ಜೆಹಾದ್ಗೆ ಸೇರಲು ಭಾರತೀಯ ಮುಸ್ಲಿಮರಿಗೆ ಅಲ್ ಕಾಯಿದಾ ಕರೆ
Team Udayavani, Dec 7, 2017, 6:05 AM IST
ಶ್ರೀನಗರ: ದೇಶದಲ್ಲಿ ಭೀತಿವಾದ ಹರಡಲು ಅವಕಾಶಗಳನ್ನು ಹುಡುಕುತ್ತಿರುವ ಉಗ್ರ ಸಂಘಟನೆಗಳು ಬಾಬರಿ ಮಸೀದಿ ಧ್ವಂಸಕ್ಕೆ 25 ವರ್ಷ ತುಂಬಿರುವುದನ್ನು ಮುಂದಿಟ್ಟು ಭಾರತೀಯ ಮುಸ್ಲಿಮರನ್ನು ರೊಚ್ಚಿಗೆಬ್ಬಿಸಲು ಯತ್ನಿಸುತ್ತಿವೆ. ಅಲ್ಕಾಯಿದಾ ಸಂಘಟನೆಯ ಅಂಗವಾದ ಕಾಶ್ಮೀರ ಮೂಲದ ಅನ್ಸರ್ ಘಜ್ವತುಲ್ ಹಿಂದ್ ಸಂಘಟನೆಯು ಭಾರತೀಯ ಮುಸ್ಲಿಮರಿಗೆ ಜೆಹಾದ್ ಸೇರಲು ಆಗ್ರಹಿಸಿದೆ. ಬಾಬರಿ ಮಸೀದಿ ನಾಶವನ್ನು ಸಂಪೂರ್ಣ ಮುಸ್ಲಿಮರ ನಾಶವೆಂದೇ ಅರ್ಥೈಸಿರುವ ಸಂಘಟನೆ, ಹಿಂದೂಗಳ ವಿರುದ್ಧ ಹರಿಹಾಯ್ದಿದೆ.
ಈ ಕುರಿತು ಅಲ್ ಕಾಯಿದಾ ಮುಖಂಡ ಎನ್ನಲಾದ ಸುಲ್ತಾನ್ ಝಬುಲ್ ಹಿಂದಿಯಲ್ಲಿ ಸಂದೇಶವನ್ನೂ ನೀಡಿದ್ದಾನೆ. ಭಾಷೆ ಉಚ್ಚರಣೆಯಿಂದ ಈತ ಕಾಶ್ಮೀರ ಮೂಲದ ವ್ಯಕ್ತಿ ಅಲ್ಲ ಎಂಬುದು ತಿಳಿಯುತ್ತದೆ.
ಇದು ಹಿಜ್ಬುಲ್ ಮುಜಾಹಿದೀನ್ ಮತ್ತು ಲಷ್ಕರ್-ಎ-ತಯ್ಯಬಾ ಸಂಘಟನೆಗಳಿಂದ ವಿಮುಖವಾಗಿ ಅಲ್ ಕಾಯಿದಾ ಸೇರಿದವರು ಹೊಸದಾಗಿ ಸೃಷ್ಟಿಸಿ ಕೊಂಡಿರುವ ಸಂಘಟನೆಯಾಗಿದ್ದು, ಝಾಕೀರ್ ಭಟ್ ಅಲಿಯಾಸ್ ಝಾಕೀರ್ ಮೂಸಾ ಇದರ ನಾಯಕ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
MUST WATCH
ಹೊಸ ಸೇರ್ಪಡೆ
Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ