೆಂಡವಾಗಿ ದ್ದಾರೆ. “ಸಿಬಿಎಫ್ಸಿ ಪ್ರಮಾಣಪತ್ರ ನೀಡುವ ಮೊದಲೇ ಮಾಧ್ಯಮಗಳಿಗೆ ಚಿತ್ರವನ್ನು ಪ್ರದರ್ಶಿಸ ಲಾಗಿದೆ. ಕೆಲವು ರಾಷ್ಟ್ರೀಯ ಚಾನೆಲ್ಗಳಲ್ಲಿ ಸಿನೆಮಾ ವಿಮರ್ಶೆಯೂ ಪ್ರಕಟ ವಾಗಿದೆ. ಇದು ಅತ್ಯಂತ ನಿರಾಶಾ ದಾಯಕ ವಿಚಾರ. ಸಿನೆಮಾ ಬಿಡುಗಡೆಗೆ ನಿರ್ದಿಷ್ಟ ವ್ಯವಸ್ಥೆಯೊಂದಿರುವಾಗ, ಅದರೊಂದಿಗೆ ರಾಜಿ ಮಾಡಿಕೊಳ್ಳುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ್ದಾರೆ.
ಮತ್ತೂಂದು ಕೋಟೆ ಪ್ರವೇಶಕ್ಕೂ ತಡೆ ಈ ನಡುವೆ, ಶುಕ್ರವಾರ ರಾಜಸ್ಥಾನದ ಜೈಪುರದ ಚಿತ್ತೋರ್ಗಢ ಕೋಟೆ ಪ್ರವೇಶಕ್ಕೆ ತಡೆ ನೀಡಿದ್ದ ಕರ್ಣಿ ಸೇನಾ ಸದಸ್ಯರು ಶನಿವಾರ ಇಲ್ಲಿನ ಮತ್ತೂಂದು ಕೋಟೆ ಯಾದ ಕುಂಭಳಗಢದ ಪ್ರವೇಶಕ್ಕೂ ಪ್ರವಾಸಿಗರಿಗೆ ಅವಕಾಶ ನೀಡದೇ ಪ್ರತಿಭಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ