ಸೀರೆಯಲ್ಲಿ ರಾಮಾಯಣ
Team Udayavani, Nov 24, 2017, 6:10 AM IST
ಕೃಷ್ಣಾನಗರ (ಪಶ್ಚಿಮ ಬಂಗಾಲ): ಸುಮಾರು 20 ವರ್ಷಗಳ ಹಿಂದೆ ರಾಮಾಯಣದ ಏಳು ಪ್ರಮುಖ ಪ್ರಸಂಗಗಳನ್ನು 9 ಗಜ ಸೀರೆಯ ಮೇಲೆ ಮುದ್ರಿಸುವಲ್ಲಿ ಯಶಸ್ವಿಯಾಗಿದ್ದ ಇಲ್ಲಿನ ನಾಡಿಯಾ ಜಿಲ್ಲೆಯ ಬಿರೇನ್ ಕುಮಾರ್ ಬಾಸಕ್ ಎಂಬ ನೇಕಾರನಿಗೆ ಲಂಡನ್ನ ವಿಶ್ವವಿದ್ಯಾಲಯ ವೊಂದು ಗೌರವ ಡಾಕ್ಟರೇಟ್ ನೀಡಿದೆ. ಹೊಸದಿಲ್ಲಿ ಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿರೇನ್ಗೆ ಯುಕೆಯ ವರ್ಲ್x ರೆಕಾರ್ಡ್ ವಿಶ್ವವಿದ್ಯಾಲಯ ಈ ಗೌರವ ನೀಡಿ ಸನ್ಮಾನಿಸಿದೆ.
ಸೀರೆ ತಯಾರಿಕೆಯ ಸ್ವರ್ಗ ನಾಡಿಯಾ ಜಿಲ್ಲೆಯ ಫುಲಿಯಾ ಹಳ್ಳಿಯ ಬಾಸಕ್ ಅವರಿಗೆ, 23 ವರ್ಷಗಳ ಹಿಂದೆ ಇಂಥದ್ದೊಂದು ಸೀರೆ ತಯಾರಿಸುವ ಪರಿಕಲ್ಪನೆ ಬಂದಿತ್ತಂತೆ. ಒಂದು ವರ್ಷದ ಯೋಜನೆ, 2 ವರ್ಷಗಳ ನೇಯ್ಗೆಯ ಅನಂತರ 1996ರಲ್ಲಿ ಸೀರೆ ಸಿದ್ಧವಾಗಿತ್ತು. ಆಗಲೇ, ರಾಷ್ಟ್ರವ್ಯಾಪಿ ಮೆಚ್ಚುಗೆಗೆ ಪಾತ್ರವಾಗಿದ್ದ ಬಾಸಕ್, ಈ ಕೆಲಸಕ್ಕಾಗಿ ರಾಷ್ಟ್ರ ಪ್ರಶಸ್ತಿ, ರಾಷ್ಟ್ರೀಯ ಮೆರಿಟ್ ಸರ್ಟಿಫಿಕೇಟ್, ಸಂತ ಕಬೀರ ಪ್ರಶಸ್ತಿಗಳನ್ನು ಪಡೆದಿದ್ದರು. ಈ ಕೆಲಸ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಯೂನಿಕ್ ರೆಕಾರ್ಡ್ಸ್ಗೂ ಸೇರ್ಪಡೆ ಗೊಂಡಿತ್ತು. ಇದೀಗ, 20 ವರ್ಷಗಳ ನಂತರ ಗೌರವ ಡಾಕ್ಟರೇಟ್ ಅನ್ನೂ ತಂದುಕೊಟ್ಟಿದೆ. ವರ್ಲ್ಡ್ ರೆಕಾರ್ಡ್ಸ್ ವಿವಿ ಈ ಸೀರೆ ಬಗ್ಗೆ ಮಹಾ ಪ್ರಬಂಧವನ್ನೂ ರಚಿಸಿದೆ. ತಮ್ಮ ಈ ಪ್ರಯೋಗಶೀಲತೆಯನ್ನು ಹಣಕ್ಕೆ ಮಾರಿಕೊಳ್ಳ ಲೊಲ್ಲದ ಬಾಸಕ್, ಈ ಹಿಂದೆ ಮುಂಬಯಿನ ಕಂಪೆನಿಯೊಂದು ಈ ಸೀರೆಗೆ ನೀಡಿದ್ದ 8 ಲಕ್ಷ ರೂ.ಗಳ ಆಫರ್ ಅನ್ನೂ ತಿರಸ್ಕರಿಸಿದ್ದರಂತೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ